ADVERTISEMENT

ದಿನ ಭವಿಷ್ಯ| ಸೆ. 21: ಈ ರಾಶಿಯವರಿಗೆ ಒಂಟಿತನದ ಚಿಂತೆಯು ಆಗಾಗ ಕಾಡಲಿದೆ.

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಸೆಪ್ಟೆಂಬರ್ 2024, 20:01 IST
Last Updated 20 ಸೆಪ್ಟೆಂಬರ್ 2024, 20:01 IST
   
ಮೇಷ
  • ಆದರ್ಶವಾದಿ ಗುಂಪಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಒಳ್ಳೆಯ ಬದಲಾವಣೆಗಳಾಗುವುದು. ನಿಮ್ಮ ದುರಾಲೋಚನೆಗಳನ್ನು ಬದಲಿಸಿಕೊಳ್ಳುವ ದಿನವಾಗಿದೆ.
  • ವೃಷಭ
  • ಕೋರ್ಟ್ ವ್ಯವಹಾರಗಳು ಬಗೆಹರಿಯಬಹುದೆಂಬ ಆಲೋಚನೆಯು ಇತರರ ದುರ್ಬುದ್ಧಿಯಿಂದ ವ್ಯತ್ಯಾಸಗಳಾಗುತ್ತವೆ. ನೌಕರಿಯಲ್ಲಿ ಬಡ್ತಿ ಹೊಂದುವ ಬಗ್ಗೆ ಪ್ರಯತ್ನ ಇರಲಿ. ಹೆಂಡತಿಯ ಆರೋಗ್ಯ ಸುಧಾರಿಸುತ್ತದೆ.
  • ಮಿಥುನ
  • ನವ ದಂಪತಿಗಳಿಗೆ ಹರ್ಷದ ಸಮಾಚಾರ ಕೇಳಿ ಬರುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದು. ದೈವಾನುಗ್ರಹದಿಂದ ಕೆಲಸದಲ್ಲಿ ಒಳ್ಳೆಯ ಲಾಭ ಪಡೆಯುವಿರಿ. ಪಿತೃ ವರ್ಗದವರ ಸಹಾಯಾಸ್ತ ಸಿಗುವುದು.
  • ಕರ್ಕಾಟಕ
  • ನಿಮ್ಮ ಗಡಿಬಿಡಿಯ ಸ್ವಭಾವದಿಂದಾಗಿ ಕಂಪನಿಯಲ್ಲಿ ಉಂಟಾದ ತಪ್ಪುಗಳಿಗೆ ನೇರ ಹೊಣೆಗಾರಿಕೆ ನಿಮ್ಮದ್ದಾಗಿರುತ್ತದೆ. ಮನೆಯಲ್ಲಿ ದೇವತಾಕಾರ್ಯಗಳನ್ನು ನಡೆಸುವ ಬಗ್ಗೆ ತಂದೆಯವರಲ್ಲಿ ಮಾತನಾಡಿ.
  • ಸಿಂಹ
  • ಸಮಯ ಮತ್ತು ಅನುಕೂಲತೆಯ ಮೇಲೆ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವ ನಿರ್ಧಾರಕ್ಕೆ ಬನ್ನಿರಿ. ದೇವತಾನುಗ್ರಹದಿಂದ ಸಕಲ ಅಭೀಷ್ಟವು ಸಿದ್ಧಿಯಾಗಿ ಸಂತೃಪ್ತಿಯಾಗುವುದು. ಕುಟುಂಬದಲ್ಲಿ ಸುಖ ನೆಮ್ಮದಿ ವೃದ್ಧಿ.
  • ಕನ್ಯಾ
  • ಕಾರ್ಖಾನೆಯಲ್ಲಿ ಹೊಸ ವಿದ್ಯುತ್ ಉಪಕರಣಗಳನ್ನು ಅಳವಡಿಸುವಲ್ಲಿ ಅಧಿಕ ಬಂಡವಾಳವನ್ನು ಹೂಡುವಿರಿ. ಸಾಧು ಸಂತರ ದರ್ಶನದಿಂದ ಮನಸ್ಸಿಗೆ ಹೆಚ್ಚಿನ ಸಮಾಧಾನ ಸಿಗಲಿದೆ. ಒಂಟಿತನದ ಚಿಂತೆಯು ಆಗಾಗ ಕಾಡಲಿದೆ.
  • ತುಲಾ
  • ಕೆಲವು ವೈಯಕ್ತಿಕ ವಿಚಾರಗಳನ್ನು ಆಪ್ತ ಮಿತ್ರರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ. ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದು.
  • ವೃಶ್ಚಿಕ
  • ಫ್ಯಾಷನ್ ಡಿಸೈನರ್‌ಗಳು ಹೆಚ್ಚಿನ ಅವಕಾಶ ಮತ್ತು ಉತ್ತಮ ಧನಲಾಭ ಪಡೆಯುವರು. ಸಹೋದರನ ಮೂಲಕ ಜಮೀನಿನ ಖರೀದಿ ವಿಚಾರದ ಮಾತುಕತೆಗಳು ಜರುಗುವುದು. ಅಧಿಕ ಹೊತ್ತು ವಿಶ್ರಾಂತಿ ಬೇಕೆನಿಸಲಿದೆ.
  • ಧನು
  • ಬಂಧು ಮಿತ್ರರ ಸಹಾಯಗಳನ್ನು ಬಯಸದೆ ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಅಭ್ಯಾಸ ಮಾಡಿ. ಬಾಕಿ ಉಳಿಸಿಕೊಂಡಿರುವ ಕೆಲಸಗಳನ್ನು ಬೇಗ ಮುಗಿಸಿಕೊಳ್ಳುವಂತಹ ಪ್ರಯತ್ನ ನಡೆಯಲಿ.
  • ಮಕರ
  • ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೆಲಸದಲ್ಲಿ ಉತ್ಸಾಹ ವೃದ್ಧಿಯಾಗುವುದು. ಇಂದಿನ ರಾಜಕೀಯ ಸನ್ನಿವೇಶಗಳು ನಿಮಗೆ ಅನುಕೂಲವಾಗಿರುವುದು. ಈ ದಿನ ನಿಮ್ಮ ಆರೋಗ್ಯವು ಸುಧಾರಿಸುವುದು.
  • ಕುಂಭ
  • ಅಪರಿಚಿತ ವ್ಯಕ್ತಿಯೊಬ್ಬರು ಉತ್ತಮ ಉಪಾಯಗಳನ್ನು ಮತ್ತು ಅನುಭವಗಳನ್ನು ನೀಡುವುದಾಗಿ ಹೇಳಿ ತಪ್ಪು ಮಾರ್ಗಕ್ಕೆ ಎಳೆಯಲಿದ್ದಾರೆ. ಶ್ರೀಕ್ಷೇತ್ರಕ್ಕೆ ಹೋಗುವ ಯೋಜನೆಯನ್ನು ಕಾರ್ಯರೂಪಕ್ಕೆ ತನ್ನಿರಿ.
  • ಮೀನ
  • ಕೆಲಸದ ಒತ್ತಡವನ್ನು ಅಥವಾ ಸಂಘ ಸಂಸ್ಥೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಂತಾಗುವುದು. ಒಪ್ಪಿಸಿರುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಿರಿ. ಮನೆಯಲ್ಲಿ ಜವಾಬ್ದಾರಿ ಹೆಚ್ಚಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.