ADVERTISEMENT

ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಜುಲೈ 7ರ `ಭೂಮಿಕಾ~ದಲ್ಲಿ `ಸಾಧಕಿಯರು ಇವರು ದೇಶ ಕಟ್ಟಿದವರು~ ಎಂಬ ಮಾಲತಿ ಭಟ್ ಅವರ ಲೇಖನ ಓದಿ ಸಂತೋಷವಾಯಿತು. 15 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು ಇತಿಹಾಸ ಎಂದೂ ಮರೆಯದು.
 
ಅವರ ಸರ್ವಾಧಿಕಾರಿ ಧೋರಣೆ ಮತ್ತು ತುರ್ತು ಪರಿಸ್ಥಿತಿಯ ಕರಾಳ ನೆನಪನ್ನು ಬದಿಗಿಟ್ಟು ನೋಡಿದಾಗ ಅವರೊಬ್ಬ ದೂರದೃಷ್ಟಿಯುಳ್ಳ, ಆಧುನಿಕ ಚಿಂತನೆಯ ಆಡಳಿತಗಾರ್ತಿ ಆಗಿದ್ದುದು ಸ್ಪಷ್ಟವಾಗುತ್ತದೆ. ರಾಜಕೀಯ ಸಾಧಕಿಯರ ಆಡಳಿತವನ್ನು ನೆನಪಿಸಿದ್ದಕ್ಕೆ ಅಭಿನಂದನೆಗಳು.
-ಬಸಪ್ಪ ಸೊಲಬಪ್ಪ ಮುಳ್ಳೂರ, ಹಲಗತ್ತಿ, ಬೆಳಗಾವಿ ಜಿಲ್ಲೆ.

ಲೇಖನದಲ್ಲಿ ವಿಜಯಲಕ್ಷ್ಮಿ ಪಂಡಿತ್, ಸರೋಜಿನಿ ನಾಯ್ಡು, ಕಮಲಾದೇವಿ ಚಟ್ಟೋಪಾಧ್ಯಾಯ, ಅರುಣಾ ಆಸಿಫ್ ಅಲಿ, ಕ್ಯಾಪ್ಟನ್ ಲಕ್ಷ್ಮಿ, ಪದ್ಮಜಾ ನಾಯ್ಡು, ಯಶೋಧರಮ್ಮ ದಾಸಪ್ಪ, ಪಾರ್ವತಿ ಕುಮಾರ ಮಂಗಳಂ ಅವರ ಬಗ್ಗೆಯೂ ಮಾಹಿತಿ ಇದ್ದಿದ್ದರೆ ಸೂಕ್ತವಾಗಿತ್ತು.
-ಎ.ಎಸ್.ಲೊಕ್ಕಾನಿ, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.