ADVERTISEMENT

ದಿನ ಭವಿಷ್ಯ: ರೈತರಿಗೆ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವ ಸಂಭವವಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಸೆಪ್ಟೆಂಬರ್ 2025, 18:30 IST
Last Updated 23 ಸೆಪ್ಟೆಂಬರ್ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕೆಲವು ವಿಚಾರಗಳಲ್ಲಿ ಧೈರ್ಯವು ಕಡಿಮೆಯಾಗುವುದು. ತರಕಾರಿ ಹಾಗೂ ಹಣ್ಣಿನ ಬೆಳೆಯಿಂದ ಲಾಭ ಹೊಂದುವಿರಿ. ನಿದ್ದೆಯ ಸಮಯವನ್ನು ಬೇಗ ಮಾಡಿಕೊಂಡರೆ ಲವಲವಿಕೆ ಹೊಂದಬಹುದು.
  • ವೃಷಭ
  • ನೀರಿಗೆ ಸಂಬಂಧಿಸಿದಂತೆ ನೆರೆಹೊರೆಯವರೊಂದಿಗಿನ ಸಮಸ್ಯೆಗಳು ನಿವಾರಣೆಗೊಳ್ಳಲಿವೆ. ಷೇರು ಹೂಡಿಕೆದಾರರು ಉತ್ತಮವಾಗಿ ಪರಿಶೀಲಿಸಿದ ನಂತರವಷ್ಟೇ ಹೂಡಿಕೆಯನ್ನು ಮಾಡಿ.
  • ಮಿಥುನ
  • ಅತಿಯಾದ ಔದಾರ್ಯತನ ತೋರಬೇಕೆನಿಸಿದಲ್ಲಿ ಹಣಕಾಸಿನ ಸ್ಥಿತಿಯನ್ನು ಒಮ್ಮೆ ಗಮನಿಸಿ. ವೃದ್ಧಾಶ್ರಮವಾಸಿಗಳಿಗೆ ಹೆಚ್ಚಿನ ಸಹಾಯ ಮತ್ತು ಸಿಹಿತಿನಿಸುಗಳು ಸಿಗಲಿವೆ.
  • ಕರ್ಕಾಟಕ
  • ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಮೆಚ್ಚಿದ ಮೇಲಧಿಕಾರಿಗಳ ಒತ್ತಾಯಕ್ಕೆ ಮಣಿದು ಸ್ವಯಂ ನಿವೃತ್ತಿ ಯೋಚನೆಯನ್ನು ಕೈ ಬಿಡಬೇಕಾಗುವುದು. ಮೊಮ್ಮಕ್ಕಳು ಸಂತೋಷಕ್ಕೆ ಕಾರಣವಾಗಲಿದ್ದಾರೆ.
  • ಸಿಂಹ
  • ವ್ಯಾವಹಾರಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೃಧು ಧೋರಣೆಯಿಂದ ಕೆಲವು ಮಂದಿ ವಿರುದ್ಧ ಧ್ವನಿ ಎತ್ತುವ ಸಾಧ್ಯತೆ ಇದೆ. ಈ ಕಾರಣದಿಂದ ದಿನದಿಂದ ದಿನಕ್ಕೆ ಬದಲಾಗಬೇಕಾಗುತ್ತದೆ.
  • ಕನ್ಯಾ
  • ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾಗಬಹುದು. ಕಾರ್ಯವು ನಿರ್ವಿಘ್ನವಾಗಿ ನೆರವೇರಲು ವಿಘ್ನೇಶ್ವರನ ಸ್ತೋತ್ರ ಪಠಿಸಿ. ಪಾದರಕ್ಷೆಯ ಮಾರಾಟಗಾರರಿಗೆ ಲಾಭ ಉಂಟಾಗುವುದು. ‌
  • ತುಲಾ
  • ತಾಂತ್ರಿಕ ಕ್ಷೇತ್ರದಲ್ಲಿ ನೂತನ ಉದ್ಯೋಗ ಸಂಪಾದನೆಗೆ ಹೊರಟಂಥ ವ್ಯಕ್ತಿಗಳಿಗೆ ಅಭಿವೃದ್ಧಿದಾಯಕವೆಂದು ಅನಿಸಲಿದೆ. ಸನ್ನಿವೇಶಗಳು ನಿಮ್ಮ ಪರ ಇರುವುದರಿಂದ ನಿರಾಳವಾಗಿ ಮುಂದುವರಿಯಬಹುದು.
  • ವೃಶ್ಚಿಕ
  • ಅಣ್ಣ–ತಂಗಿಯರ ನಡುವೆ ಸಂಬಂಧಗಳು ಗಟ್ಟಿಯಾಗುವಂಥ ವಿಶೇಷ ವಿಚಾರಗಳು ನಡೆಯುವ ಸಾಧ್ಯತೆಗಳಿವೆ. ಸಣ್ಣಮಟ್ಟದ ಗುತ್ತಿಗೆದಾರರಿಗೆ ಸರ್ಕಾರಿ ಕಾಮಗಾರಿಗಳು ದೊರೆಯುವ ಸಂಭವವಿದೆ.
  • ಧನು
  • ಸಾಲದ ರೂಪದಲ್ಲಿ ಸ್ನೇಹಿತರಿಗೆ ನೀಡಿದ ಹಣವು ಹಿಂದಿರುಗಿ ಕೈಸೇರಲಿದೆ. ವೃತ್ತಿರಂಗದಲ್ಲಿ ನೂತನ ಸ್ಥಾನಮಾನ ದೊರೆತು ಸಂತಸವಾಗುತ್ತದೆ. ಇದು ಆನಂದವನ್ನು ಹೆಚ್ಚಿಸುತ್ತದೆ.
  • ಮಕರ
  • ವಿದೇಶದಲ್ಲಿರುವ ಮಕ್ಕಳ ಅಥವಾ ಬಂಧುಮಿತ್ರರ ಆಗಮನ ಮನಸ್ಸಿಗೆ ಸಂತೋಷ ಕೊಡುತ್ತದೆ. ತೆಗೆದುಕೊಂಡ ನಿರ್ಧಾರಗಳು ತಪ್ಪಾಗಿರುವ ಬಗ್ಗೆ ಅರಿವಾಗುವುದು, ಸರಿಪಡಿಸುವ ಮಾರ್ಗವನ್ನು ಕಂಡುಕೊಳ್ಳಿರಿ.
  • ಕುಂಭ
  • ಮಕ್ಕಳ ವಿಷಯದಲ್ಲಿ ಕಾಳಜಿಯನ್ನು ತೋರಿದಲ್ಲಿ ಅವರ ಭವಿಷ್ಯ ಉತ್ತಮವಾಗುವುದು. ಕ್ರೀಡಾಸಕ್ತರಿಗೆ ಉತ್ತಮ ಸಮಯ ಮತ್ತು ಅವಕಾಶ ಸಿಗಲಿದೆ. ವೈವಾಹಿಕ ಜೀವನಕ್ಕೆ ಸಮಯ ಕೂಡಿಬರಲಿದೆ.
  • ಮೀನ
  • ಧಾರ್ಮಿಕ ವಿಚಾರಗಳಲ್ಲಿ ಸಾಧನೆ ಮಾಡುವವರಿಗೆ ಈ ದಿನವು ಸುಸಮಯವಾಗಲಿದೆ. ರೈತರಿಗೆ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವ ಸಂಭವವಿದೆ. ಹಣ್ಣು , ತರಕಾರಿ ವ್ಯಾಪಾರದಿಂದ ಬಹಳಷ್ಟು ಲಾಭ ಬರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.