ADVERTISEMENT

ದಿನ ಭವಿಷ್ಯ: ಹಿತ-ಶತ್ರುಗಳ ಬಗ್ಗೆ ಎಚ್ಚರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಆಗಸ್ಟ್ 2024, 18:30 IST
Last Updated 2 ಆಗಸ್ಟ್ 2024, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಹಲವು ದಿನಗಳಿಂದ ನೀವು ನಿರೀಕ್ಷಿಸುತ್ತಿದ್ದಂತೆ ವ್ಯವಹಾರಗಳ ಬಗ್ಗೆ ನುರಿತವರ ಸಲಹೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಪ್ರಾಧ್ಯಾಪಕರಿಗೆ ಹಾಗೂ ತಾಂತ್ರಿಕ ವಿಷಯಗಳ ಸಲಹೆಗಾರರಿಗೆ ಶುಭದಿನ.
  • ವೃಷಭ
  • ಗಂಭೀರ ವಿಚಾರಗಳ ಬಗ್ಗೆ ಮಡದಿಯೊಂದಿಗೆ ಚರ್ಚಿಸಿ, ತೀರ್ಮಾನಿಸಿ. ಚಿತ್ರಕಲೆಯ ಬಗ್ಗೆ ಉತ್ಸಾಹ ಹೆಚ್ಚಾಗಲಿದೆ. ಮಿತ್ರರ ಜೊತೆಗೆ ಮಾಡುವ ಸಾಹಸ ಕಾರ್ಯಗಳಿಂದ ಜಯ ಸಿಗಲಿದೆ. ಹಸಿರು ಬಣ್ಣ ಶುಭಕರವಾಗುವುದು.
  • ಮಿಥುನ
  • ಜನೋಪಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಒಳ್ಳೆಯ ಬದಲಾವಣೆಗಳಾಗಲಿವೆ. ಸೃಜನಶೀಲ ಬರವಣಿಗೆಗಳಿಂದ ಖ್ಯಾತಿ ಹಾಗೂ ಹೆಚ್ಚಿನ ಹಣವನ್ನು ಗಳಿಸುವಿರಿ.
  • ಕರ್ಕಾಟಕ
  • ಇನ್ನೊಬ್ಬರ ಭಾವನೆಗಳನ್ನು ನೋಯಿಸುವ ಬದಲು, ಬೆಲೆಕೊಡುವ ಮನಸ್ಥಿತಿ ಬೆಳೆಸಿಕೊಳ್ಳಿ. ನಿಮ್ಮಲ್ಲಿದ್ದ ದುಡುಕು ಬುದ್ಧಿ ಕಡಿಮೆಯಾಗುವ ಸೂಚನೆ ಅರಿವಾಗುತ್ತದೆ. ದೇವತಾ ಕಾರ್ಯಗಳಿಗಾಗಿ ಪ್ರಯಾಣ ಮಾಡಲಿದ್ದೀರಿ.
  • ಸಿಂಹ
  • ಕಾನೂನು ವಿಷಯದ ಬಗ್ಗೆ ನಂಬಿಕಸ್ಥ ಹಾಗೂ ತಿಳಿವಳಿಕೆಯುಳ್ಳ ವ್ಯಕ್ತಿಯಿಂದ ಸಲಹೆ ಪಡೆಯುವಿರಿ. ಬಾಕಿ ಹಣ ಪಡೆಯಲು ಅಡಚಣೆಗಳನ್ನು ನಿವಾರಿಸಿಕೊಳ್ಳಿ. ವಿಷ್ಣುಸಹಸ್ರಮಾನ ಸ್ತೋತ್ರ ಪಠಣೆ ಶ್ರೇಯಸ್ಕರವಾಗುವುದು.
  • ಕನ್ಯಾ
  • ವೃತ್ತಿಯಲ್ಲಿನ ಸಣ್ಣ-ಪುಟ್ಟ ಬದಲಾವಣೆಯು ಹೆಚ್ಚಿನ ಧನಲಾಭ ತಂದು ಕೊಡಲಿದೆ. ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ದೊರಕುವುದು. ಕಾರ್ಮಿಕರ ಬೇಡಿಕೆಗಳು ಈಡೇರಲಿವೆ.
