‘ಕೇದಾರ್ನಾಥ್ ಕುರಿ ಫಾರಂ’ ಚಿತ್ರದ ದೃಶ್ಯ
ಮೈಸೂರು: ‘ಜೆ.ಕೆ.ಮೂವೀಸ್ ಬ್ಯಾನರ್ನಲ್ಲಿ ನಿರ್ಮಾಣಗೊಂಡಿರುವ ‘ಕೇದಾರ್ನಾಥ್ ಕುರಿ ಫಾರಂ’ ಚಲನಚಿತ್ರವು ಸೆ.27ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ’ ಎಂದು ನಿರ್ದೇಶಕ ಶೀನು ಸಾಗರ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರವು ಗ್ರಾಮೀಣ ಹಿನ್ನೆಲೆಯ ಹಾಸ್ಯಮಯ ಕಥೆ ಹೊಂದಿದೆ. ಸಕಲೇಶಪುರ, ಸಾವನದುರ್ಗ, ಮಾಗಡಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದು ಹಾಡು ಮತ್ತು ಸಾಹಸ ದೃಶ್ಯವಿದ್ದು, ಅದ್ಭುತವಾಗಿ ಮೂಡಿಬಂದಿದೆ. ಕುಟುಂಬ ಸಮೇತರಾಗಿ ಪ್ರತಿಯೊಬ್ಬರೂ ನೋಡುವ ಚಿತ್ರವಿದು’ ಎಂದರು.
‘ಕಲಾವಿದ ಟೆನ್ನಿಸ್ ಕೃಷ್ಣ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ನಟರಾದ ಮಡೆನೂರು ಮನು ಹಾಗೂ ಶಿವಾನಿ ಮೊದಲ ಬಾರಿ ನಾಯಕ, ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಮನರಂಜನೆಯೊಂದಿಗೆ ಜನರಿಗೆ ಉತ್ತಮ ಸಂದೇಶವಿದ್ದು, ಎಲ್ಲರೂ ಚಲನಚಿತ್ರ ನೋಡಿ ಪ್ರೋತ್ಸಾಹಿಸಿ’ ಎಂದು ಮನವಿ ಮಾಡಿದರು.
ನಿರ್ಮಾಪಕ ಕೆ.ಎಂ.ನಾಗರಾಜ್, ಸಹ ನಿರ್ದೇಶಕ ರಾಜೇಶ್ ಸಾಲುಂಡಿ, ನಟರಾದ ಹರಿಣಿ, ಸಿದ್ದು ಮಂಡ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.