ADVERTISEMENT

ಅನುಪಮ ಕ್ಷಣಗಳು...

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 7:09 IST
Last Updated 20 ಮಾರ್ಚ್ 2014, 7:09 IST
ಚಂಡೀಗಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಿರಣ್‌ ಖೇರ್‌ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಅವರ ಪತಿ ಹಾಗೂ ನಟ ಅನುಪಮ್‌ ಖೇರ್‌ ತಮ್ಮ ಮೊಬೈಲ್‌ನಲ್ಲಿ ಛಾಯಾಚಿತ್ರ ಸೆರೆ ಹಿಡಿದರು. ಪಕ್ಷದ ಮುಖಂಡ ಸಂಜಯ್‌ ಟಂಡನ್‌ (ಮಧ್ಯದಲ್ಲಿರುವವರು) ಇದ್ದಾರೆ 	–ಪಿಟಿಐ ಚಿತ್ರ
ಚಂಡೀಗಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಿರಣ್‌ ಖೇರ್‌ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಅವರ ಪತಿ ಹಾಗೂ ನಟ ಅನುಪಮ್‌ ಖೇರ್‌ ತಮ್ಮ ಮೊಬೈಲ್‌ನಲ್ಲಿ ಛಾಯಾಚಿತ್ರ ಸೆರೆ ಹಿಡಿದರು. ಪಕ್ಷದ ಮುಖಂಡ ಸಂಜಯ್‌ ಟಂಡನ್‌ (ಮಧ್ಯದಲ್ಲಿರುವವರು) ಇದ್ದಾರೆ –ಪಿಟಿಐ ಚಿತ್ರ   
ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೋಮವಾರ ನವದೆಹಲಿಯಲ್ಲಿ ಪಕ್ಷದ ಮುಖಂಡರೊಂದಿಗೆ ಹೋಳಿ ಆಚರಿಸಿದರು –ಪಿಟಿಐ ಚಿತ್ರ
ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಮೇಘಾಲಯದ ರೆಸುಬೆಲ್‌ಪಾರಾದಲ್ಲಿ ಮಂಗಳವಾರ ಸ್ಥಳೀಯ ಗಾರೊ ಬುಡಕಟ್ಟು ಸಮುದಾಯದವರು ತೊಡಿಸಿದ ಸಾಂಪ್ರದಾಯಿಕ ಟೋಪಿ ಧರಿಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು –ಪಿಟಿಐ ಚಿತ್ರ
ಮತದಾನದ ಮಹತ್ವ ಸಾರಲು ಟಾಲಿವುಡ್‌ನಲ್ಲಿ ಚಲನ­ಚಿತ್ರವೊಂದನ್ನು ನಿರ್ಮಿಸಲಾಗುತ್ತಿದ್ದು, ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರನ್ನು ಹೋಲುವ ಪಾತ್ರ ಚಿತ್ರದ ಪ್ರಮುಖ ಆಕರ್ಷಣೆಯಾ­ಗಿರಲಿದೆ. ಚಿತ್ರದ ದೃಶ್ಯವೊಂದರಲ್ಲಿ ಕೇಜ್ರಿವಾಲ್‌ ಪಾತ್ರದಲ್ಲಿರುವ ತೆಲುಗು ಹಾಸ್ಯ ನಟ ಎಂ.ಎಸ್‌. ನಾರಾಯಣ.
ತಮಿಳುನಾಡಿನ ಕಲ್ಲಕುರ್ಚಿಯಲ್ಲಿ ನಡೆದ ಚುನಾವಣಾ ರ್‍್ಯಾಲಿಯಲ್ಲಿ ಮುಖ್ಯ­ಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಪಕ್ಷದ ಬೆಂಬಲಿಗರಿಗೆ ವಿಜಯ ಸಂಕೇತ ಪ್ರದರ್ಶಿಸಿದರು –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.