  • ತುಲಾ
  • ಷೇರುಗಳ ಮೇಲೆ ಹೆಚ್ಚಿನ ಹೂಡಿಕೆಯ ಬಗ್ಗೆ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಸಲಹೆ ಬರುವುದು. ಕೃಷಿ ಚಟುವಟಿಕೆ ಗಳಿಗೆ ಹೆಚ್ಚಿನ ಹಣ ವ್ಯಯಿಸಬೇಕಾಗುವುದು.
  • ವೃಶ್ಚಿಕ
  • ಶ್ರಮಿಕರಾದ ನಿಮಗೆ ಗುರು-ಹಿರಿಯರ ಆಶೀರ್ವಾದವಿದ್ದರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅಪೇಕ್ಷಿಸಬಹುದು. ನಿವೃತ್ತಿ ಜೀವನದ ನಂತರದ ಕೆಲಸಗಳ ಬಗ್ಗೆ ಯೋಜನೆ ರೂಪಿಸಿಕೊಳ್ಳುವಿರಿ. ದೇಹಕ್ಕೆ ಶೀತ ಬಾಧೆ ಬರಲಿದೆ.
  • ಧನು
  • ಪ್ರಯಾಣದಲ್ಲಿನ ಒಂಟಿತನ ಸಮಾನ ಮನಸ್ಕರ ಭೇಟಿಯಿಂದಾಗಿ ನಿವಾರಣೆಯಾಗುವುದು. ಮನೆಗೆ ಬಂಧು ಮಿತ್ರರ ಆಗಮನ ನವ ಉಲ್ಲಾಸವನ್ನು ತರಲಿದೆ. ಹೊರಗಿನ ಆಹಾರ ಸೇವನೆ ಬೇಡ.
  • ಮಕರ
  • ರಬ್ಬರ್ ಅಥವಾ ಪ್ಲಾಸ್ಟಿಕ್ ವ್ಯವಹಾರದಲ್ಲಿರುವವರು ಉತ್ತಮ ಲಾಭ ಗಳಿಸುವಿರಿ. ನವದಂಪತಿಗಳಿಗೆ ಸಂತಾನದ ಶುಭ ಸುದ್ಧಿ ಸಿಗಲಿದೆ. ನಿವೃತ್ತ ಶಿಕ್ಷಕರಿಗೆ ಗೌರವಯುತ ಸ್ಥಾನಮಾನಗಳು ಲಭ್ಯವಾಗಲಿದೆ.
  • ಕುಂಭ
  • ಅಧಿಕಾರಿಗಳ ಭೇಟಿಯಿಂದ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಇತರರ ಸಲಹೆಗಳನ್ನು ವಿಮರ್ಶಿಸದೇ ಒಪ್ಪಿಕೊಳ್ಳಬೇಡಿ. ಸತ್ಕಾರ ಸಮಾರಂಭ ಗಳಲ್ಲಿ ಭಾಗವಹಿಸುವ ಹಾಗೂ ಪುಣ್ಯಕ್ಷೇತ್ರಗಳಿಗೆ ತೆರಳುವ ಯೋಗವಿದೆ.
  • ಮೀನ
  • ಪ್ರಚಲಿತ ರಾಜಕೀಯ ಬೆಳವಣಿಗೆಗಳಿಂದ ಲಾಭವಾಗಲಿದೆಯಾದರೂ, ಹಿತ-ಶತ್ರುಗಳ ಬಗ್ಗೆ ಎಚ್ಚರ. ವೈದ್ಯಕೀಯ ಸಿಬ್ಬಂದಿಗೆ ಸರ್ಕಾರಿ ಸೌಲಭ್ಯ ಸಿಗಲಿದೆ. ಸಾಧು ಸಂತರ, ಪೀಠಾಧಿಪತಿಗಳ ದರ್ಶನ ಆಕಸ್ಮಿಕವಾಗಿ ಸಿಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.