ADVERTISEMENT

ದಿನ ಭವಿಷ್ಯ: ಆಗಸ್ಟ್ 23, 2025 ಶನಿವಾರ–ಷೇರು ವ್ಯವಹಾರದವರಿಗೆ ಈ ದಿನ ಅದೃಷ್ಟದಾಯಕ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 22 ಆಗಸ್ಟ್ 2025, 18:31 IST
Last Updated 22 ಆಗಸ್ಟ್ 2025, 18:31 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಣ್ಣ ಕೈಗಾರಿಕಾ ಉದ್ಯಮಿಗಳು ಉತ್ಪಾದನೆ ಹೆಚ್ಚಿಸುವ ಬಗ್ಗೆ ಶ್ರಮ ಪಡಬಹುದು. ಸಹೋದ್ಯೋಗಿಗಳ ಅಥವಾ ನೆರೆಹೊರೆಯವರ ಉಪಟಳದಿಂದ ನೋವು ಉಂಟಾಗುವ ಸನ್ನಿವೇಶಗಳು ಎದುರಾಗಬಹುದು.
  • ವೃಷಭ
  • ವಾಣಿಜ್ಯ ಕಟ್ಟಡಗಳ ನಿರ್ಮಾಣ ಕಾರ್ಯಗಳಿಗೆ ಹಣಕಾಸಿನ ಹೊಂದಾಣಿಕೆ ಸುಲಭವಾಗಿ ಆಗುವುದು. ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳಲಿವೆ. ಆನುವಂಶಿಕ ಆಸ್ತಿ ಅನುಭವಿಸುವ ಯೋಗ ಬರಲಿದೆ.
  • ಮಿಥುನ
  • ಮನೆಯ ಆಗುಹೋಗುಗಳ ವಿಷಯಗಳನ್ನು ತಂದೆಯೊಡನೆ ಚರ್ಚಿಸುವುದರಿಂದ ಉತ್ತಮ ಸಲಹೆ ಪ್ರಾಪ್ತಿ. ನ್ಯಾಯಯುತವಾಗಿ ಮಾಡಿದ ಕುಟುಂಬ ಕಾರ್ಯಗಳು ಉತ್ತಮ ಫಲಗಳನ್ನೇ ನೀಡುತ್ತವೆ. ‌
  • ಕರ್ಕಾಟಕ
  • ಮಾನಸಿಕವಾಗಿ ಗಟ್ಟಿಯಾಗುವುದುರಿಂದ ಇಷ್ಟಕ್ಷೇತ್ರದಲ್ಲಿ ಜಯವನ್ನು ಸಾಧಿಸುವ ಹಾದಿ ಸುಗಮ. ಶಿಕ್ಷಣ ಮುಂದುವರಿಸಲು ಬಂಧುಗಳ ಸಹಾಯ ದೊರಕುವುದು. ಶುಭಕ್ಕಾಗಿ ಗಣಪತಿಯನ್ನು ಆರಾಧಿಸಿ.
  • ಸಿಂಹ
  • ಕೆಲಸದಲ್ಲಿ ಪ್ರಮುಖ ಬೆಳವಣಿಗೆ ಗಮನಕ್ಕೆ ಬರಲಿದೆ. ಸಮುದಾಯದ ಮುಖ್ಯಸ್ಥರ ಮಾತುಗಳಿಗೆ ಪ್ರಶ್ನೆ ಮಾಡುವ ಹಕ್ಕು ಇರುವುದರಿಂದ ಚಲಾಯಿಸುವುದು ತಪ್ಪಲ್ಲ.
