ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ವ್ಯವಹಾರದಲ್ಲಿ ಉತ್ತಮ ಲಾಭವಿರುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ಅಕ್ಟೋಬರ್ 2025, 1:27 IST
Last Updated 17 ಅಕ್ಟೋಬರ್ 2025, 1:27 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಪ್ರಯಾಣದ ಅವಕಾಶ ಒದಗಿ ಬರಬಹುದು. ಮನೆಯ ವಿಷಯಗಳತ್ತ ಹೆಚ್ಚಿನ ಗಮನಹರಿಸ ಬೇಕಾಗುತ್ತದೆ. ವ್ಯವಹಾರದ ಅಭಿವೃದ್ಧಿಗೆ ಒಳ್ಳೆಯ ಪಾಲುದಾರರೊಬ್ಬರು ದೊರೆಯಲಿದ್ದಾರೆ.
  • ವೃಷಭ
  • ಎದುರಾಗಿರುವ ಸಂದಿಗ್ಧ ಪರಿಸ್ಥಿತಿ ಮಾರ್ಗದರ್ಶಕರ ಸಲಹೆ ಪಡೆದು ನಿಭಾಯಿಸುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಅಸ್ಥಿರತೆ ಎದುರಾಗುವುದು. ಗುರಿಯನ್ನು ಸಾಧಿಸುವ ಬಗ್ಗೆ ಮಾತ್ರ ಗಮನವಿರಲಿ.
  • ಮಿಥುನ
  • ವಿವಾಹ ವಿಷಯಗಳು ನಿಶ್ಚಿತಗೊಂಡಿದ್ದರೂ ದೃಢಪಡಿಸಿಕೊಳ್ಳುವುದು ಉತ್ತಮ ಅನಿಸುತ್ತದೆ. ಮುಕ್ತ ಮಾತುಕತೆಗಳಿಂದ ವ್ಯವಹಾರ ಸಿಗುತ್ತದೆ. ಮಾಧ್ಯಮ ಸಂಸ್ಥೆಗಳವರಿಗೆ ಉತ್ತಮ ದಿನ.
  • ಕರ್ಕಾಟಕ
  • ಹೆಚ್ಚಿನ ಉತ್ಸಾಹ ಕಾಣಿಸುತ್ತಿದ್ದು ಹೊಸದೊಂದು ಹಾದಿಯಲ್ಲಿ ನಡೆಯಲಿದ್ದೀರಿ. ಹವಾಮಾನ ಬದಲಾವಣೆ ಆರೋಗ್ಯದ ಮತ್ತು ಮನಸ್ಥಿತಿಯ ಮೇಲೆ ಪ್ರಭಾವ ಬೀರಲಿದೆ. ಸುಬ್ರಹ್ಮಣ್ಯನ ಸೇವೆಯಿಂದ ಶುಭಪ್ರಾಪ್ತಿ.
  • ಸಿಂಹ
  • ಬರುವ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವಿರಿ. ಎಲೆಕ್ಟ್ರಿಕಲ್‌ ಕಂಟ್ರಾಕ್ಟರ್‌ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ ವೃತ್ತಿ ಮತ್ತು ಸಹ-ಕೆಲಸಗಾರರತ್ತ ಗಮನಹರಿಸಿ.
  • ಕನ್ಯಾ
  • ಕಾರ್ಯರಂಗದಲ್ಲಿ ಶ್ರದ್ಧೆಗೆ ಮತ್ತು ಶ್ರಮಕ್ಕೆ ತಕ್ಕ ಫಲ ನಿರೀಕ್ಷಿಸಬಹುದು. ನಿಜ ಮಾರ್ಗದಿಂದ ಕಾರ್ಯ ಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ವ್ಯವಹಾರದಲ್ಲಿ ಉತ್ತಮ ಲಾಭವಿರುವುದು.
