ADVERTISEMENT

ದಿನ ಭವಿಷ್ಯ: ಕರ್ಮನಿಷ್ಠೆ, ಪ್ರಾಮಾಣಿಕತೆಗೆ ತಕ್ಕ ಫಲ ಪಡೆಯುತ್ತೀರಿ.

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 4 ಆಗಸ್ಟ್ 2025, 20:49 IST
Last Updated 4 ಆಗಸ್ಟ್ 2025, 20:49 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಇಂದಿನ ಕಾರ್ಯ ವೈಖರಿಯನ್ನು ಸ್ವಲ್ಪ ಬದಲಿಸಿ, ಹೊಸ ಕೆಲಸವನ್ನು ಮಾಡಿದರೆ ಜಯ ಕಾಣುವಿರಿ. ಕಠಿಣ ಶ್ರಮದ ಫಲವಾಗಿ ಬಯಸಿದ ಸಂತೋಷದ ಜತೆಗೆ ಹೊಸ ಅನುಭವ ಸಿಗಲಿದೆ.
  • ವೃಷಭ
  • ಪಿತೃ ವರ್ಗದವರ ಸಹಾಯ ಹಸ್ತ ಇರಲಿದೆ. ಜೀವನದಲ್ಲಿ ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು, ದುಃಖಗಳೆಲ್ಲಾ ದೂರಾಗಲಿವೆ. ಸ್ವಲ್ಪ ಹಣ ಖರ್ಚು ಮಾಡಿದಲ್ಲಿ ಸರ್ಕಾರಿ ಕೆಲಸವು ಸಾಧ್ಯ.
  • ಮಿಥುನ
  • ಶಸ್ತ್ರಚಿಕಿತ್ಸಾ ವೈದ್ಯರಿಗೆ ಪ್ರಶಂಸೆಯ ಮಾತುಗಳು ಕೇಳಿ ಬರಲಿವೆ. ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವುದು. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಅವಕಾಶಗಳು ಅರಸಿ ಬರಲಿವೆ.
  • ಕರ್ಕಾಟಕ
  • ವೃತ್ತಿ ಜೀವನಕ್ಕೆ ಸಂಬಂಧಪಟ್ಟಂತೆ ನಿರ್ಣಯ ಕೈಗೊಳ್ಳಲು ಆಪ್ತರೊಬ್ಬರ ಸಲಹೆ ಕೇಳುವಿರಿ. ಹಣದ ಹರಿವು ನಿಧಾನವಾಗಿ ಅನುಭವಕ್ಕೆ ಬರಲಿದೆ. ಶ್ರೀವಿಷ್ಣುಸಹಸ್ರನಾಮದ ಪಠಣೆಯು ನೆಮ್ಮದಿಯನ್ನು ತರುವುದು.
  • ಸಿಂಹ
  • ಬದುಕಿನ ಬಗ್ಗೆ ಸಂಗಾತಿ ಹೇಳಿದ ಮುಂದಾಲೋಚನೆಯ ವಿಚಾರಗಳಿಗೆ ಮನ್ನಣೆ ನೀಡುವುದು ಉತ್ತಮ. ಜಮೀನು ಕೊಡುಕೊಳ್ಳುವಿಕೆ ವ್ಯವಹಾರಗಳು ಹೆಚ್ಚಾಗಲಿವೆ. ಕಾರ್ಮಿಕರಿಗೆ ಆಡಳಿತ ವರ್ಗದಿಂದ ಅನುಕೂಲಗಳು ಸಿಗಲಿವೆ.
  • ಕನ್ಯಾ
  • ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಅರ್ಥಮಾಡಿಕೊಂಡರೆ ಉತ್ತಮ. ಗೃಹಕೃತ್ಯದ ಪೂರ್ಣ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕ ವೃತ್ತಿ ಕೈಗೊಳ್ಳಿ.
  • ತುಲಾ
  • ಗಣ್ಯ ವ್ಯಕ್ತಿಗಳ ಸಹಾಯದಿಂದ ಸಮಸ್ಯೆಗಳನ್ನು ಜಯಿಸುವಿರಿ. ವೃತ್ತಿಪರ ಕೆಲಸಗಳಲ್ಲಿ ನಿರ್ದಾಕ್ಷಿಣ್ಯವಾಗಿ ವ್ಯವಹರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿವೇಶನ ಖರೀದಿಸುವ ಯೋಜನೆ ಹಾಕಿಕೊಳ್ಳಬಹುದು.
  • ವೃಶ್ಚಿಕ
  • ಕರ್ಮನಿಷ್ಠೆ ಮತ್ತು ಪ್ರಾಮಾಣಿಕತೆಗೆ ತಕ್ಕ ಫಲ ಪಡೆಯುತ್ತೀರಿ. ಸರಳ ಸ್ವಭಾವದಿಂದ ಮೆಚ್ಚುಗೆ ಗಳಿಸುವಿರಿ. ವರ್ಗಾವಣೆಯಿಂದ ಸಂಸಾರದಿಂದ ದೂರ ಉಳಿಯಲಿದ್ದೀರಿ. ವೈದ್ಯ ವೃತ್ತಿಯವರಿಗೆ ವಿಶೇಷ ಅನುಭವ ಸಿಗಲಿದೆ.
  • ಧನು
  • ಸಹೋದರಿಯರಲ್ಲಿ ಸ್ವ-ಪ್ರಯತ್ನದಿಂದ ಸಂಬಂಧ ಉತ್ತಮ ಪಡಿಸಿಕೊಳ್ಳಿ. ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು ರಾಜಕೀಯ ಲಾಭ ಪಡೆದುಕೊಳ್ಳುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.
  • ಮಕರ
  • ಸಂತಾನ ಪ್ರಾಪ್ತಿಯಾಗಲಿದ್ದು, ಸಂಸಾರದಲ್ಲಿ ಸಂತೃಪ್ತ ಜೀವನ ನಡೆಸುವಿರಿ. ತಾಳ್ಮೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಎಚ್ಚರಿಕೆಯ ಮಾತುಗಳು ಕೇಳಬೇಕಾಗಬಹುದು. ಸಂಯಮದ ನಡವಳಿಕೆ ಅಗತ್ಯ.
  • ಕುಂಭ
  • ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲು ದೇವರ ಧ್ಯಾನದಲ್ಲಿ ತೊಡಗುವುದು ಸರಿಯಾದ ಮಾರ್ಗ. ಗುತ್ತಿಗೆದಾರರ ಹತ್ತಿರ ಗೃಹ ನಿರ್ಮಾಣದ ವಿಚಾರದಲ್ಲಿ ಪಾಠ ಕಲಿಯುವಂತಾಗಲಿದೆ. ಅಧಿಕ ಸುತ್ತಾಟದಿಂದ ಆಯಾಸ.
  • ಮೀನ
  • ಮಾತಿನಿಂದ ಬೇರೆಯವರ ಮನಸ್ಸಿಗೆ ನೋವು ಉಂಟಾಗದಂತೆ ನೋಡಿಕೊಳ್ಳಿ. ಮಕ್ಕಳ ಆರೋಗ್ಯದಲ್ಲಿ ಕೊರತೆ ಇರುವುದಿಲ್ಲ. ಮಂಜುನಾಥನ ಸೇವೆ ಮಾಡುವುದರಿಂದ ಕೋರ್ಟು ವ್ಯವಹಾರಗಳಲ್ಲಿ ಮುನ್ನಡೆ ಕಾಣಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.