ADVERTISEMENT

ಜೊತೆ ಜೊತೆಯಲಿ ಧಾರಾವಾಹಿ: ಅನಿರುದ್ಧ್ ಬದಲು ಅನೂಪ್ ಭಂಡಾರಿ ಸಾಧ್ಯತೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2022, 10:55 IST
Last Updated 22 ಆಗಸ್ಟ್ 2022, 10:55 IST
 ಅನಿರುದ್ಧ್, ಅನೂಪ್‌
ಅನಿರುದ್ಧ್, ಅನೂಪ್‌   

‘ಜೊತೆ ಜೊತೆಯಲಿ' ಧಾರಾವಾಹಿ ತಂಡ ಮತ್ತು ನಟ ಅನಿರುದ್ಧ್ ನಡುವೆ ಸಂಘರ್ಷ ಉಂಟಾಗಿದ್ದು ಸದ್ಯ ಸಮಸ್ಯೆ ಬಗೆಹರಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಧಾರಾವಾಹಿ ತಂಡ ನಟ ಅನಿರುದ್ಧ್ ವಿರುದ್ಧ ಗರಂ ಆಗಿದ್ದು ಅವರನ್ನು ಬದಲಾಯಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಧಾರಾವಾಹಿಯ ಮೂಲಗಳ ಪ್ರಕಾರ ಅನಿರುದ್ಧ್ ಬದಲು ನಿರ್ದೇಶಕಅನೂಪ್ ಭಂಡಾರಿ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈ ಬಗ್ಗೆ ಅನೂಪ್‌ ಭಂಡಾರಿ ಕಡೆಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ADVERTISEMENT

ಧಾರಾವಾಹಿ ನಿರ್ದೇಶಕ ಹಾಗೂ ನಿರ್ಮಾಪಕರು ಸುದ್ದಿಗೋಷ್ಟಿ ಮಾಡಿ ಅನಿರುದ್ಧ್ ವಿರುದ್ಧ ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅನಿರುದ್ಧ್ ಕೂಡ ಸ್ಪಷ್ಟನೆ ನೀಡಿದ್ದರು. ಅಂತಿಮವಾಗಿ 'ಜೊತೆ ಜೊತೆಯಲಿ' ಧಾರವಾಹಿ ವೀಕ್ಷಕರು ಮುಂದೆ ಆರ್ಯವರ್ದನ್‌ ಆಗಿ ಯಾರು ಬರಲಿದ್ದಾರೆ ಎಂದು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.