  • ತುಲಾ
  • ವಿನಾಶಕಾರಿ ಪ್ರವೃತ್ತಿಗಳನ್ನು ದ್ವೇಷಿಗಳೇ ಆಗಿದ್ದರೂ ಪ್ರಯೋಗಿಸುವ ಯೋಚನೆ ಮಾಡದಿರಿ. ಸಂಸಾರ ನಿರ್ವಹಣೆಯ ವಿಷಯದಲ್ಲಿ ಖಚಿತ ನಿರ್ಧಾರ ತೆಗೆದುಕೊಳ್ಳಬೇಕಾಗುವುದು. ವ್ಯವಹಾರದಲ್ಲಿ ಚಾಣಾಕ್ಷತನ ಇರಲಿ.
  • ವೃಶ್ಚಿಕ
  • ಕರಗತವಾಗಿರುವ ಕೆಲಸವನ್ನೇ ಮಾಡಲು ಹೇಳಿದಾಗ ಗಡಿಬಿಡಿಯ ಕಾರಣವಾಗಿ ವ್ಯತ್ಯಾಸಗಳಾಗಬಹುದು. ಮನೆ ಸ್ವಚ್ಛತಾ ಪ್ರಕ್ರಿಯೆಯಲ್ಲಿ ಹಳೆ ನೆನಪನ್ನು ಮರುಕಳಿಸುವಂಥ ವಸ್ತುಗಳು ಲಭ್ಯವಾಗುತ್ತವೆ.
  • ಧನು
  • ಉನ್ನತ ವ್ಯಾಸಂಗದ ವಿಚಾರದಲ್ಲಿ ನಿಮ್ಮ ನಿಲುವನ್ನು ತಿಳಿಸಿ. ಸಾಮರಸ್ಯದ ಬದುಕನ್ನು ಮಕ್ಕಳಿಗೆ ಮನವರಿಕೆ ಮಾಡದ ಹೊರತು ಕೌಟುಂಬಿಕ ಕಲಹಗಳು ಇತ್ಯರ್ಥವಾಗದು.
  • ಮಕರ
  • ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿದಲ್ಲಿ ಪರಿಹಾರವಾಗುವುದು. ಕಠಿಣ ದಿನವಾಗಿರುತ್ತದೆ. ಮನೋನಿಯಂತ್ರಣದಿಂದ ಆರೋಗ್ಯವನ್ನು ಮತ್ತು ಮನಸ್ಸಿನ ಅಸಮಾಧಾನಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.
  • ಕುಂಭ
  • ಎಲ್ಲಾ ವಿಷಯಗಳಲ್ಲೂ ಮುಂದಾಲೋಚನೆ ಹಾಗೂ ವಿವೇಚನೆಯಿಂದ ನಡೆದುಕೊಂಡಲ್ಲಿ ಹೆಚ್ಚಿನ ಏಳಿಗೆ, ಯಶಸ್ಸು ಸಿಗಲಿದೆ. ದಿನದ ಆರಂಭದಲ್ಲಿ ವಿಪರೀತ ಶ್ರಮ ಪಡಬೇಕಾಗಿ ಬರುವುದು. ವ್ಯಾಪಾರದಲ್ಲಿ ಲಾಭವಿದೆ.
  • ಮೀನ
  • ಪ್ರಕೃತಿಯ ಸಣ್ಣ ಸಣ್ಣ ಬದಲಾವಣೆಗಳನ್ನು ಗಮನಿಸಿ ಬರೆದಂಥ ಕಾವ್ಯವು ಜನಮಾನಸವನ್ನು ಗೆಲ್ಲಲಿದೆ. ವೃತ್ತಿ ವಿಷಯಗಳಲ್ಲಿ ಬಯಸದೇ ಸದವಕಾಶ ಎದುರಾಗುತ್ತದೆ. ಬಂದಂತಹ ಅವಕಾಶಗಳಿಂದ ತಪ್ಪಿಸಿಕೊಳ್ಳಬೇಡಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.