ADVERTISEMENT

ದಿನ ಭವಿಷ್ಯ: ಅನಿರೀಕ್ಷಿತವಾಗಿ ಹಳೆಯ ಗೆಳೆಯರ ಭೇಟಿ ಸಾಧ್ಯತೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಆಗಸ್ಟ್ 2024, 23:30 IST
Last Updated 9 ಆಗಸ್ಟ್ 2024, 23:30 IST
   
ಮೇಷ
  • ಬೇರೆ ಯಾರಿಗೂ ನಿಮ್ಮ ಯೋಜನೆಯ ಸುಳಿವು ಸಿಗದಂತೆ ಗೌಪ್ಯತೆಯನ್ನು ಕಾಪಾಡಿ. ದೇಹಕ್ಕೆ ಅತಿಯಾದ ಶ್ರಮವಾದರೂ ಇಷ್ಟ ಪ್ರಾಪ್ತಿಗಾಗಿ ಕಾರ್ಯವನ್ನು ಸಾಧಿಸಿದ ಸಂತೋಷ ಇರುವುದು. ಶುಭ ಸುದ್ದಿ ಕೇಳಿ ಸಂತೋಷವಾಗುವುದು.
  • ವೃಷಭ
  • ಜೀವನ ರೂಪಿಸಿಕೊಳ್ಳಲು ನಿರ್ಧರಿಸಿದ ಪ್ರೇಮಿಗಳಿಗೆ ತಮ್ಮ ಸಹೋದರರಿಂದ ಅಥವಾ ಕುಟುಂಬ ವರ್ಗದವರಿಂದ ಸ್ಪಂದನೆ ಸಿಗುವ ಅವಕಾಶಗಳಿವೆ. ರಫ್ತು ವ್ಯಾಪಾರದಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದುವಿರಿ.
  • ಮಿಥುನ
  • ಯೋಜನೆಗಳನ್ನು ಕಾರ್ಯಗತಗೊಳಿಸಲು ಸಿಬ್ಬಂದಿ ವರ್ಗದವರು ಸಹಕರಿಸಲಿದ್ದಾರೆ. ನವವಿವಾಹಿತರಿಗೆ ಸಂತಾನದ ವಿಚಾರದಲ್ಲಿ ಶುಭ ಸೂಚನೆ ಕಾಣಲಿದೆ. ಅನಿರೀಕ್ಷಿತವಾಗಿ ಹಳೆಯ ಗೆಳೆಯರ ಭೇಟಿ ಸಾಧ್ಯತೆ.
  • ಕರ್ಕಾಟಕ
  • ಧೈರ್ಯದಿಂದ ದೊಡ್ಡ ಯೋಜನೆ ಕೈಗೊಳ್ಳಬಹುದು, ಆದರೆ ಹಣದ ವಿಚಾರದಲ್ಲಿ ಎಚ್ಚರ ವಹಿಸಿ. ಬಹಳ ದಿನಗಳ ನಂತರ ಒಂದು ದೃಢವಾದ ನಿರ್ಣಯವನ್ನು ಕೈಗೊಂಡಿರುವ ನಿಮಗೆ ಶುಭವಾಗುವುದು.
  • ಸಿಂಹ
  • ಯೋಜನೆಗಳು ಸರಿಯಾದ ಹಾದಿಯಲ್ಲಿ ಸಾಗುತ್ತಿರುವುದರಿಂದ ಸಮಾಧಾನ ಇರಲಿದೆ. ಕೃಷಿ ಹಾಗೂ ಹೈನು ವ್ಯಾಪಾರಗಳಿಂದ ಅಧಿಕ ಲಾಭವಾಗುವುದು. ಆಭರಣಗಳ ಖರೀದಿಯಿಂದ ಸಂತೋಷವಾಗುವುದು.
