ADVERTISEMENT

ದಿನ ಭವಿಷ್ಯ: ಮನೆಯವರೊಂದಿಗೆ ತೀರ್ಥಯಾತ್ರೆಗೆ ತೆರಳುವ ಬಗ್ಗೆ ಚರ್ಚೆ ನಡೆಸುವಿರಿ

ಸೋಮವಾರ, 29 ಡಿಸೆಂಬರ್, 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 29 ಡಿಸೆಂಬರ್ 2025, 0:29 IST
Last Updated 29 ಡಿಸೆಂಬರ್ 2025, 0:29 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಪ್ರಸ್ತುತ ರಾಜಕೀಯ ವಿದ್ಯಮಾನಗಳಿಂದ ಲಾಭವಾಗಲಿದೆ. ಹಿತ-ಶತ್ರುಗಳ ಬಗ್ಗೆ ಎಚ್ಚರ ವಹಿಸಿ. ಕೆಲಸಗಳು ಕಷ್ಟವಾದರೂ ಸ್ವತಃ ನೀವೇ ಸೋಲನ್ನು ಘೋಷಿಸಿಕೊಳ್ಳಬೇಡಿ. ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ ಆಗಬಹುದು.
  • ವೃಷಭ
  • ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಮಾಡಿದ ತಪ್ಪಿನಿಂದ ನಷ್ಟ ಅನುಭವಿಸಬೇಕಾಗುವುದು. ಬರಬೇಕಾಗಿದ್ದ ಹಣಕ್ಕೆ ತುಸು ಅಡಚಣೆಗಳನ್ನು ನಿವಾರಿಸಿಕೊಳ್ಳಬೇಕಾಗುವುದು.
  • ಮಿಥುನ
  • ಕೋರ್ಟು ಕಚೇರಿಯ ಕೆಲಸ ಕಾರ್ಯಗಳು ಪರದಾಟವಿಲ್ಲದೆ ಅನುಕೂಲಕ್ಕೆ ತಕ್ಕಂತೆ ನಡೆಯುತ್ತವೆ. ಸಹೋದರನ ಬಹಳ ದಿನದ ನಂತರದ ಆಗಮನ ಸಂತೋಷಕ್ಕೆ ಕಾರಣವಾಗುತ್ತದೆ.
  • ಕರ್ಕಾಟಕ
  • ವೃತ್ತಿಯಲ್ಲಿನ ಸಣ್ಣ-ಪುಟ್ಟ ಬದಲಾವಣೆ ಧನಲಾಭ ತಂದು ಕೊಡುವುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಹಾಗೂ ಅನುಭವಸ್ಥರ ಸಲಹೆ ಲಭ್ಯವಾಗಲಿದೆ. ವೃತ್ತಿಯಲ್ಲಿ ಅಭಿವೃದ್ಧಿ ಸಮಾಧಾನವನ್ನು ನೀಡಲಿದೆ.
  • ಸಿಂಹ
  • ದಿನಸಿ ವ್ಯಾಪಾರಿಗಳು ವ್ಯಾಪಾರವನ್ನು ವಿಸ್ತರಣೆ ಮಾಡುವುದಕ್ಕಿಂತ ಗುಣಮಟ್ಟ ಕಾಪಾಡುವ ಬಗ್ಗೆ ಗಮನಹರಿಸಿ. ಹಿಂದಿನಿಂದ ಬಂದಂಥ ಆಸ್ತಿಯ ಸಮಸ್ಯೆಗಳು ಮಾತುಕತೆಯ ಮೂಲಕ ಇತ್ಯರ್ಥವಾಗುವುದು.
  • ಕನ್ಯಾ
  • ಆದರ್ಶವಾದಿ ಗುಂಪಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವದಲ್ಲಿ ಒಳ್ಳೆಯ ಬದಲಾವಣೆಗಳಾಗಲಿವೆ. ಕಂಪನಿಯ ವಿದೇಶದಲ್ಲಿನ ಹುದ್ದೆಗಾಗಿ ಅರ್ಜಿ ಸಲ್ಲಿಸಬಹುದು. ಶತ್ರುಗಳ ವಿರುದ್ಧ ಜಯ ಸಾಧಿಸಬಹುದು.
  • ತುಲಾ
  • ನಿಮ್ಮೊಡನೆ ಹರಿದು ಬರುವಂಥ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡಿ. ಬಹಳ ದಿನಗಳ ನಂತರ ಮನಸ್ಸಿಗೆ ಹಿತ ಅನುಭವ ಸಿಗಲಿದೆ. ಉದ್ಯೋಗದಲ್ಲಿ ಬದಲಾವಣೆಗೆ ಪೂರಕವಾದ ಸನ್ನಿವೇಶ ಕಂಡುಬರುತ್ತದೆ.
  • ವೃಶ್ಚಿಕ
  • ನಿರೀಕ್ಷಿಸುತ್ತಿದ್ದಂಥ ವ್ಯವಹಾರಗಳಲ್ಲಿ ನುರಿತವರ ಸಲಹೆಗಳನ್ನುಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಮನೆಯವರೊಂದಿಗೆ ತೀರ್ಥಯಾತ್ರೆಗೆ ತೆರಳುವ ಬಗ್ಗೆ ಚರ್ಚೆ ನಡೆಸುವಿರಿ.
  • ಧನು
  • ಷೇರುಗಳ ಮೇಲೆ ಹೆಚ್ಚಿನ ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಸಲಹೆ ಬರುವುದು. ತೈಲ ಲೇಪನ, ಅಭ್ಯಂಗದಂಥ ವಿಧಿಯ ಆಚರಣೆಯಿಂದ ಆರೋಗ್ಯ ಉತ್ತಮಗೊಳ್ಳುವುದು.
  • ಮಕರ
  • ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ತರುವ ಬದಲು, ಬೆಲೆಕೊಡುವ ಮನಸ್ಥಿತಿ ಬೆಳೆಸಿಕೊಳ್ಳಿರಿ. ದುಡುಕು ಬುದ್ಧಿ ಕಡಿಮೆಯಾಗುವಂಥ ಲಕ್ಷಣಗಳಿವೆ. ನ್ಯಾಯಾಂಗ ಇಲಾಖೆಯವರಿಗೆ ಸೌಲಭ್ಯ ಸಿಗುತ್ತದೆ.
  • ಕುಂಭ
  • ಅರ್ಚಕ, ವೈದಿಕ ವೃತ್ತಿಯವರಿಗೆ ಕಾರ್ಯದೊತ್ತಡ ಅಧಿಕ ಮಟ್ಟದಲ್ಲಿದ್ದರೂ, ಸರಿಸಮಾನ ಗೌರವಧನಕ್ಕೆ ಕೊರತೆ ಕಾಣುವುದಿಲ್ಲ. ಬದುಕನ್ನು ಅರ್ಥಪೂರ್ಣವಾಗಿ ನಡೆಸುವ ಬಗ್ಗೆ ಯೋಚನೆಗಳಿರಲಿ.
  • ಮೀನ
  • ಮಿತ್ರರ ಜೊತೆಗೂಡಿ ಮಾಡುವ ಸಾಹಸ ಕಾರ್ಯಗಳಿಂದ ಜಯ ಸಿಗುವುದು. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಿಷ್ಠೆ, ಪ್ರಾಮಾಣಿಕತೆಗೆ ಗೌರವ ಆದರಗಳು ಸಿಗಲಿವೆ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಉತ್ತಮ ಆದಾಯದ ಅವಕಾಶವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.