ದಿನ ಭವಿಷ್ಯ: ಈ ರಾಶಿಯ ಲೋಹದ ವಸ್ತುಗಳ ವ್ಯಾಪಾರಸ್ಥರು ದುಪ್ಪಟ್ಟು ಲಾಭ ಪಡೆಯಬಹುದು
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಆಗಸ್ಟ್ 2024, 0:11 IST
Last Updated 13 ಆಗಸ್ಟ್ 2024, 0:11 IST
ಮೇಷ
ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದು ಮಾರ್ಗದರ್ಶಿಗಳ ಮಾತಿನಂತೆ ಧಾರ್ಮಿಕ ಚುಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಹಿರಿಯರೊಂದಿಗೆ ವ್ಯಾಪಾರ ವ್ಯವಹಾರದ ವಿಚಾರದಲ್ಲಿ ಚರ್ಚೆ ನಡೆಯಲಿದೆ.
ವೃಷಭ
ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂಥ ಕೋರ್ಟಿನಲ್ಲಿರುವ ಹಳೆಯ ವ್ಯಾಜ್ಯಗಳು ಈ ದಿನ ಇತ್ಯರ್ಥಗೊಳ್ಳುವ ಸಂಭವವಿದೆ. ಉದ್ಯೋಗದಲ್ಲಿ ಸಿಗುವಂಥ ವರ್ಗಾವಣೆಯ ಅವಕಾಶಗಳನ್ನು ಬಿಟ್ಟುಕೊಳ್ಳಬೇಡಿ.
ಮಿಥುನ
ವ್ಯಾಪಾರ, ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿನ ಸುಧಾರಣೆಗೆ ಸಾಕಷ್ಟು ಅವಕಾಶವಿದೆ. ಶೀತಬಾಧೆಯಿಂದ ಮುಕ್ತರಾಗಲು ಗಿಡಮೂಲಿಕೆಯ ಕಷಾಯ ಸೇವಿಸಿ. ಮನೆ ಖರೀದಿಸುವ ವಿಷಯ ಇತ್ಯರ್ಥವಾಗುವುದು.
ಕರ್ಕಾಟಕ
ಸಾಲದ ಹಣ ಹಿಂದುರಿಗಿ ಕೈಸೇರುವುದರಿಂದ ಮನೆಯ ರಿಪೇರಿ ಕೆಲಸಗಳಿಗೆ ಹಣ ಖರ್ಚು ಮಾಡುವಿರಿ. ಜಲಮಂಡಳಿ ನೌಕರರಿಗೆ ವೇತನ ಹೆಚ್ಚಳವಾಗಲಿದೆ. ಷೇರು ವ್ಯಾಪಾರ ಅದೃಷ್ಟದಾಯಕವಾಗಿರುತ್ತದೆ.
ಸಿಂಹ
ವ್ಯಾಪಾರ ವ್ಯವಹಾರಗಳಲ್ಲಿ ನಡೆಯುತ್ತಿದ್ದ ಅವ್ಯವಹಾರಗಳು ಹಿಡಿತಕ್ಕೆ ಬರಲಿದೆ. ಸೋಮಾರಿತನ ಶ್ರೇಯಸ್ಸಿಗೆ ಅಡ್ಡಿ ಬರದಂತೆ ಗಮನಹರಿಸಿ. ನೆರೆಯವರ ಸಹಾಯದಿಂದ ಮಗಳ ಮದುವೆ ನಿಶ್ಚಯವಾಗಲಿದೆ.
ಸತ್ಕಾರ ಸಮಾರಂಭಗಳಲ್ಲಿ ಭಾಗವಹಿಸುವಿರಿ ಅಥವಾ ಬಂಧು ಮಿತ್ರರು ಮನೆಗೆ ಬರಲಿದ್ದಾರೆ. ರಾಜಕೀಯ ವ್ಯಕ್ತಿಗಳಿಗೆ ದುರಹಂಕಾರಿ ಎನ್ನುವ ಪಟ್ಟ ಸಿಗುವ ಲಕ್ಷಣಗಳಿವೆ. ಮನೆಯಲ್ಲಿ ಶುಭ ಕಾರ್ಯಗಳಿಗೆ ಪ್ರಯತ್ನ ಮಾಡುವಿರಿ.
ವೃಶ್ಚಿಕ
ಸಹಾಯ ಮಾಡುವ ವಿಚಾರದಲ್ಲಿ ಮುಂದಾಲೋಚನೆಯಿಲ್ಲದೆ ಮುಂದುವರಿಯುವುದನ್ನು ಬದಲು ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಒಮ್ಮೊಮ್ಮೆ ಕಾಡುವ ಸಮಸ್ಯಾ ಸರಪಳಿ ಪರಿಹಾರವಾಗುವುದು.
ಧನು
ಕೆಲಸ ಕಾರ್ಯದಲ್ಲಿ ಸಮಾನ ಮನಸ್ಕರರು ಸಿಗುವುದರಿಂದ ವ್ಯವಸ್ಥಿತವಾಗಿ ಮಾತುಕತೆ ನಡೆದು ಕಾರ್ಯಭಾರ ಸುಗಮವಾಗುತ್ತದೆ. ಸುಗಂಧ ದ್ರವ್ಯಗಳ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ಸಂಭವವಿದೆ.
ಮಕರ
ಯಂತ್ರೋಪಕರಣಗಳ ಮಾರಾಟದಿಂದ ಮತ್ತು ಪಶು ಸಂಗೋಪನೆ ಯಿಂದ ಲಾಭ ಇರುವುದು. ನೈತಿಕವಾಗಿ ಪರಸ್ಪರ ಬೆಂಬಲವಾಗಿರುವ ಸ್ನೇಹ ಸಂಬಂಧ ಮುಂದುವರಿಯಲಿದೆ. ಸಮಾರಂಭಕ್ಕೆ ಆಹ್ವಾನ ಬರುವುದು.
ಕುಂಭ
ಆಯ್ಕೆ ಮಾಡುವ ವಿಚಾರದಲ್ಲಿ ಮನಸ್ಸಿನ ಚಂಚಲ ಸ್ವಭಾವದಿಂದ ಇಂದಿನ ದಿನ ವಿಫಲರಾಗುವ ಸನ್ನಿವೇಶಗಳಿರುವುದು. ಇಂದು ಶರೀರದಲ್ಲಿನ ನವ ಚೈತನ್ಯವು ಕಾರ್ಯಪ್ರವೃತ್ತಿಯನ್ನು ಹೊಂದುವಂತೆ ಮಾಡುವುದು.
ಮೀನ
ಲೋಹದ ವಸ್ತುಗಳನ್ನು ವ್ಯಾಪಾರ ಮಾಡುವವರು ದುಪ್ಪಟ್ಟು ಲಾಭ ಪಡೆಯಬಹುದು. ಅನವಶ್ಯಕವಾಗಿ ಋಣಾತ್ಮಕ ಚಿಂತನೆಗಳನ್ನು ಮಾಡದಿರಿ. ಧಾರ್ಮಿಕ ಚಿಂತನೆಯನ್ನು ಮುಂದುವರಿಸಿ.