ADVERTISEMENT

ದಿನ ಭವಿಷ್ಯ: ತೋಟದ ಬೆಳೆಗಾರರಿಗೆ ವಾಣಿಜ್ಯ ಬೆಳೆಗಳಿಂದ ಅಧಿಕ ಲಾಭ ಸಿಗವುದು..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಆಗಸ್ಟ್ 2025, 23:30 IST
Last Updated 14 ಆಗಸ್ಟ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಒತ್ತಡ ತರುವಂಥ ಕೆಲಸಗಳಿಂದ ದೂರವಿರುವ ಪ್ರಯತ್ನ ಮಾಡಿ. ಸ್ಪರ್ಧೆಯಲ್ಲಿ ಜಯ ಗಳಿಸುವಿರಿ. ಪ್ರಾಮಾಣಿಕವಾಗಿ ಸಂಪಾದನೆ ಮಾಡುತ್ತಿರುವ ನಿಮಗೆ ಶತ್ರುಗಳ ಭಯ ಬೇಡವೆ ಬೇಡ. ರಾತ್ರಿ ವೇಳೆಯ ಪ್ರಯಾಣ  ತಡೆಗಟ್ಟಿರಿ.
  • ವೃಷಭ
  • ಕಾರ್ಯದ ನಿಮಿತ್ತ ಕುಟುಂಬದ ಸದಸ್ಯರನ್ನು ಎದುರು ಹಾಕಿಕೊಳ್ಳಬೇಕಾದ ಪರಿಸ್ಥಿತಿಗಳು ಬರಬಹುದು.  ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿ. ಕಲಹಗಳಲ್ಲಿ ಮೌನವಾಗಿರಿ.
  • ಮಿಥುನ
  • ಮನೆಯ ಕಾರ್ಮಿಕರು ಶ್ರಮಿಸುವುದರಿಂದ ಅವರನ್ನು ಗೌರವದಿಂದ ಕಾಣುವುದು ಸೂಕ್ತಕರವಾದುದು. ನೀವಾಡುವ ಮಾತು ಬಹಳ ಮುಖ್ಯವಾಗಿರುವುದರಿಂದ ಕಡಿಮೆ ಮಾತನಾಡಿ.
  • ಕರ್ಕಾಟಕ
  • ಪೊಲೀಸ್ ವಿಭಾಗದಲ್ಲಿದ್ದು, ಮಾಹಿತಿ ಕಲೆ ಹಾಕುವಲ್ಲಿ  ವಹಿಸುವ ಮುಂಜಾಗ್ರತಾ ಕ್ರಮ ಸಾಕಾಗದು.  ಕೆಲಸದ ಗುಣಮಟ್ಟ ಕಡಿಮೆ ಆಗುತ್ತಿರುವುದಕ್ಕೆ ಕಾರಣ ನಿರಾಸಕ್ತಿಯೇ ಆಗಿರುತ್ತದೆ.
  • ಸಿಂಹ
  • ಜೀವನದಲ್ಲಿ ನಡೆದ ಹಲವಾರು ಹಾಸ್ಯ ಪ್ರಸಂಗಗಳನ್ನು  ಸ್ನೇಹಿತರೊಂದಿಗೆ ನೆನೆಯುವಿರಿ. ನೂತನ ವಾಹನ ಖರೀದಿಸುವ ಯೋಚನೆಯನ್ನು ಮುಂದೂಡಿ. ಲೇವಾದೇವಿ ನಡೆಸುವವರು ಲಾಭ ಹೊಂದುವಿರಿ.
  • ಕನ್ಯಾ
  • ಚಲನಚಿತ್ರಗಳಲ್ಲಿ ಬರುವ ಸನ್ನಿವೇಶಗಳನ್ನು  ನಿಜ ಜೀವನದಲ್ಲಿ ಕಲ್ಪಿಸಿಕೊಳ್ಳಬೇಡಿ. ಯಂತ್ರಗಳ ಕೆಲಸವನ್ನು ಮಾಡುವಾಗ ಅತ್ಯಂತ ಜಾಗರೂಕತೆ ವಹಿಸಿ ನಿರ್ವಹಣೆ ಮಾಡುವುದು ಸೂಕ್ತ.
