ADVERTISEMENT

ದಿನ ಭವಿಷ್ಯ: ಮೇಲಧಿಕಾರಿಗಳ ದುರ್ನಡತೆ ಸಹಿಸುವುದು ಕಷ್ಟ, ಮಿತ್ರರು ಸಹಾಯ ಮಾಡುವರು

ದಿನ ಭವಿಷ್ಯ: 25 ಜುಲೈ 2024 ಗುರುವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಜುಲೈ 2024, 23:34 IST
Last Updated 24 ಜುಲೈ 2024, 23:34 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವೈಯಕ್ತಿಕ ಕೆಲಸಗಳಿಗೆ ಮೇಲಧಿಕಾರಿಗಳಿಂದ ಅಡಚಣೆ ಇರುವುದಿಲ್ಲ. ನಿಯಮ, ನಿಷ್ಠೆಗಳಿಂದ ಅಧಿಕಾರದಲ್ಲಿ ಪದೋನ್ನತಿ ಪಡೆಯಬಹುದು. ಕ್ರೀಡಾಪಟುಗಳಿಗೆ ದೇಹಬಾಧೆ ಕಾಣಿಸಬಹುದು.
  • ವೃಷಭ
  • ಮಾನಸಿಕ ನೆಮ್ಮದಿಗಾಗಿ ಧಾರ್ಮಿಕ ಕಾರ್ಯಗಳನ್ನು ಅಥವಾ ಪುಣ್ಯಕ್ಷೇತ್ರಗಳ ದರ್ಶನ ಮಾಡಲಿರುವಿರಿ. ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ಕಾಣುವಿರಿ. ಅನವಶ್ಯಕವಾಗಿ ಬಳಸುತ್ತಿರುವ ಹಣದ ಬಗ್ಗೆ ಗಮನವಿರಲಿ.
  • ಮಿಥುನ
  • ಕಲೆ, ಆಲಂಕಾರಿಕ ಹಾಗೂ ವೈಭೋಗ ವಸ್ತುಗಳಿಂದಾಗಿ ಹೆಚ್ಚಿನ ಲಾಭಾಂಶ ನಿರೀಕ್ಷಿಸಬಹುದು. ಪೊಲೀಸ್ ಅಧಿಕಾರಿಗಳು ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವುದು.
  • ಕರ್ಕಾಟಕ
  • ಅಪರಿಚಿತ ವ್ಯಕ್ತಿಯೊಬ್ಬರಿಂದ ಸಲಹೆಯೊಂದನ್ನು ಪಡೆಯಲಿದ್ದೀರಿ. ಅದನ್ನು ಜೀವನದಲ್ಲಿ ರೂಢಿಸಿಕೊಳ್ಳಿ. ಕುಟುಂಬ ವರ್ಗದವರ ಉತ್ತಮ ಬೆಂಬಲವಿರುವುದು. ಸ್ಪರ್ಧಾ ಮನೋಭಾವ ತೀವ್ರಗೊಳ್ಳುವುದು.
  • ಸಿಂಹ
  • ಹೊಸ ಆಸೆಗಳನ್ನು ಈಡೇರಿಸಿಕೊಳ್ಳುವಂಥ ಉತ್ತಮ ಅವಕಾಶಗಳು ಎದುರಾಗುವುವು. ಆಫೀಸಿನ ಕೆಲಸಗಳಿಗಾಗಿ ದೂರದ ಪ್ರಯಾಣ ಲಾಭದಾಯಕ. ರಾಜಕೀಯ ವಿದ್ಯಮಾನಗಳನ್ನು ಎಚ್ಚರಿಕೆಯಿಂದ ಗಮನಿರಿ.
  • ಕನ್ಯಾ
  • ಅಧಿಕಾರಿ ವರ್ಗದವರ ಉತ್ತೇಜನದಿಂದಾಗಿ ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಜಯ ಲಭಿಸಲು ಸಾಧ್ಯ. ಸಹೋದ್ಯೋಗಿಗಳ ಸಂಯಮದ ವರ್ತನೆಯಿಂದ ಅನುಕೂಲವಾಗಲಿದೆ.
