ADVERTISEMENT

ದಿನ ಭವಿಷ್ಯ: ಕಾರ್ಯಕ್ಷೇತ್ರದಲ್ಲಿ ಕೆಲಸದ ಹೊರೆ ಬೆಟ್ಟದಂತೆ ಇರುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಜುಲೈ 2024, 18:30 IST
Last Updated 28 ಜುಲೈ 2024, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕಾಗದ ಪತ್ರಗಳ ಬರವಣಿಗೆಗಾರರಿಗೆ ಮತ್ತು ಕಂಪ್ಯೂಟರ್ ಕೆಲಸಗಾ ರರಿಗೆ ತೃಪ್ತಿಕರ ದಿನ. ಬಾಲ್ಯದಲ್ಲಿ ಕಲಿತ ಕೆಲ ವಿಷಯಗಳು ಈಗ ಉಪಯೋಗಕ್ಕೆ ಬರಲಿವೆ. ಶುಭ ಕಾರ್ಯಗಳಿಗೆ ರಾಹುಕಾಲದ ನಂತರ ಪ್ರಯಾಣ ಬೆಳೆಸಿ.
  • ವೃಷಭ
  • ದಾಂಪತ್ಯದಲ್ಲಿ ತಗ್ಗಿ-ಬಗ್ಗಿ ನಡೆಯುವುದನ್ನು ಕಲಿಯಿರಿ. ಇಲ್ಲವಾದಲ್ಲಿ ವಿರಸಕ್ಕೆ ಕಾರಣವಾಗುವುದು. ಪೊಲೀಸ್ ಅಧಿಕಾರಿಗಳಿಗೆ ತುರ್ತು ಕೆಲಸ ಒದಗಿ ಬರುವುದು. ವೃತ್ತಿ ಹಾಗೂ ವೈಯಕ್ತಿಕ ಜೀವನ ತೃಪ್ತಿ ಎನಿಸಲಿದೆ.
  • ಮಿಥುನ
  • ಸಾಮರ್ಥ್ಯ, ದಕ್ಷತೆ, ಸೇವಾ ಮನೋಭಾವಗಳಿಂದ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆ ಸಿಗಲಿದೆ. ಹಣಕಾಸಿನ ತಾಪತ್ರಯಗಳು ಶೀಘ್ರ ಪರಿಹಾರ ವಾಗುವುದು. ಕಾರ್ಯಕ್ಷೇತ್ರದಲ್ಲಿ ಕೆಲಸದ ಹೊರೆ ಬೆಟ್ಟದಂತೆ ಇರುವುದು.
  • ಕರ್ಕಾಟಕ
  • ಯೋಜನೆ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚೆ ನಡೆಸಿ ಮುಂದಿನ ಹಂತವನ್ನು ಮುಟ್ಟುವಿರಿ. ಮನೆ ಕಟ್ಟುವ ಕೆಲಸ ದೇವರ ಕೃಪೆಯಿಂದ ನಿರ್ವಿಘ್ನವಾಗಿ ಮುಂದುವರಿಯಲಿದೆ.
  • ಸಿಂಹ
  • ಮನರಂಜನೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ಸಂತೋಷ ಉಂಟಾಗುವುದು. ಕೌಟುಂಬಿಕ ವಿಷಯಗಳತ್ತ ಹೆಚ್ಚು ಗಮನಹರಿಸ ಬೇಕಾಗುವುದು. ಹೊಸ ವಾಹನ ಖರೀದಿಸುವ ಬಯಕೆ ಈಡೇರಲಿದೆ.
  • ಕನ್ಯಾ
  • ಆಸಕ್ತಿಕರ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಹೊಸ ಯೋಜನೆಗಳಿಗೆ ಸಹಕಾರಿ. ಕುಟುಂಬದ ಹಿರಿಯರು ಮಾಡಿದ ಪುಣ್ಯದ ಫಲಗಳು ಸಿಗಲಿವೆ. ಹಳೆಯ ಯೋಜನೆಗಳಿಗೆ ಜೀವ ಕೊಡಲು ನಿಶ್ಚಯಿಸುವಿರಿ.
