ADVERTISEMENT

ಹೋರಾಟದ ದಿನಗಳನ್ನು ನೆನಪಿಸಿದ ‘ವೀರ ಭಾರತಿ’

ಕೃಷ್ಣಿ ಶಿರೂರ
Published 26 ಆಗಸ್ಟ್ 2023, 23:30 IST
Last Updated 26 ಆಗಸ್ಟ್ 2023, 23:30 IST
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿಯ ಕಲಾಸುಜಯ ಸಂಸ್ಥೆಯ 75 ವರ್ಷದವರೆಗಿನ 75 ಕಲಾವಿದರ ತಂಡ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪ್ರದರ್ಶಿಸಿದ ‘ವೀರಭಾರತಿ’ ನೃತ್ಯರೂಪಕ
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿಯ ಕಲಾಸುಜಯ ಸಂಸ್ಥೆಯ 75 ವರ್ಷದವರೆಗಿನ 75 ಕಲಾವಿದರ ತಂಡ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪ್ರದರ್ಶಿಸಿದ ‘ವೀರಭಾರತಿ’ ನೃತ್ಯರೂಪಕ    ಚಿತ್ರಗಳು: ಹರ್ಷದ್‌ ಕಾಮತ್‌

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಹಿಳೆಯರದ್ದು ಪ್ರಮುಖ ಪಾತ್ರವಿದೆ. ಅದನ್ನು ಸಂಕ್ಷಿಪ್ತವಾಗಿ ತಿಳಿಪಡಿಸಲು ಹುಬ್ಬಳ್ಳಿಯ ಕಲಾಸುಜಯ ಸಂಸ್ಥೆಯ 75 ವರ್ಷದವರೆಗಿನ 75 ಕಲಾವಿದರ ತಂಡ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ‘ವೀರಭಾರತಿ’ ನೃತ್ಯರೂಪಕ ಪ್ರದರ್ಶಿಸಿತು.

ಒಂದೂವರೆ ಗಂಟೆ ಅವಧಿಯ ಈ ನೃತ್ಯರೂಪಕವು ಹೋರಾಟದ ದಿನಗಳನ್ನು ನೆನಪಿಗೆ ತಂದಿತು ಅಲ್ಲದೇ ಮಹಿಳೆಯರ ತ್ಯಾಗ, ಸಂಘರ್ಷ ಮತ್ತು ಆಕ್ರೋಶವನ್ನು ಅನಾವರಣಗೊಳಿಸಿತು.

ಹೋರಾಟದ ಒಂದು ಕಥೆಯಿಂದ ಮತ್ತೊಂದು ಸಾಗುವಾಗ ಸಿಗುವ ಮೂರು–ನಾಲ್ಕು ನಿಮಿಷದ ಕನಿಷ್ಠ ಕಾಲಾವಕಾಶದಲ್ಲಿ ಪಾತ್ರಕ್ಕೆ ತಕ್ಕ ವೇಷಭೂಷಣ ಬದಲಾಯಿಸಿ ಪಾತ್ರಕ್ಕೆ ತಕ್ಕಂತೆ ಕಲಾವಿದರು ಹೊಂದಿಕೊಳ್ಳುವುದು ಅಚ್ಚರಿ ಮೂಡಿಸುತ್ತದೆ.

ADVERTISEMENT

ವಿದ್ವಾನ್ ವಿ.ವಿ.ಗೋಪಾಲರ ಸಾಹಿತ್ಯ, ಸುಜಯ ಶಾನಭಾಗ ಅವರ ಪರಿಕಲ್ಪನೆ–ನೃತ್ಯ ಸಂಯೋಜನೆ, ನಟನೆ, ವಿ.ಪ್ರವೀಣ ಡಿ. ರಾವ್‌ ಅವರ ಸಂಗೀತ, ಕಿರಣರಾಮ್‌ ಅವರ ಕಥಾಮಾಲಿಕೆ, ಸೂರ್ಯರಾವ್‌ ಲೈಟಿಂಗ್‌, ಪ್ರಭಾತ್‌ ಸ್ಟುಡಿಯೊ ಧ್ವನಿಮುದ್ರಣದೊಂದಿಗೆ ಇಡೀ ನೃತ್ಯರೂಪಕ ಜೀವಕಳೆ ಪಡೆದಿದೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿಯ ಕಲಾಸುಜಯ ಸಂಸ್ಥೆಯ 75 ವರ್ಷದವರೆಗಿನ 75 ಕಲಾವಿದರ ತಂಡ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪ್ರದರ್ಶಿಸಿದ  ‘ವೀರಭಾರತಿ’ ನೃತ್ಯರೂಪಕ 
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿಯ ಕಲಾಸುಜಯ ಸಂಸ್ಥೆಯ 75 ವರ್ಷದವರೆಗಿನ 75 ಕಲಾವಿದರ ತಂಡ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪ್ರದರ್ಶಿಸಿದ ‘ವೀರಭಾರತಿ’  ನೃತ್ಯರೂಪಕ 
ವೀರ ಭಾರತಿ ನೃತ್ಯರೂಪಕದ ಕಲಾವಿದರು 
ವೀರ ಭಾರತಿ ನೃತ್ಯರೂಪಕದಲ್ಲಿ ಸಾಲು ಮರದ ತಿಮ್ಮಕ್ಕಳಾಗಿ ಸುಜಯ ಶಾನಭಾಗ 
 ವೀರ ಭಾರತಿ ನೃತ್ಯ ರೂಪಕದ ದೃಶ್ಯ
ಭಾರತ ಮಾತೆಯಾಗಿ ವಿದ್ವಾನ್‌ ಸುಜಯ ಶಾನಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.