ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಬಾಲ್ಯದ ಕಹಿ ಘಟನೆ ಮರುಕಳಿಸುವ ಸಾಧ್ಯತೆ ಇದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಅಕ್ಟೋಬರ್ 2025, 23:20 IST
Last Updated 6 ಅಕ್ಟೋಬರ್ 2025, 23:20 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಉಳಿತಾಯದ ಹೆಸರಲ್ಲಿ ದೊಡ್ಡ ಮೇಳಗಳಲ್ಲಿ ಖರೀದಿ ಮಾಡಲು ಹೋಗಿ ಮೋಸ ಹೋಗದಿರಿ. ತೈಲ ವ್ಯಾಪಾರಿಗಳು ಲಾಭ ಪಡೆಯುವಲ್ಲಿ ಯಶಸ್ವಿಯಾಗುವಿರಿ. ನಿರುದ್ಯೋಗಿಗಳಿಗೆ ದೇವತಾರಾಧನೆ ಮುಖ್ಯ.
  • ವೃಷಭ
  • ಆದಾಯದಲ್ಲಿ ಕೊರತೆ, ಅಧಿಕ ಖರ್ಚು-ವೆಚ್ಚಗಳು ನಿದ್ದೆಯನ್ನು ಕೆಡಿಸುತ್ತದೆ. ಕೃಷಿಕರ ಉಲ್ಲಾಸ ಜೀವನಕ್ಕೆ ಸಣ್ಣ-ಪುಟ್ಟ ಅಡೆತಡೆಗಳು ಉಂಟಾಗಬಹುದು. ಬಾಲ್ಯದ ಕಹಿ ಘಟನೆ ಮರುಕಳಿಸುವ ಸಾಧ್ಯತೆ ಇದೆ.
  • ಮಿಥುನ
  • ಕಂಕಣ ಭಾಗ್ಯ ಅರಸಿ ಬಂದಾಗ ನಿರಾಕರಿಸುವಂಥ ಮೂರ್ಖತನದ ಕೆಲಸಗಳನ್ನು ಮಾಡಬೇಡಿ. ಕಾರ್ಯವನ್ನು ಶುರು ಮಾಡಿದ ನಂತರ ಪದೇ ಪದೇ ನಿಲ್ಲಿಸುವಂಥ ಸನ್ನಿವೇಶಗಳು ಎದುರಾಗುತ್ತಲೇ ಇರುವ ಸಾಧ್ಯತೆಗಳಿವೆ.
  • ಕರ್ಕಾಟಕ
  • ಬಂಗಾರದ ಬೆಲೆಯ ಹಾವು ಏಣಿ ಆಟವು ಒಂದು ರೀತಿಯ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಗಳಿವೆ. ಮನಸ್ಸು ಕೆಟ್ಟ ಆಲೋಚನೆ ಹಾಗೂ ವಂಚನೆ ಮಾಡದಂತೆ ತಡೆಯೊಡ್ಡಿ.
  • ಸಿಂಹ
  • ಸ್ಟಾರ್ಟಪ್‌ಗಳನ್ನು ಪ್ರಾರಂಭ ಮಾಡಬೇಕೆಂದು ಯೋಜನೆ ಹೊಂದಿರು ವವರು ಸಮಾನ ಮನಸ್ಕರೊಂದಿಗೆ ಕೂತು ಸಮಾಲೋಚನೆ ನಡೆಸಿ. ಹಲವು ಪ್ರಶ್ನೆಗಳಿಗೆ ನಿಮ್ಮದೇ ಧಾಟಿಯಲ್ಲಿ ಹಾರಿಕೆಯ ಉತ್ತರ ನೀಡುವಿರಿ.
  • ಕನ್ಯಾ
  • ಗೃಹ ಹಾಗೂ ಕಟ್ಟಡ ನಿರ್ಮಾಣ ಕಾರ್ಯಗಳಂಥ ದೊಡ್ಡ ಕಾರ್ಯಗಳ ಮೇಲೆ ಗಮನ ಹರಿಸಿದರೆ ಕೆಲಸವು ಬೇಗ ಪೂರ್ಣವಾಗುವ ಸಾಧ್ಯತೆಗಳಿವೆ ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ.