  • ಕನ್ಯಾ
  • ಬೇರೆಯವರಿಗೆ ಎದುರಾದ ಸೋಲು, ಅಪವಾದಗಳಿಗೆ ಹೆದರಿ ಹೊಸ ಕೆಲಸಗಳನ್ನು ಪ್ರಾರಂಭಿಸದೆ ಇರಬೇಡಿ. ಯಾವುದಕ್ಕೂ ಸರ್ವಸಿದ್ಧರಾಗಿರಿ. ದೇವಸ್ಥಾನದ ದರ್ಶನದಿಂದಾಗಿ ವಿಶೇಷವಾದ ಅನುಭೂತಿಯಾಗುತ್ತದೆ.
  • ತುಲಾ
  • ಸಣ್ಣ ಹಾಗೂ ಮಧ್ಯಮ ಪ್ರಮಾಣದ ರೈತವರ್ಗಕ್ಕೆ ಆತಂಕ ಮೂಡಿಸುವ ವಾತಾವರಣ ಬಹುದೊಡ್ಡ ಸಮಸ್ಯೆಯಾಗುವುದು. ಸಾರ್ವಜನಿಕರ ಸ್ವತ್ತನ್ನು ಬಳಸುವಾಗ ಸ್ವಂತದ್ದೆನ್ನುವಂತೆ ಬಳಸಿ ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಿರಿ.
  • ವೃಶ್ಚಿಕ
  • ಯಾವುದೋ ಒಂದು ಸಂದರ್ಭವನ್ನು ನೋಡಿ ನಿಮ್ಮಲ್ಲಿ ಸುಪ್ತವಾಗಿದ್ದ ಮಾತೃತ್ವದ ಭಾವನೆ ಜಾಗೃತವಾಗುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ.
  • ಧನು
  • ಸೋಲಿನಿಂದ ಜೀವನದ ಬಗ್ಗೆ ನಿರುತ್ಸಾಹವನ್ನು ತಾಳದಿರಿ. ಬಿಡಿ ಯಂತ್ರೋಪಕರಣಗಳ ಮಾರಾಟದಿಂದ ಲಾಭ. ಉದ್ಯೋಗ ವಲಯದಲ್ಲಿ ಅಕ್ಕ ಪಕ್ಕದವರ ಅನುಕಂಪ ಮತ್ತು ಸಹಾಯಕ್ಕೆ ಮರಳಾಗಬೇಡಿ.
  • ಮಕರ
  • ಷೇರು ವ್ಯವಹಾರದವರಿಗೆ ಈ ದಿನ ಅದೃಷ್ಟದಾಯಕ. ಭೂಮಿ ಖರೀದಿ ತೀರ್ಮಾನದ ಮೊದಲಾಗಿ ದಾಖಲಾತಿಯ ಬಗ್ಗೆ ಮತ್ತು ಕಾನೂನಿಗೆ ಸಂಬಂಧಿಸಿದಂತೆ ಗಮನ ಹರಿಸಬೇಕು. ವಿಘ್ನ ಉಂಟಾಗಬಹುದು.
  • ಕುಂಭ
  • ವಿದ್ಯಾರ್ಥಿಗಳಿಗೆ ಸರ್ವತೋಮುಖ ಅಭಿವೃದ್ಧಿ ಕಂಡುಬರುವುದು. ನಾಯಕತ್ವದ ಹೊಣೆ ಹೊತ್ತಿರುವ ನೀವು ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಪ್ರದರ್ಶಿಸುವಿರಿ. ಚಿಂತೆಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ.
  • ಮೀನ
  • ಔಷಧವಿಜ್ಞಾನದ ಬಗ್ಗೆ ಓದಿಕೊಂಡವರು ಕೆಲಸಕ್ಕೆ ಪ್ರಯತ್ನಿಸುವ ಬದಲು ಉನ್ನತ ವ್ಯಾಸಂಗ ನಡೆಸುವುದು ಒಳ್ಳೆಯದು. ಪ್ರಶಾಂತತೆ ಅಪೇಕ್ಷಿಸುವ ನಿಮಗೆ ವಿನಾಕಾರಣದ ಗದ್ದಲಗಳು ತೊಂದರೆ ಉಂಟುಮಾಡುತ್ತವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.