ಬೆಂಗಳೂರಿನಲ್ಲಿ ಸಾಕಷ್ಟು ಹವ್ಯಾಸಿ ರಂಗತಂಡಗಳಿವೆ. ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಕಲಾವಿದರು, ತಂತ್ರಜ್ಞರು, ಬರಹಗಾರರು, ನೇಪಥ್ಯ ಕಲಾವಿದರು ಹೀಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಎಲ್ಲರನ್ನು ಒಟ್ಟುಗೂಡಿಸುವ ಸಲುವಾಗಿ ವಿಶ್ವಪಥ ಕಲಾ ಸಂಗಮ ತಂಡವು ಬಸವನಗುಡಿಯಲ್ಲಿರುವ ಎಪಿಎಸ್ ಕಾಲೇಜು ಮೈದಾನದಲ್ಲಿ ರಂಗಭೂಮಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದೆ. ಹದಿನಾರು ರಂಗ ತಂಡಗಳು ಭಾಗವಹಿಸುತ್ತಿವೆ.
ಪಂದ್ಯಾವಳಿ ಉದ್ಘಾಟನೆ: ಶನಿವಾರ ಬೆಳಿಗ್ಗೆ 6.30ಕ್ಕೆ ಸಂಚಾರಿ ವಿಜಯ್ ಅವರಿಂದ, ಅತಿಥಿ–ಸಪ್ತಮ್ ಫುಡ್, ಬೆವರೇಜಸ್ ಸಂಸ್ಥಾಪಕ ಮನೋಹರ್ ಅಯ್ಯರ್,ಜೂನ್ 1 ಮತ್ತು 2ರಂದುಬೆಳಿಗ್ಗೆ 6.30ರಿಂದ ಸಂಜೆ 6.30ರವರೆಗೆ, ಉಚಿತ ಪ್ರವೇಶ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.