ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತವಾಗಿ ರಾಜಕೀಯ ಸ್ಥಾನ ಸಿಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಸೆಪ್ಟೆಂಬರ್ 2024, 23:02 IST
Last Updated 21 ಸೆಪ್ಟೆಂಬರ್ 2024, 23:02 IST
   
ಮೇಷ
  • ಸ್ವಂತ ಉದ್ಯೋಗ ಮಾಡುವವರಿಗೆ ವರಮಾನದಲ್ಲಿ ಉತ್ತಮಸುಧಾರಣೆಯಾಗುವುದು. ದಂತ ವೈದ್ಯ ವೃತ್ತಿಯವರಿಗೆ ಹಾಗೂ ದಂತ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅನುಕೂಲವಾದ ದಿನ. ಧರ್ಮ ಕಾರ್ಯಗಳಲ್ಲಿ ಭಾಗಿಯಾಗಿ.
  • ವೃಷಭ
  • ಸತ್ಯನಾರಾಯಣ ಸ್ವಾಮಿಯ ಸೇವೆಯನ್ನು ಮಾಡುವುದರಿಂದ ನಿಮ್ಮ ಜಟಿಲ ಸಮಸ್ಯೆಗಳು ಕೂಡ ಸೌಹಾರ್ದಯುತವಾಗಿ ಬಗೆಹರಿಯಲಿದೆ. ಬಹುಮುಖದ ಖರ್ಚು-ವೆಚ್ಚಗಳನ್ನು ನಿರ್ವಹಿಸಬೇಕಾಗಬಹುದು.
  • ಮಿಥುನ
  • ಬಂಧುಗಳ ಮನೆಯ ಶುಭಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಓಡಾಟವಿರುವುದು. ವ್ಯವಹಾರದಲ್ಲಿ ಸೋದರನನ್ನು ಸೇರಿಸಿಕೊಂಡು ನೂತನ ಘಟಕಗಳನ್ನು ಆರಂಭಿಸುವಿರಿ. ನಿಶ್ಚಿತ ರೂಪದಲ್ಲಿ ಕೆಲಸಗಳು ಜರುಗಲಿವೆ.
  • ಕರ್ಕಾಟಕ
  • ಹಿರಿಯರಿಂದ ತಿಳಿದುಕೊಂಡಿದ್ದ ಕೆಲ ವಿಷಯಗಳು ಉಪಯೋಗಕ್ಕೆ ಬರಲಿದೆ. ಯಾರ ನೆರವೂ ಇಲ್ಲದೆ ನಿಮ್ಮೆಲ್ಲ ಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವುದು ಉತ್ತಮ. ಯೋಗಾಭ್ಯಾಸ ಮನಸ್ಸಿಗೆ ಹಿತವೆನಿಸುವುದು.
  • ಸಿಂಹ
  • ವ್ಯಾಪಾರ, ವ್ಯವಹಾರಗಳಲ್ಲಿ ತೀವ್ರವಾದ ಪೈಪೋಟಿ ಎದುರಾಗಿ ಆತಂಕಕ್ಕೆ ಕಾರಣವಾಗಲಿದೆ. ಸಂಧಾನ ಅಥವಾ ಕರಾರು ಒಪ್ಪಂದಗಳು ಅನುಕೂಲಕರ ಎನಿಸಲಿದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಏಕಾಗ್ರತೆ ಅಗತ್ಯ.
  • ಕನ್ಯಾ
  • ದಿನದ ಪ್ರಾರಂಭದಲ್ಲಿ ಕೆಲಸಗಳು ಕುಂಠಿತವಾಗಿ ಸಾಗಿದರೂ ಉತ್ತರಾರ್ಧದ ವೇಳೆಗೆ ತೃಪ್ತಿ ಉಂಟಾಗಲಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುವುದು.
  • ತುಲಾ
  • ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಉತ್ಸಾಹದಿಂದ ಭಾಗವಹಿಸುವಿರಿ. ಕೆಲಸದ ಸರಿ ತಪ್ಪುಗಳ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡಿ. ಬಂಧು-ಮಿತ್ರರ ಒಡನಾಟದಿಂದ ಸಂತೋಷ ತೋರಿಬರಲಿದೆ.
  • ವೃಶ್ಚಿಕ
  • ಕೆಲವು ಸವಾಲುಗಳನ್ನು ಎದುರಿಸುವ ಸಂದರ್ಭಗಳು ಎದುರಾಗಬಹುದು ಮತ್ತು ಅದರಲ್ಲಿ ಸಮ್ಮಿಶ್ರ ಫಲಿತಾಂಶ ಪಡೆಯುವಂತಾಗಲಿದೆ. ಮನೆ ದೇವರಿಗೆ ಪೂಜೆ ಸಲ್ಲಿಸುವಿರಿ.
  • ಧನು
  • ವ್ಯವಹಾರಗಳಲ್ಲಿ ನುರಿತವರ ಸಲಹೆಗಳನ್ನು ಪಡೆದುಕೊಂಡಲ್ಲಿ ಖಂಡಿತವಾಗಿ ಯಶಸ್ವಿಯಾಗುವಿರಿ. ಅನಿರೀಕ್ಷಿತವಾಗಿ ರಾಜಕೀಯದಲ್ಲಿ ಸ್ಥಾನ ದೊರೆತು ರಾಜಕೀಯ ರಂಗದ ಉದ್ದ ಅಗಲದ ಅರಿವಾಗುತ್ತದೆ.
  • ಮಕರ
  • ಬಿಡುವಿಲ್ಲದ ಕೆಲಸ ಮತ್ತು ಮೇಲಾಧಿಕಾರಿಗಳ ಹೆಚ್ಚಿನ ಒತ್ತಡಗಳಿಂದಾಗಿ ವೈಯಕ್ತಿಕ ವಿಷಯಗಳತ್ತ ಗಮನ ಹರಿಸಲು ಸಮಯವಿಲ್ಲದಂತಾಗುವುದು.
  • ಕುಂಭ
  • ಭರವಸೆಯ ಮಾತುಗಳು ಸಹೋದ್ಯೋಗಿಯೊಬ್ಬರಿಗೆ ಆತ್ಮಸ್ಥೈರ್ಯ ತಂದುಕೊಡುವುದು. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಆರಂಭಗೊಳ್ಳಲಿದೆ. ಕಬ್ಬಿಣ ಅಥವಾ ಗ್ಲಾಸ್‌ನಿಂದ ಗಾಯಗಳಾಗಬಹುದು.
  • ಮೀನ
  • ಸಿನಿಮಾ ನಟ,ನಟಿಯರಿಗೆ ಉತ್ತಮ ಅವಕಾಶದ ಶುಭ ಸುದ್ಧಿ ಸಿಗುವುದು. ಹೆಚ್ಚಿನ ಹೊಣೆಗಾರಿಕೆಯನ್ನು ಹೊರಲು ಸಿದ್ಧರಾಗಿರುವಿರಿ. ತಂದೆಯವರ ಮಾತಿನಿಂದ ಅತೃಪ್ತಿಯ ವಾತಾವರಣ ಮೂಡಿ ಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.