  • ತುಲಾ
  • ಇತರರಿಗೆ ನೋವಾಗದಂತೆ, ಅಸೂಯೆ ಉಂಟಾಗದಂತೆ ಕಾರ್ಯ ಸಾಧಿಸಿಕೊಳ್ಳುವುದು ಉತ್ತಮ. ಹಿರಿಯರ ಮಧ್ಯಸ್ತಿಕೆಯಿಂದ ಭೂ ವಿವಾದ ಬಗೆಹರಿಯುವುದು. ಬೆಂಕಿಯಿಂದ ಅನಾಹುತಗಳು ಸಂಭವಿಸಬಹುದು.
  • ವೃಶ್ಚಿಕ
  • ಕರ್ತವ್ಯ ದೃಷ್ಟಿಯಿಂದ ವೃತ್ತಿಕ್ಷೇತ್ರದಲ್ಲಿ ಒಂದೇ ಮನಸ್ಸಿನಲ್ಲಿ ದುಡಿದರೆ ಸಮಾಧಾನ ಹೆಚ್ಚುತ್ತದೆ. ನಾಸ್ತಿಕತೆಯನ್ನು ಬದಿಗಿಟ್ಟು ದೇವತಾರಾಧನೆಯ ಹಾದಿ ಹಿಡಿಯಿರಿ. ಪೊಲೀಸ್ ಸಿಬ್ಬಂದಿಗೆ ಕೆಲಸವಿರಲಿದೆ.
  • ಧನು
  • ಸ್ವಲ್ಪ ಜಾಗ್ರತೆ ವಹಿಸಿದಲ್ಲಿ ಕೈಗೊಂಡ ಪೂರ್ವನಿಯೋಜಿತ ಕಾರ್ಯಗಳೆಲ್ಲಾ ಉತ್ತಮ ರೀತಿಯಲ್ಲಿ ನಡೆದು ಹೋಗುವುದು. ಚರ ಅಥವಾ ಸ್ಥಿರ ಸ್ವತ್ತುಗಳು ಸಿಗುವ ಸಂಭವವಿದೆ. ಸುಖ ಸಂಪತ್ತಿನ ಚಿಂತೆ ನಿದ್ದೆಗೆಡಿಸುತ್ತದೆ.
  • ಮಕರ
  • ಕೇವಲ ದೇವತಾ ಕೃಪೆಯಿಂದ ಕೆಲಸಗಳನ್ನೂ ಲಾಭಮಯವಾಗಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಬುದ್ಧಿವಂತಿಕೆಯನ್ನೂ ಉಪಯೋಗಿಸ ಬೇಕಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಪಡಬೇಕಾಗುವುದು.
  • ಕುಂಭ
  • ಅಧ್ಯಯನ ಸಂಶೋಧನೆಯಿಂದ ಯೋಚಿಸಿದ ಹಣ ಮತ್ತು ಖ್ಯಾತಿ ಇಷ್ಟದಂತೆ ಪಡೆದುಕೊಳ್ಳಲು ಆಗದೇ ಇರುವುದರಿಂದ ನೆಮ್ಮದಿ ಕಳೆದುಕೊಳ್ಳುವಂತಾಗಲಿದೆ. ಸಾಧನೆ ಹಾಗೂ ಅಭಿವೃದ್ಧಿ ಸಾಧಿಸುವ ದಿನ ಎನಿಸಲಿದೆ.
  • ಮೀನ
  • ಉದ್ಯೋಗದಲ್ಲಿ ಸ್ಥಳ ಬದಲಾವಣೆ ಪಡೆಯುವ ಉದ್ದೇಶವಿದ್ದರೆ, ಅಧಿಕಾರಿಗಳೊಡನೆ ಹೇಳಿಕೊಳ್ಳಲು ಹಿಂಜರಿಕೆ ಬೇಡ. ಮೇಲಧಿಕಾರಿಗಳ ದುರ್ನಡತೆ ಸಹಿಸುವುದು ಕಷ್ಟ. ಮಿತ್ರರು ಸಕಾಲಕ್ಕೆ ಆಗುವರು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.