ಹದಿನೆಂಟು ತಿಂಗಳ ಹಿಂದೆ ಕನ್ನಡಿಗರಿಂದ, ಕನ್ನಡಿಗರಾಗಿ ಆರಂಭವಾದ ‘ಸಿರಿ ಕನ್ನಡ’ ವಾಹಿನಿಯು ಸೂಪರ್ ಹಿಟ್ ಚಲನಚಿತ್ರಗಳುಹಾಗೂ ವಿಭಿನ್ನ ಕಾರ್ಯಕ್ರಮಗಳ ಪ್ರಸಾರದಿಂದವೀಕ್ಷಕರಿಗೆ ಭರಪೂರ ಮನರಂಜನೆ ನೀಡಿತ್ತು. ಕಿರುತೆರೆ ವೀಕ್ಷಕರ ಮನಗೆಲ್ಲಲು ವಾಹಿನಿ ಹೊಸ ನಾಲ್ಕು ಧಾರಾವಾಹಿಗಳನ್ನು ಆರಂಭಿಸಿದೆ. ಇದೇ ಜೂನ್ 22ರಿಂದ ಈ ಧಾರಾವಾಹಿಗಳ ಪ್ರಸಾರ ಆರಂಭವಾಗಿದ್ದು,ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ರಿಂದ 9.30ರವರೆಗೆ ಪ್ರಸಾರವಾಗಲಿವೆ.
ರಾತ್ರಿ 7:30ಕ್ಕೆ ‘ಅಗ್ನಿನಕ್ಷತ್ರ’ ಪ್ರಸಾರವಾಗುತ್ತಿದ್ದು,ಪ್ರೀತಿಯ ವಿಭಿನ್ನ ಆಯಾಮಗಳನ್ನು ಈ ಧಾರಾವಾಹಿಯ ಕಥೆ ಪರಿಚಯಿಸಲಿದೆ.
ರಾತ್ರಿ 8 ಗಂಟೆಗೆ ಪ್ರಸಾರವಾಗುವ ‘ತರಂಗಿಣಿ’ ಧಾರಾವಾಹಿ ಮೂವರು ಗೆಳತಿಯರ ಜೀವನ ಸಂಘರ್ಷದ ಕಥೆಯನ್ನು ತೆರೆದಿಡಲಿದೆ.
ರಾತ್ರಿ 8:30ಕ್ಕೆ ಪ್ರಸಾರವಾಗುವ ‘ಜಗದೇಕವೀರ’ ಧಾರಾವಾಹಿ ವಿಶಿಷ್ಟ ಸೋಷಿಯೋ ಫ್ಯಾಂಟಸಿ ಕಥೆ ಹೊಂದಿದೆ. ಈ ಧಾರಾವಾಹಿಯ ಶೀರ್ಷಿಕೆಗೆ ಅಡಿಬರಹವಾಗಿ‘ಜೊತೆಯಲಿ ಸುಂದರಿ’ ಇರಲಿದ್ದು, ಧಾರಾವಾಹಿಯ ಸಂಚಿಕೆಗಳು ಆಸಕ್ತಿ ಮೂಡಿಸುವಂತಿವೆ.
ರಾತ್ರಿ 9 ಗಂಟೆಗೆ ಪ್ರಸಾರವಾಗುವ ‘ಗೊಂಬೆಮನೆ’ ಧಾರಾವಾಹಿಯು ಅಕ್ಕ-ತಂಗಿಯ ಪ್ರೀತಿ-ವಾತ್ಸಲ್ಯದ ಕಥೆಯನ್ನು ಕೇಂದ್ರೀಕರಿಸಿದೆ. ಈಗ ಪ್ರಸಾರವಾಗುವ ಕಂತುಗಳು ಉತ್ತಮ ಕಥೆ ಮತ್ತು ಮನರಂಜನಾ ಅಂಶವನ್ನು ಹೊಂದಿವೆ. ಇವು ಖಂಡಿತ ವೀಕ್ಷಕರ ಮನಗೆಲ್ಲುವ ವಿಶ್ವಾಸವಿದೆ. ಇದಲ್ಲದೇ ಪ್ರಸಿದ್ಧವಾದ ದೇಸಿ ಕಾದಂಬರಿಗಳನ್ನು ಧಾರಾವಾಹಿಯಾಗಿ ನಿರ್ಮಿಸುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಕ್ರಿಯೇಟಿವ್ ತಂಡ ಕಾರ್ಯನಿರತವಾಗಿದೆ ಎನ್ನುತ್ತಾರೆವಾಹಿನಿಯ ಮುಖ್ಯಸ್ಥ ಸಂಜಯ್ಶಿಂಧೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.