ADVERTISEMENT

ದಿನ ಭವಿಷ್ಯ: ಈ ರಾಶಿಯವರು ನಿಸ್ವಾರ್ಥ, ತ್ಯಾಗದ ಮನೋಭಾವ ಬೆಳೆಸಿಕೊಳ್ಳುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಜನವರಿ 2026, 23:30 IST
Last Updated 24 ಜನವರಿ 2026, 23:30 IST
   
ಮೇಷ
  • ಪ್ರಭಾವಿ ವ್ಯಕ್ತಿಗಳ ಸಹಾಯ ಬಳಸಿಕೊಂಡು ನಿಮ್ಮ ಉದ್ಯೋಗದಲ್ಲಿ ಬರಬಹುದಾದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಯೋಚನೆಯನ್ನು ನಡೆಸುವಿರಿ. ನಿಸ್ವಾರ್ಥ, ತ್ಯಾಗದ ಮನೋಭಾವ ಬೆಳೆಸಿಕೊಳ್ಳುವಿರಿ.
  • ವೃಷಭ
  • ಅವಿವಾಹಿತರು ಮನೆಯಲ್ಲಿ ತೋರಿಸಿರುವ ಎಲ್ಲಾ ಸಂಬಂಧಗಳಿಗೆ ನಕಾರ ಮಾಡುತ್ತಿರುವುದರ ಬದಲು ನಿಮ್ಮ ಅಪೇಕ್ಷಿತ ವ್ಯಕ್ತಿಯನ್ನೇ ಮನೆಯವರ ಮುಂದೆ ಪ್ರಸ್ಥಾಪಿಸುವುದು ಒಳ್ಳೆಯದು.
  • ಮಿಥುನ
  • ಅರಿಷಡ್ವರ್ಗಗಳ ನಿವಾರಣೆಗಾಗಿ ಅಧಿಕ ಮಟ್ಟದಲ್ಲಿ ಸಾಧನೆ ಮಾಡಲು ಪ್ರಾರಂಭಿಸಬಹುದು. ವ್ಯವಹಾರದಲ್ಲಿ ಅಡ್ಡಿ ಆತಂಕ ಎದುರಾದರೂ ದುರ್ಗಾದೇವಿಯ ಆರಾಧನೆಯಿಂದಾಗಿ ಸಹಜವಾಗಿ ಮುಂದುವರೆಯುವುದು.
  • ಕರ್ಕಾಟಕ
  • ಮನೆಯಲ್ಲಿರುವ ಸೂಕ್ಷ್ಮ ವ್ಯಕ್ತಿಯ ಆರೋಗ್ಯದ ನಿಗಾವಹಿಸುವುದು ನಿಮ್ಮ ಪ್ರಮುಖ ಕಾರ್ಯವಾಗುವುದು. ಪ್ರವಾಸಕ್ಕಾಗಿ ಹೋದ ಪ್ರದೇಶದಲ್ಲಿ ಕೆಲವು ತೊಂದರೆಗಳಾಗುವಂತಹಾ ಸಂದರ್ಭಗಳಿವೆ.
  • ಸಿಂಹ
  • ಮೋಸದಿಂದಾಗಿ ಬೇರೆಯವರ ಕೈ ಸೇರಿದ ನಿಮ್ಮ ಹಣ ನಿಮಗೆ ಹಿಂತಿರುಗುವ ಸೂಚನೆಗಳು ಕಾಣುತ್ತವೆ. ಹಿರಿಯರ ಮಾತಿನಂತೆ ಕೆಲಸ ಕೈಗೊಳ್ಳುವುದು ಉತ್ತಮ. ವೃಥಾ ಅಲೆದಾಟದಿಂದ ಆಯಾಸ ಆಗುವುದು.
  • ಕನ್ಯಾ
  • ಮಧ್ಯದಲ್ಲಿ ನಿಂತ ವಿದ್ಯಾಭ್ಯಾಸವನ್ನು ಮುಂದುವರೆಸುವ ಪ್ರಯತ್ನ ಮಾಡಿದಲ್ಲಿ ಸಫಲವಾಗುವುದು. ಉದ್ಯೋಗಕ್ಕಾಗಿ ಹೆಚ್ಚಿನ ಪರಿಶ್ರಮ, ದೇವರ ಕೃಪಾ ಕಟಾಕ್ಷ ಬೇಕಾಗುವುದು. ಪತಿ ಪತ್ನಿಯರಲ್ಲಿ ಸಾಮರಸ್ಯ ಇರುವುದು.