  • ತುಲಾ
  • ವಾದ-ವಿವಾದಗಳನ್ನು ಮಾಡಿ ಸಮಯ ಹಾಳು ಮಾಡುವ ಬದಲು ಸಮಾಧಾನದಿಂದ ಕೆಲಸ ಮಾಡಿದಲ್ಲಿ ನಿಧಾನವಾದರೂ ಜಯ ನಿಮ್ಮ ದಾಗುವುದು. ಬದಲಾದ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಯತ್ನಿಸುವಿರಿ.
  • ವೃಶ್ಚಿಕ
  • ವ್ಯಾವಹಾರಿಕ ವಿಷಯದಲ್ಲಿ ನಿಮ್ಮ ಪ್ರಯತ್ನಗಳು ವ್ಯರ್ಥವಲ್ಲ ಎಂಬುದು  ತಿಳಿಯುವುದು. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಕಾದು ನೋಡುವ ತಂತ್ರ ಅನುಸರಿಸುವುದು ಸೂಕ್ತ.
  • ಧನು
  • ಜನರನ್ನು ಬಳಸುವ ಸಲುವಾಗಿ ಕುಟುಂಬದ ವ್ಯಕ್ತಿಗಳನ್ನು ಬಿಟ್ಟು ಹೋಗುವುದು ಮನಸ್ತಾಪಗಳಿಗೆ ಕಾರಣವಾಗಬಹುದು. ಶೈಕ್ಷಣಿಕ ಸಂಸ್ಥೆಗಳಲ್ಲಿನ  ಬೌದ್ಧಿಕ ಅನಾವರಣಕ್ಕೆ ಹಾದಿ ಸಿಗಲಿದೆ.
  • ಮಕರ
  • ಯಕ್ಷಪ್ರಶ್ನೆಯೇ ಆಗಿ ಉಳಿದಿದ್ದ  ಹಲವಾರು ಕುಟುಂಬದ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಧಾರ್ಮಿಕ ಕ್ಷೇತ್ರಗಳ ಭೇಟಿ, ದೇವರ ದರ್ಶನದಂಥಕಾರ್ಯಗಳು ನಡೆಯುತ್ತವೆ. ವಿದ್ಯಾಭ್ಯಾಸದ ಸಮಯದಲ್ಲಿ ಏಕಾಗ್ರತೆ ಮುಖ್ಯ.
  • ಕುಂಭ
  • ಸಾಮಾನ್ಯ ಪ್ರಜೆ ನೀವಾಗಿದ್ದಲ್ಲಿ ರಾಜಕೀಯ ತಿಕ್ಕಾಟಗಳಲ್ಲಿ ಭಾಗವಹಿಸಿ ಅಪರಾಧಿ ಸ್ಥಾನಕ್ಕೆ ತಲುಪದೆ ಇರುವುದು ಸೂಕ್ತಕರ. ತೋಟದ ಬೆಳೆಗಾರರಿಗೆ ವಾಣಿಜ್ಯ ಬೆಳೆಗಳಿಂದ ಅಧಿಕ ಲಾಭ ಸಿಗವುದು. ವಸ್ತ್ರ ವ್ಯಾಪಾರದಲ್ಲಿ ಹಿನ್ನಡೆ.
  • ಮೀನ
  • ಭಾವನೆಗಳಿಗೆ ಬೆಲೆ ಕೊಡದವರ ಎದುರು ನಿಮ್ಮ ದುಃಖಗಳನ್ನು ಹೇಳಿಕೊಳ್ಳುವುದರಿಂದ ಪ್ರಯೊಜನವಿರುವುದಿಲ್ಲ. ಪೂರ್ಣ ಮನಸ್ಸಿನಿಂದ ಮಾಡಿದಂಥ ಕಾರ್ಯಗಳು ಉತ್ತಮ ಫಲ ನೀಡುತ್ತವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.