ADVERTISEMENT

ದಿನ ಭವಿಷ್ಯ: ಈ ರಾಶಿಯವರು ಉನ್ನತ ವ್ಯಾಸಂಗದ ಕಡೆ ಗಮನ ಹರಿಸುವುದು ಒಳಿತು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 29 ಆಗಸ್ಟ್ 2024, 22:30 IST
Last Updated 29 ಆಗಸ್ಟ್ 2024, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅಧಿಕವಾಗಿ ಎಣ್ಣೆಯಲ್ಲಿ ಕರಿದ ಪದಾರ್ಥ  ದೇಹಪ್ರಕೃತಿಗೆ ಸರಿ ಹೊಂದುವುದಿಲ್ಲ. ಗುಪ್ತಚರ ದಳ ಮಂದಿಗೆ ಕಾರ್ಯಭಾರಗಳು ಹೆಚ್ಚಲಿವೆ. ಮನೆಯಲ್ಲಿನ ಆಗು ಹೋಗುಗಳ ಬಗೆಗೆ ಹೆಚ್ಚು ಗಮನ ನೀಡಬೇಕಾಗುವುದು.
  • ವೃಷಭ
  • ಗುತ್ತಿಗೆ ವ್ಯವಹಾರಗಳಲ್ಲಿ ಎಡವಿ ಬೀಳಬಹುದು. ಜಾಗ್ರತರಾಗಿರಿ. ಸುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ವ್ಯವಹರಿಸಿ.  ವಿಷ್ಣುಸಹಸ್ರನಾಮದ ಪಠಣೆಯಿಂದ ನೆಮ್ಮದಿ. 
  • ಮಿಥುನ
  • ಉಪಹಾರ ಮಂದಿರ, ಐಸ್‌ಕ್ರೀಮ್, ತಂಪುಪಾನೀಯದ ಅಂಗಡಿಯವರಿಗೆ ಈ ದಿನವು ಸುಗ್ಗಿ ಹಬ್ಬದಂತಾಗುವುದು.   ಅಪರಿಚಿತರೊಬ್ಬರ ಅನವಶ್ಯಕ ಮಾತುಗಳು  ತಾಳ್ಮೆಯನ್ನು ಕೆಡಿಸುತ್ತವೆ
  • ಕರ್ಕಾಟಕ
  • ಸತ್ಯದ ಹಾದಿಗೆ ಅಡೆತಡೆಗಳಿರುತ್ತವೆ ಎಂಬುದನ್ನು ಮರೆಯದಿರಿ. ಜಯ ಇದೆ ಎಂಬುದನ್ನು ಅರಿಯಿರಿ. ವೈದ್ಯ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ ಕಂಡು ಬರುವುದು. ಮಗಳ ಮಾತಿಗೆ ಬೆಲೆ ಕೊಡಿ.
  • ಸಿಂಹ
  • ಈ ದಿನ ಗ್ರಹಗಳು ಪೂರಕವಾಗಿವೆ. ನಿಮ್ಮಿಚ್ಛೆಯಂತೆ ಚಟುವಟಿಕೆಗಳು ನಡೆಯುವುದು. ಈ ಫಲವನ್ನು ಸದುಪಯೋಗಪಡಿಸಿಕೊಳ್ಳಿರಿ. ಕೆಲವು ಘಟನಾ ವಳಿಗಳು ಶಕುನಗಳಂತೆ ಕಂಡು ಕೆಲವು ದುರ್ಘಟನೆಗಳಿಂದ ಪಾರಾಗುವಿರಿ.
  • ಕನ್ಯಾ
  • ಕೆಲಸವನ್ನು ಹುಡುಕುವ ಬದಲು ಉನ್ನತ ವಿದ್ಯಾಭ್ಯಾಸದ ಬಗ್ಗೆ ಒಲವು ತೋರಿಸುವುದು ಈ ಸಮಯದಲ್ಲಿ ಸೂಕ್ತ  ಕಾಣುತ್ತದೆ. ಆಯುರ್ವೇದದ ಔಷಧಿಯ ಸೇವನೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.
  • ತುಲಾ
  • ಬಹುಜನರಲ್ಲಿ ಮಾಡಿದ ಸಾಲಗಳು ತೀರಿದ್ದರಿಂದ  ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿದೆ. ಅವಿವಾಹಿತರ ಮನೋಕಾಮನೆಗಳು ಪೂರ್ಣಗೊಳ್ಳುವ ದಿನವಾಗುವುದು. ಗುರುವಿನ ಮಾರ್ಗದರ್ಶನ ಪಡೆಯುವಿರಿ.
  • ವೃಶ್ಚಿಕ
  • ಪ್ರಯಾಣ ಅಂದುಕೊಂಡಂತೆ ಸುಗಮವಾಗಿರುವುದಿಲ್ಲ.  ರಾಹುಕಾಲದ ನಂತರ ಸಂಚಾರ ಮಾಡಿ. ಕುಟುಂಬದಲ್ಲಿ ನಡೆದ ದುರ್ಘಟನೆಗಳಿಂದ ಮನಸ್ಸು ದುರ್ಬಲವಾಗಬಹುದು.
  • ಧನು
  • ಉದ್ಯೋಗದಲ್ಲಿನ ಪ್ರಯತ್ನಗಳು ವ್ಯಕ್ತಿಯೊಬ್ಬರ ಬೆಂಬಲದಿಂದ ನೆರವೇರುವುದು.  ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಿರಿ. ದೃಢ ನಿರ್ಧಾರವನ್ನು ಕೈಗೊಂಡ ಫಲದಿಂದಾಗಿ ಒಳ್ಳೆಯ ಫಲಿತಾಂಶ ಪಡೆಯುವಿರಿ.
  • ಮಕರ
  • ಹೊಸ ನಿರ್ಮಾಣ ಕಾರ್ಯದಂಥ ಯೋಜನೆಗಳು ನಿರಾತಂಕವಾಗಿ ಮುಂದುವರೆಯಲಿವೆ. ಆಂಜನೇಯನ ಆರಾಧನೆಯಿಂದ   ಭಯವನ್ನು ಹೋಗಲಾಡಿಸಿಕೊಳ್ಳಬಹುದು. ಹೈನುಗಾರರಿಗೆ ಬೇಡಿಕೆ ಹೆಚ್ಚಲಿದೆ.
  • ಕುಂಭ
  • ಸಾಮರ್ಥ್ಯ, ಸೇವಾ ಮನೋಭಾವಗಳಿಂದಾಗಿ ಸಂಸ್ಥೆಯಲ್ಲಿ  ಜವಾಬ್ದಾರಿಯುತ ಹುದ್ದೆ ನಿಮ್ಮದಾಗಲಿದೆ. ಬದಲಾವಣೆ ಬಯಸಿದಲ್ಲಿ ಕಾಯುವುದು ಅವಶ್ಯ. ಕುಟುಂಬದ ಕಿರಿಯ ಸೋದರನಿಗೆ ವಿವಾಹ ನಿಶ್ಚಯವಾಗುವುದು.
  • ಮೀನ
  • ಸರ್ಕಾರಿ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿಕೊಳ್ಳುವ ಯೋಚನೆಯನ್ನು ಮಾಡಿ. ಮಕ್ಕಳನ್ನು ಮಳೆಯಲ್ಲಿ ನೆನೆಯದಂತೆ ,ಆಡದಂತೆ ನೋಡಿಕೊಳ್ಳುವುದೇ ಸವಾಲಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.