ಅನಿವಾರ್ಯ ಕಾರಣದಿಂದ ಬಹು ಮುಖ್ಯ ಕೆಲಸದಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸಿ. ಅನಾರೋಗ್ಯದಿಂದ ವೈದ್ಯರ ಭೇಟಿ ಮಾಡುವಿರಿ.
ವೃಷಭ
ಸಹೋದರರ ಜೊತೆ ತಾಳ್ಮೆ ಕಳೆದುಕೊಂಡು ಕಲಹಗಳನ್ನು ಮಾಡುವಿರಿ. ಮನಸ್ತಾಪಗಳು ಕ್ರಮೇಣ ಬಗೆಹರಿದು ನೆಮ್ಮದಿ ಕಾಣುವಿರಿ. ಮನೆಯಲ್ಲಿ ಪತ್ನಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ.
ಮಿಥುನ
ಹಳೆಯ ಕೆಲಸವನ್ನೆ ಹೊಸ ಹಾಗೂ ಗ್ರಾಹಕರನ್ನು ಸೆಳೆಯುವಂಥ ನಿಯಮಗಳನ್ನು ಹಾಕಿಕೊಂಡು ಪುನಃ ಪ್ರಾರಂಭ ಮಾಡುವಿರಿ. ಲೇವಾದೇವಿ ವ್ಯವಹಾರದಲ್ಲಿ ಜಾಗರೂಕತೆ ಇರಲಿ. ಕೋಪದ ಮೇಲೆ ನಿಯಂತ್ರಣವಿರಲಿ.
ಕರ್ಕಾಟಕ
ಪ್ರತಿ ವೈಯಕ್ತಿಕ ಕೆಲಸಗಳಿಗೂ ಅನಾರೋಗ್ಯದ ಕಾರಣ ಬೇರೆಯವರ ನೆರವು ಬೇಕಾಗುತ್ತದೆ. ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಅಧಿಕ ಪರಿಶ್ರಮ ಹಾಕಿದರೂ ಅದೃಷ್ಟವು ಕೈ ಕೊಡಲಿದೆ.
ಸಿಂಹ
ಜೀವನವು ಮೇಲ್ನೋಟಕ್ಕೆ ಎಲ್ಲರ ಕಣ್ಣಿಗೂ ಉತ್ತಮವಾಗಿ ಕಂಡುಬಂದರೂ ಒಳಗಿನ ಸತ್ಯಾಂಶ ತೋರುವುದು. ಖರ್ಚುವೆಚ್ಚಗಳು ನಿಯಂತ್ರಣದಲ್ಲಿ ಇರಲಿಕ್ಕೆ ಸಾಹಸ ಪಡಬೇಕಾಗುವುದು.
ಕನ್ಯಾ
ಅತಿ ಹಣಕಾಸಿನ ವ್ಯಾಮೋಹದಿಂದ ಪಶ್ಚಾತ್ತಾಪಕ್ಕೆ ಕಾರಣವಾಗದಂತೆ ನೋಡಿಕೊಳ್ಳಿ. ರಾಜಕೀಯ ವ್ಯಕ್ತಿಗಳಿಗೆ ಬಂದ ಹೊಸ ಜವಾಬ್ದಾರಿಯಲ್ಲಿ ಜನಾನುರಾಗ ಹೆಚ್ಚಿಸಿಕೊಳ್ಳುವುದು ಅನಿವಾರ್ಯ.
ತುಲಾ
ನಿಮ್ಮ ಕ್ಷೇತ್ರದಲ್ಲಿ ಶ್ರೇಯಸ್ಸನ್ನು ಪಡೆಯಲು ಉಪಯೋಗಿಸಿದ ತಂತ್ರಗಳು ಈ ಬಾರಿಗೆ ಪ್ರಯೋಜನಕ್ಕೆ ಬರುವುದಿಲ್ಲ. ದೂರದ ಪ್ರಯಾಣದ ಮೊದಲು ಅಲ್ಲಿಯ ಸ್ಥಿತಿಗತಿಗಳನ್ನು ಬಲ್ಲವರಿಂದ ವಿಚಾರಿಸಿ.
ವೃಶ್ಚಿಕ
ಜರುಗಲಿರುವ ಸಂಗತಿ ಗಾಢ ಪರಿಣಾಮ ಬೀರಿ ವೃತ್ತಿಗೆ ಸಂಬಂಧಿಸಿದ ವಿಷಯದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳಲು ಸಹಾಯವಾಗಲಿದೆ. ಹೊಸ ಸ್ಥಳದಲ್ಲಿ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುವಿರಿ.
ಧನು
ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಾಗುತ್ತಿರುವವರು ಯಾವುದೇ ಸಣ್ಣ ವಿಷಯಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಕೆಲಸಕ್ಕೆ ಅನಿರೀಕ್ಷಿತ ಬದಲಾವಣೆಗಳು ಬರಬಹುದು. ವಾತದ ಬಾಧೆ ಉಪಶಮನವಾಗುವುದು.
ಮಕರ
ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದ ಮುಖ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ಕೆಲಸದಲ್ಲಿ ವಿಘ್ನ ಇರಲಿದೆ. ಲಕ್ಷ್ಮಿ ವೆಂಕಟೇಶ್ವರನನ್ನು ಭಕ್ತಿಯಿಂದ ಆರಾಧಿಸಿ. ಸಾಮಾಜಿಕವಾಗಿ ಗೌರವವು ಇಮ್ಮಡಿಗೊಳ್ಳಲಿದೆ.
ಕುಂಭ
ಪತಿ–ಪತ್ನಿಯರ ನಡುವೆ ಪರಸ್ಪರ ಸಮರ್ಪಣಾ ಭಾವವಿದ್ದಲ್ಲಿ ಉತ್ತಮವಾಗಿ ಇರುತ್ತದೆ. ಪ್ರೀತಿಯ ಜೀವನದಲ್ಲಿ ಅನೇಕ ದೀರ್ಘಕಾಲೀನ ಬದಲಾವಣೆಗಳಾಗಬಹುದು. ಅಧಿಕ ಕೊಬ್ಬಿನ ಅಂಶದ ಆಹಾರವನ್ನು ತ್ಯಜಿಸಿ.
ಮೀನ
ದುಡಿಮೆ ಎಷ್ಟು ಮುಖ್ಯವೋ ಅಷ್ಟೇ ವಿಶ್ರಾಂತಿಯೂ ಮುಖ್ಯ ಎಂಬುದನ್ನು ಕಂಡುಕೊಳ್ಳಿರಿ. ನೇರ ನಡೆ-ನುಡಿಯು ವ್ಯವಹಾರವನ್ನು ಕುಂಠಿತಗೊಳಿಸಬಹುದು. ಕ್ರಿಮಿಕೀಟಗಳಿಂದ ತೊಂದರೆಗೆ ಒಳಗಾಗುವಿರಿ.