  • ತುಲಾ
  • ನಿಮ್ಮ ನಿಷ್ಕಪಟ ಸಮಾಜ ಸೇವೆಯನ್ನು ಕುಟುಂಬದವರು ಹಾಗೂ ಸಮಾಜದವರು ಗುರುತಿಸಿ ಶ್ಲಾಘಿಸುವರು ಹಾಗು ಅನೇಕ ಕಡೆಯಿಂದ ಸಹಾಯ ಹಸ್ತಗಳು ಸಿಗುವವು. ಲೇವಾದೇವಿ ವ್ಯವಹಾರಗಳು ಮುಂದುವರೆಯುವುದು.
  • ವೃಶ್ಚಿಕ
  • ನಿಮಗೆ ಇಷ್ಟವಿಲ್ಲದ ಸಂಬಂಧವನ್ನು ಹೊತ್ತು ತಂದ ಮಗಳ ಮೇಲೆ ಕೋಪ ಸಹಜವಾದರು ಸಹ ಜೀವನ ಆಕೆಯದ್ದು ಎಂಬುದನ್ನು ಅರ್ಥೈಸಿಕೊಳ್ಳು ವುದು ಸೂಕ್ತ. ಸಾಮಾಜಿಕ ವಲಯದಲ್ಲಿ ನಿಮ್ಮ ವರ್ಚಸ್ಸು ಬೆಳೆಯಲಿದೆ.
  • ಧನು
  • ದಾಯಾದಿಗಳು ಕಲಹಗಳನ್ನು ಬಿಟ್ಟು ರಾಜಿ ಮಾಡಿಕೊಳ್ಳುವ ಮನೋಭಾವಕ್ಕೆ ಬಂದಾರು. ನೀವು ನಿಮ್ಮ ವೈಯಕ್ತಿಕ ಮನೋಭಾವವನ್ನು ಬದಲಿಸಿಕೊಳ್ಳುವಂತೆ ಆಗಲಿದೆ. ಹೊಸ ವಾಹನ ಖರೀದಿಸುವ ಯೋಗವಿದೆ.
  • ಮಕರ
  • ಪ್ರಭಾವಿ ವ್ಯಕ್ತಿಗಳ ಒಡನಾಟ ನಿಮಗೆ ಹೆಚ್ಚಿನ ಸ್ಥಾನಮಾನವನ್ನು ಜೊತೆಯಲ್ಲಿ ಆಯಾಸವನ್ನು ತಂದು ಕೊಡಲಿದೆ. ಇಂದು ಕೈಗೊಂಡ ಪ್ರವಾಸದಿಂದ ನಿಮಗೆ ಅನಿರೀಕ್ಷಿತವಾದ ಲಾಭದ ಅನುಭವ ಉಂಟಾಗುವುದು.
  • ಕುಂಭ
  • ಕಷ್ಟ ಕಾರ್ಪಣ್ಯಗಳ ಜೀವನವನ್ನು ಈಗಷ್ಟೇ ಕಳೆದ ನಿಮಗೆ ಈಗ ಮಗನು ಹೊಸಾ ತಲೆನೋವನ್ನು ತರುವಂತಹಾ ಸಾಧ್ಯತೆ ಇದೆ. ಚರ್ಮಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆಯೊಂದು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
  • ಮೀನ
  • ಇದ್ದಂಕ್ಕಿದ್ದಂತೆಯೇ ನಿಮ್ಮ ಮೇಲೆ ಪ್ರೀತಿಯನ್ನು ತೋರಿಸಲು ಶುರು ಮಾಡಿದ ನೆಂಟರ ಬುದ್ಧಿಯು ಕಪಟ ಎಂದು ಅರಿತುಕೊಳ್ಳಿ. ಹಿರಿಯರೊಂದಿಗೆ ವಿನಯವನ್ನು ಬಿಟ್ಟು ಮಾತನಾಡಿದಲ್ಲಿ ನಿಮ್ಮ ಗೌರವ ಕಳೆದುಕೊಳ್ಳುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.