ADVERTISEMENT

ದಿನ ಭವಿಷ್ಯ: ಒಪ್ಪತ್ತಿನ ಊಟ ಮಾಡುವುದರಿಂದ ಅಜೀರ್ಣ ಸಮಸ್ಯೆ ನಿವಾರಿಸಿಕೊಳ್ಳಬಹುದು

ದಿನ ಭವಿಷ್ಯ: 17 ಮೇ 2024 ಶುಕ್ರವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 16 ಮೇ 2024, 23:54 IST
Last Updated 16 ಮೇ 2024, 23:54 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಜ್ಜನರ ಹಾಗೂ ದುರ್ಜನರ ಸಹವಾಸಗಳಂತೆ ಫಲಗಳನ್ನು ಕೊಡುವುದು ಅನುಭವಕ್ಕೆ ಬರುತ್ತದೆ. ಹೂವು ಹಣ್ಣುಗಳ ಬೆಳೆಗಾರರಿಗೆ ಲಾಭ ನಷ್ಟಗಳೆರೆಡರ ಅನುಭವವೂ ಆಗಬಹುದು.
  • ವೃಷಭ
  • ನೋಯಿಸಲೆಂದು ಮಾತನಾಡದಿದ್ದರೂ ಮಾತು ಇತರರ ಬೇಸರಕ್ಕೆ ಕಾರಣವಾಗಬಹುದು. ಮನದ ಆಸೆ ಪೂರೈಸಿಕೊಳ್ಳಲು ಹಣ ಖರ್ಚು ಮಾಡುವಿರಿ. ತಲೆನೋವು ಕಾಣಿಸಿಕೊಳ್ಳಬಹುದು.
  • ಮಿಥುನ
  • ಮನೆಯ ಖರ್ಚು ವೆಚ್ಚಗಳ ಮೇಲಿನ ನಿರ್ಲಕ್ಷ್ಯವು ಮುಂದೊಂದು ದಿನದ ಹಣದ ಅಭಾವಕ್ಕೆ ಕಾರಣವಾಗಬಹುದು. ಕುಟುಂಬದ ಸಂಗತಿಗಳನ್ನು ಏನಾದರೂ ಮರೆತೆ ಎಂದು ಜ್ಞಾಪಿಸಿಕೊಳ್ಳಿ.
  • ಕರ್ಕಾಟಕ
  • ಮಾಡಿದ ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯಾಗುವ ಯೋಗ ಈ ದಿನವಿದೆ. ರಫ್ತು ವ್ಯಾಪಾರ ಮಾಡುವವರಿಗೆ ಸಂಪರ್ಕದಲ್ಲಿ ಅಡೆತಡೆಗಳು ಉಂಟಾಗಲಿದೆ. ಹೊಸ ವಸ್ತ್ರಗಳ ಖರೀದಿ ಮಾಡುವಿರಿ.
  • ಸಿಂಹ
  • ನೇರ ನುಡಿಯ ಸ್ವಭಾವದಿಂದಾಗಿ ಸಹೋದ್ಯೋಗಿಗಳಲ್ಲಿ ವಿಶ್ವಾಸ ಹೆಚ್ಚಲಿದೆ. ಸ್ವಭಾವತಃ ಖುಷಿಯಾಗಿ ಇರುವುದನ್ನು ಬಯಸುವ ನೀವು ಪರಜನರ ಮಾತುಗಳಿಗೆ ಕಿವಿಗೊಡಬೇಡಿ.
  • ಕನ್ಯಾ
  • ಇತರರ ಬಗ್ಗೆ ಅನುಕಂಪ ತೋರುವ ನೀವು, ನಿಮ್ಮ ಬಗ್ಗೆಯೂ ಗಮನವಿರಿಸಿಕೊಳ್ಳಬೇಕೆಂದು ಮರೆಯದಿರಿ. ಅನುಭವೇ ಇಲ್ಲದೆ ಮಾಡಿದ ಅಡುಗೆಯು ಗುಣಮಟ್ಟದ್ದಾಗುತ್ತದೆ. ಮಕ್ಕಳೊಂದಿಗೆ ಸಮಯ ಕಳೆಯುವಿರಿ.
  • ತುಲಾ
  • ರೇಷ್ಮೆ ನೇಕಾರರು ಉತ್ತಮ ಮಟ್ಟದ ನೇಯ್ಗೆಯಿಂದ ಏಳಿಗೆ ಹೊಂದುವ ಸಾಧ್ಯತೆಗಳಿವೆ. ಪ್ರಾಕೃತ ಭಾಷಾತಜ್ಞರಿಗೆ ಬೇಡಿಕೆ ಬರುವಂತಹ ಸಾಧ್ಯತೆಗಳಿವೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
  • ವೃಶ್ಚಿಕ
  • ಖರ್ಚುವೆಚ್ಚಗಳ ನಿಯಂತ್ರಣಕ್ಕಾಗಿ ಹರಸಾಹಸ ಪಡಬೇಕಾಗುವುದು. ದುಃಖಕರ ವಿಚಾರವನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾದದಂತೆ ಭಾಸವಾಗುವುದು.
  • ಧನು
  • ಇತ್ತೀಚಿನ ದಿನಗಳಲ್ಲಿ ಹೊಸ ಪರಿಚಯವು ಯಾವುದೋ ಒಂದು ತರಹದಿಂದ ಪ್ರಯೋಜನಕ್ಕೆ ಬರಲಿದೆ. ಪ್ರತಿಭೆ ಮತ್ತು ಕೌಶಲಗಳು ಬೆಳಕಿಗೆ ಬಂದು ಇತರರಿಗೆ ವಿಶೇಷ ವ್ಯಕ್ತಿ ಎನಿಸುವಿರಿ.
  • ಮಕರ
  • ನಿರಂತರ ಸೇವೆಗಾಗಿ ಮಕ್ಕಳ ಪ್ರತಿಜ್ಞೆಗಳು ಬಹಳ ಹೆಮ್ಮೆ ಪಡುವಂತೆ ಮಾಡುತ್ತವೆ. ಕಂಪನಿಯ ಹೊಸ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಹೆಗ್ಗಳಿಕೆ ನಿಮ್ಮದಾಗಲಿದೆ
  • ಕುಂಭ
  • ಹೊಸ ಕ್ಲಿನಿಕ್ ಆರಂಭದ ಶುಭ ಕಾರ್ಯಗಳ ಬಗ್ಗೆ ಹಿರಿಯರೊಡನೆ ಸಮಾಲೋಚನೆ ನಡೆದು ತೀರ್ಮಾನ ಸಿಗಲಿದೆ. ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಆಸಕ್ತಿ ಹೆಚ್ಚುವುದು, ಜೊತೆಗೆ ಲಾಭವೂ ಇದೆ.
  • ಮೀನ
  • ಅಂಗಾಂಗ ಕೃಷಿಯ ಸಂಶೋಧನೆಯಲ್ಲಿ ತೊಡಗಿರುವವರಿಗೆ ಹೊಸ ಸವಾಲುಗಳು ಎದುರಾಗುತ್ತವೆ. ಒಪ್ಪತ್ತಿನ ಊಟವನ್ನು ಮಾಡುವುದರಿಂದಾಗಿ ಅಜೀರ್ಣ ,ಇನ್ನಿತರ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.