  • ತುಲಾ
  • ಕನ್ಯಾನ್ವೇಷಣೆಯ ಹಂತದಲ್ಲಿರುವ ಯೋಗ್ಯ ಹುಡುಗನಿಗೆ ಅನುರೂಪ ಕನ್ಯೆಯು ಲಭ್ಯವಾಗುವ ಸಂಭವವಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಶ್ರದ್ಧೆ ವಹಿಸಿದರೆ ಗೆಲುವು, ಯಶಸ್ಸು ಇರುತ್ತದೆ.
  • ವೃಶ್ಚಿಕ
  • ಮಾರ್ಗಮಧ್ಯದಲ್ಲಿ ಎದುರಾದ ಸಮಸ್ಯೆಯನ್ನು ಪರಿಹರಿಸಲು ಬಾಲ್ಯದ ಸ್ನೇಹಿತನ ಸಹಾಯ ಕೇಳಿದರೆ ಪರಿಹಾರವಾಗುವುದು. ಯಾವ ಯೋಚನೆಯೂ ಮಾಡದೆ ಶ್ರೀವಿಷ್ಣು ಸಹಸ್ರನಾಮ ಪಠಿಸಿ.
  • ಧನು
  • ಅತೀಂದ್ರಿಯಗಳ ಶಕ್ತಿಯೋ ಎಂಬಂತೆ ಗೃಹದ ಪಾಯಗಳಾಗುವ ಸಂಭವ ವಿದ್ದಲ್ಲಿ ಅವುಗಳ ಮುನ್ಸೂಚನೆಗಳು ದೊರೆಯುತ್ತವೆ. ದೀರ್ಘಕಾಲಿಕ ಅನಾರೋಗ್ಯದ ಸಮಸ್ಯೆಗಳಿಗೆ ಮಗಳಿಂದ ಪರಿಹಾರದ ದಾರಿಗಳು ಕಾಣುತ್ತದೆ.
  • ಮಕರ
  • ದೇವಸ್ಥಾನಗಳನ್ನು ಭೇಟಿ ಮಾಡುವ ನೆಪದಲ್ಲಿ ಕದಡಿದ ಮನಸ್ಸು ತಿಳಿಯಾಗುವುದು. ಸಹೋದರರ ಜೊತೆಗೆ ಮಾಡಿಕೊಂಡ ವ್ಯಾಜ್ಯವನ್ನು ಮೂರನೆ ವ್ಯಕ್ತಿಗಳು ಆಡಿಕೊಳ್ಳುವುದಕ್ಕಿಂತ ಮುಂಚೆ ಪರಿಹರಿಸಿಕೊಳ್ಳಿ
  • ಕುಂಭ
  • ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ ಅನಿವಾರ್ಯವಾಗಿ ಗೈರಾಗುವ ಸಂದರ್ಭ ಬರಲಿದೆ. ಉತ್ತಮ ವ್ಯಕ್ತಿಗಳ ಜತೆ ಉತ್ತಮ ವಿಷಯಗಳ ವಿನಿಮಯವು ಮನಸ್ಸನ್ನು ಪ್ರಫುಲ್ಲವಾಗಿರಿಸುತ್ತದೆ.
  • ಮೀನ
  • ಸಾಹಸ ಮಾಡಿ ಪಡೆದ ವಸ್ತುವನ್ನು ಸಾಹಸ ಮಾಡಿಯೇ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇತರರಿಗೆ ಸಲಹೆ ಕೊಡುವಾಗ ಸೂಕ್ಷ್ಮವಾಗಿ ಇರುವ ಮತಿಯು ನಿಮ್ಮದೆ ಸಮಸ್ಯೆಗಳಿಗೆ ಕೈಕೊಡುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.