ಬದುಕಿನಲ್ಲಿ ಖ್ಯಾತಿ ಪಡೆದ, ಸಮಸ್ಯೆ ಎದುರಿಸಿದ ನಟಿ, ನಿರೂಪಕಿ ಚೈತ್ರಾ ಕೋಟೂರ್ ಈಗ ಅಧ್ಯಾತ್ಮದತ್ತ ಹೊರಳಿದ್ದಾರೆ. ಓಶೋ ಧ್ಯಾನ ಶಿಬಿರದಲ್ಲಿರುವ ಚಿತ್ರಗಳನ್ನು ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ತಮ್ಮನ್ನು ಮಾ ಪ್ರಗ್ಯಾ ಭಾರತಿ ಎಂದು ಕರೆದುಕೊಂಡಿದ್ದಾರೆ. ಚಿತ್ರವೊಂದರ ಶೀರ್ಷಿಕೆಯಲ್ಲಿ, ‘ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ’ ಎಂದು ಬರೆದುಕೊಂಡಿದ್ದಾರೆ.
ಕಳೆದ ವರ್ಷ ಚೈತ್ರಾ ಅವರು ಉದ್ಯಮಿ ನಾಗಾರ್ಜುನ್ ಅವರೊಂದಿಗೆ ವಿವಾಹ ಮಾಡಿಕೊಂಡಿದ್ದರು. ಅದು ವಿವಾದಕ್ಕೊಳಗಾಗಿ ಠಾಣೆಯ ಮೆಟ್ಟಿಲೇರಿತ್ತು. ಕೆಲ ದಿನಗಳ ಬಳಿಕ ಅವರು ಆತ್ಮಹತ್ಯೆಗೂ ಯತ್ನಿಸಿದ್ದರು.
ಕೆಲಕಾಲ ಎಲ್ಲರಿಂದಲೂ ದೂರವಿದ್ದ ಚೈತ್ರಾ ಅವರು ಈಗ ಅಧ್ಯಾತ್ಮ ಶಿಬಿರ ಸೇರಿ ಮತ್ತೆ ಸುದ್ದಿಯಲ್ಲಿದ್ದಾರೆ.
ಚೈತ್ರಾ ಕೋಟೂರ್ ಪೋಸ್ಟ್ ನೋಡಲು ಲಿಂಕ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.