  • ತುಲಾ
  • ಆಸ್ತಿ ವ್ಯವಹಾರಗಳನ್ನು ನೋಡಿಕೊಳ್ಳಲು ಸಹೋದರರ ಉತ್ತಮ ಸಹಕಾರ ದೊರೆಯುವುದು. ವಾದ ವಿವಾದಗಳು ನಡೆದರೂ ಕಾರ್ಯ ಸಾಧನೆಗೆ ಅಡ್ಡಿಯಾಗದು. ವಾಣಿಜ್ಯ ಬೆಳೆಗಾರರಿಗೆ ಉತ್ತಮ ಬೆಲೆ ದೊರಕಲಿದೆ.
  • ವೃಶ್ಚಿಕ
  • ಸದಾಕಾಲ ಕಾರ್ಯ ಪ್ರವೃತ್ತರಾಗಿ, ತಪ್ಪುಗಳನ್ನು ಮಾಡದೇ ಸರಿಯಾದ ದಾರಿಯಲ್ಲಿ ದುಡಿಯುವ ನಿಮಗೆ ಫಲಗಳು ಅನುಭವಕ್ಕೆ ಬರಲಿವೆ. ನೂತನ ಉದ್ಯೋಗ ದೊರೆತು ಸಮಾಧಾನವಾಗುವುದು.
  • ಧನು
  • ಅಧ್ಯಾಪಕ ವರ್ಗದವರಿಗೆ ವಿದ್ಯಾರ್ಥಿಗಳ ಮೆಲುಗೈಯಿಂದ ಗೌರವ ಸಿಗುವುದು. ಮೇಲಧಿಕಾರಿಗಳಿಗೆ ಜವಾಬ್ದಾರಿಯುತ ನಡೆಯಿಂದಾಗಿ ನಂಬಿಕೆ ಹೆಚ್ಚಾಗಲಿದೆ. ಹಿರಿಯರ ಶುಶ್ರೂಷೆಯ ಬಗ್ಗೆ ಗಮನಹರಿಸಿ.
  • ಮಕರ
  • ನ್ಯಾಯಾಲಯದ ವಿಚಾರಗಳಲ್ಲಿ ಮಧ್ಯಸ್ಥಿಕೆ ಅಥವಾ ರಾಜಿಯ ಮನೋಭಾವ ಕಾರ್ಯದ ಅನುಕೂಲಕ್ಕೆ ಸಾಧಕ. ನಿಮ್ಮ ಸರ್ವತೋಮುಖ ಅಭಿವೃದ್ಧಿಗೆ ಸೋದರವರ್ಗದವರ ಬೆಂಬಲ ಸಿಗಲಿದೆ.
  • ಕುಂಭ
  • ಸದ್ಯದ ಪರಿಸ್ಥಿತಿಯಲ್ಲಿ ಹಣಕಾಸಿನ ಸ್ಥಿತಿ ಗತಿಗಳನ್ನು ನೋಡಿಕೊಂಡು ನಿವೇಶನವನ್ನು ಖರೀದಿಸುವ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ. ಕುಟುಂಬದಲ್ಲಿ ಉಂಟಾಗಿದ್ದ ಕಲಹ ದೂರಾಗಲಿದೆ.
  • ಮೀನ
  • ಕಾರ್ಯ ನಿಮಿತ್ತ ಕುಟುಂಬದಲ್ಲಿ ಭಿನ್ನಾಭಿಪ್ರಾಯ ತೋರಿಬಂದರೂ ತಾಳ್ಮೆ, ಸಮಾಧಾನ ಇರಲಿ. ಅನವಶ್ಯಕ ತಿರುಗಾಟವಿದ್ದರೂ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ. ಪ್ರತಿಭೆಗೆ ತಕ್ಕಂಥ ಪ್ರತಿಫಲ ಸಿಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.