ADVERTISEMENT

ದಿನ ಭವಿಷ್ಯ: ಈ ರಾಶಿಯವರು ಯಾವುದೇ ರೀತಿಯಲ್ಲೂ ಆರೋಗ್ಯದ ಬಗ್ಗೆ ಉದಾಸೀನ ತೋರದಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
   
ಮೇಷ
  • ಮನೆಯಲ್ಲಿ ಶಾಂತ ವಾತಾವರಣವಿರಲಿದ್ದು , ಕೆಲಸ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಸಿಗುವುದು. ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿ, ಕೆಲಸಗಳನ್ನು ಮುಂದುವರಿಸುವಿರಿ.
  • ವೃಷಭ
  • ಎಣ್ಣೆ , ಬೇಳೆಕಾಳು ವ್ಯಾಪಾರ ಉತ್ತಮವಾಗಿರುವುದು. ಹಿರಿಯರನ್ನು ತೀರ್ಥಯಾತ್ರೆಗೆ ಕಳುಹಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡವರು ವಾತಾವರಣವನ್ನು ಉದ್ದೇಶಿಸಿ ಇನ್ನೊಮ್ಮೆ ಯೋಚಿಸಿ, ತೀರ್ಮಾನಿಸಿ.
  • ಮಿಥುನ
  • ಹೊಸ ಯೋಜನೆ ರೂಪಿಸಲು ಒಳ್ಳೆಯ ಸಮಯ, ಸಹೋದರರಿಂದ ಉತ್ತಮ‌ ಸಹಕಾರ ಸಿಗುತ್ತದೆ. ವಿವಾಹ ಅಪೇಕ್ಷಿಗಳಿಗೆ ಶುಭವಿರುತ್ತದೆ. ದೂರ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ.
  • ಕರ್ಕಾಟಕ
  • ವ್ಯವಸ್ಥಿತವಾಗಿ ನಿಮ್ಮ ದಿನಚರಿ ರೂಪಿಸಿಕೊಂಡರೆ ಈಗಾಗಲೇ ಆರಂಭಿಸಿರುವ ಯೋಜನೆಗಳು ಪೂರ್ಣಗೊಳ್ಳಲಿವೆ. ಅವಿವಾಹಿತರಿಗೆ ಅವರ ಮನಸ್ಸಿಗೆ ಇಷ್ಟವಾಗುವ ರೀತಿಯ ಸಂಬಂಧಗಳು ಈ ದಿನ ಪ್ರಾಪ್ತಿಯಾಗುತ್ತವೆ.
  • ಸಿಂಹ
  • ಆದಾಯ ವೆಚ್ಚಗಳನ್ನು ಸರಿದೂಗಿಸಿಕೊಳ್ಳುವಿರಿ. ನಿಮ್ಮ ಪ್ರತಿಭೆ ಮತ್ತು ಕೌಶಲಗಳು ಬೆಳಕಿಗೆ ಬಂದು ಇತರರಿಗೆ ವಿಶೇಷ ವ್ಯಕ್ತಿ ಎನಿಸುವಿರಿ. ಅಧಿಕಾರ, ಅನುಭವದಿಂದ ನಿಮ್ಮ ಆತ್ಮಾಭಿಮಾನ ವೃದ್ಧಿಯಾಗಲಿದೆ.
  • ಕನ್ಯಾ
  • ಉದ್ಯೋಗದ ವಿಷಯದಲ್ಲಿ‌ನ ಅನಿಶ್ಚಿತತೆಯ ಭಯ ದೂರವಾಗುವುದು. ಹಣಕಾಸಿನ ಸಮಸ್ಯೆಗಳು ಹಂತ ಹಂತವಾಗಿ ಪರಿಹಾರವಾಗಲಿದೆ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಅಪರಾಹ್ನ ಹೆಚ್ಚಿನ ಕೆಲಸವಿರಲಿದೆ.
  • ತುಲಾ
  • ಮಾಹಿತಿ ತಂತ್ರಜ್ಞಾನದ ವಲಯದವರಿಗೆ ಹೆಚ್ಚಿನ ಆದಾಯ ಇದ್ದರೂ ಕೆಲಸದಲ್ಲಿ ಅಸಮಾಧಾನ ಉಂಟಾಗಬಹುದು. ಸಿದ್ಧ ಉಡುಪು ತಯಾರಕರಿಗೆ ಹೆಚ್ಚಿನ ಬೇಡಿಕೆ ದೊರೆತು ಸಂತೋಷಕರ ವಾತಾವರಣ ನಿಮ್ಮದಾಗಲಿದೆ.
  • ವೃಶ್ಚಿಕ
  • ಅತ್ಯಂತ ಬುದ್ಧಿವಂತರಾದ, ತಿಳಿವಳಿಕೆ ಹೊಂದಿವರಾದ ನೀವು ಗ್ರಹಚಾರದ ಫಲವಾಗಿ ಮನೋಬಲದಿಂದ ಕಾರ್ಯ ಸಾಧಿಸುವಲ್ಲಿ ವಿಫಲರಾಗುವಿರಿ. ದಂತವೈದ್ಯರಿಗೆ ಅನುಕೂಲದ ದಿನ.
  • ಧನು
  • ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಸಿಗುತ್ತದೆ. ಉದ್ಯೋಗದಲ್ಲಿ ಆಭಿವೃದ್ಧಿ ಹೊಂದುವಿರಿ. ಮನೆಯಲ್ಲಿ ಮಂಗಳಕಾರ್ಯಗಳು ನೆರವೇರುತ್ತವೆ. ಉದ್ಯೋಗಕ್ಕಾಗಿ ಹೊರ ದೇಶದ ಪ್ರಯಾಣದ ಅವಕಾಶಗಳು ಸಿಗಬಹುದು.
  • ಮಕರ
  • ಬೆಲೆ ಬಾಳುವ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಬೆಂಕಿಯಿಂದ ಅನಾಹುತಗಳು ಸಂಭವಿಸುವ ಲಕ್ಷಣಗಳಿರುವುದರಿಂದ ಜಾಗೃತರಾಗಿರುವುದು ಒಳ್ಳೆಯದು.
  • ಕುಂಭ
  • ವರ್ತನೆಯಲ್ಲಿ ಸಮತೋಲನ ಹಾಗೂ ಸ್ಥಿರತೆ ಕಾಯ್ದುಕೊಳ್ಳುವುದು ಉತ್ತಮ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಕಂಡುಬರಲಿದೆ. ಯಾವುದೇ ರೀತಿಯಲ್ಲೂ ಆರೋಗ್ಯದ ಬಗ್ಗೆ ಉದಾಸೀನ ತೋರದಿರಿ.
  • ಮೀನ
  • ಆತ್ಮ ಗೌರವ, ರಕ್ಷಣೆ ದೃಷ್ಟಿಯಿಂದ ಸಂದರ್ಭಗಳೊಡನೆ ರಾಜಿಮಾಡಿಕೊಳ್ಳುವುದು ಸೂಕ್ತ ಎನಿಸಲಿದೆ. ವಿವಿಧ ಮೂಲಗಳಿಂದ ದ್ರವ್ಯಲಾಭ ಇರುವುದು. ರಾಜಕಾರಣಿಗಳಿಗೆ ಶುಭ ಸುದ್ದಿ ದೊರೆಯಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.