  • ಕನ್ಯಾ
  • ನಿಮ್ಮ ಆಲೋಚನೆಯಲ್ಲಿ, ಸಹೋದ್ಯೋಗಿಗಳ ಯಾವುದೇ ತರಹದ ಒತ್ತಡಕ್ಕೆ ಮಣಿಯದೆ ಕೆಲಸದಲ್ಲಿ ಮುನ್ನುಗ್ಗಿ. ಜೀವನದಲ್ಲಿ ನಾಲ್ಕಾರು ದೋಣಿಯ ಪ್ರಯಾಣ ಬೇಡವೆನಿಸಲಿದೆ. ಶಸ್ತ್ರವೈದ್ಯ ವೃತ್ತಿಯವರಿಗೆ ಸೌಲಭ್ಯಗಳು ಹೆಚ್ಚಲಿದೆ.
  • ತುಲಾ
  • ನಿಮ್ಮ ನಿರ್ಧಾರ ಸರಿಯಾದುದೆಂದು ನಿಮಗೆ ಮನವರಿಕೆಯಾಗುವುದು. ಮೀನುಗಾರರು ಅಥವಾ ಸಮುದ್ರ ಪ್ರಯಾಣ ಮಾಡುವವರು ಜಾಗ್ರತರಾಗಿರಿ. ಮಕ್ಕಳ ಓದಿನ ವಿಷಯವಾಗಿ ಹೆಚ್ಚು ಗಮನವಹಿಸುವಿರಿ.
  • ವೃಶ್ಚಿಕ
  • ಹಿರಿಯರಿಂದ ತರ್ಜಿಸಿಕೊಂಡ ಸಲುವಾಗಿ ಮನೆಯಲ್ಲಿ ಯಾರ ನೆರವೂ ಇಲ್ಲದೆ ಎಲ್ಲಾ ಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವಿರಿ. ಯಾರಲ್ಲಿಯೂ ಅದರಲ್ಲೂ ಮುಖ್ಯವಾಗಿ ಬಂಧುಗಳಲ್ಲಿ ಆರ್ಥಿಕ ಸಹಾಯ ಕೇಳಬೇಡಿ.
  • ಧನು
  • ಪ್ರಯತ್ನಗಳಿಗೆ ವ್ಯಕ್ತಿಯೊಬ್ಬರ ಬೆಂಬಲ ದೊರೆತು ಯಶಸ್ವಿಯಾಗಲಿದೆ. ಎಲ್ಲಾ ವಿಚಾರದಲ್ಲೂ ಸಾವಧಾನವಾಗಿ ಮುಂದುವರಿಯುವುದು ಉತ್ತಮ. ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಸಮತೋಲನ ಕಾಯ್ದುಕೊಳ್ಳಿರಿ.
  • ಮಕರ
  • ದೈನಂದಿನ ಖರ್ಚು-ವೆಚ್ಚಗಳಿಗಾಗಿ ಹಾಗೂ ಜೀವನೋಪಾಯಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಿರಿ. ಹಣಕಾಸಿನಲ್ಲಿ ದಾಕ್ಷಿಣ್ಯದಿಂದ ನಷ್ಟ ಸಂಭವಿಸಬಹುದು. ಆದರೆ ಇದೆಲ್ಲವು ಕ್ಷಣಿಕವಾದ ವಿಚಾರ.
  • ಕುಂಭ
  • ವೈಯಕ್ತಿಕ ವಿಚಾರಕ್ಕಾಗಿ ದೂರದ ಊರಿಗೆ ಪ್ರಯಾಣಿಸುವ ಅವಕಾಶ ಒದಗಿ ಬರಬಹುದು. ಯಂತ್ರಗಳನ್ನು ಬಳಸುವಾಗ ತೊಂದರೆಯಾಗುವ ಸಾಧ್ಯತೆ. ಸರಕು ಸಾಗಾಣಿಕೆದಾರರಿಗೆ ಹೆಚ್ಚಿನ ಕೆಲಸ ಇರಲಿದೆ.
  • ಮೀನ
  • ಗಣ್ಯವ್ಯಕ್ತಿಗಳನ್ನು ನೋಡುವ ಮತ್ತು ಅವರಲ್ಲಿ ಮಾತನಾಡುವ ಅವಕಾಶ ಸಿಗುವುದು. ಪತ್ರಿಕೋದ್ಯಮಿಗಳಿಗೆ ಕ್ರಿಯಾತ್ಮಕ ಬರವಣಿಗೆಯಿಂದ ಏಳಿಗೆ ದೊರಕುವುದು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.