ADVERTISEMENT

ದಿನ ಭವಿಷ್ಯ: ವ್ಯಾಪಾರಿಗಳು ಪತ್ರಿಕೆಯವರ ಸಹಕಾರದಿಂದ ಪ್ರಚಾರ ತೆಗೆದುಕೊಳ್ಳಬಹುದು

29 ಅಕ್ಟೋಬರ್ 2024 ಮಂಗಳವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಅಕ್ಟೋಬರ್ 2024, 23:53 IST
Last Updated 28 ಅಕ್ಟೋಬರ್ 2024, 23:53 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಸ್ವಾರ್ಥದ ಕೆಲವು ನಿರ್ಧಾರದ ಫಲವಾಗಿ ಬಂಧುಗಳು ಅಥವಾ ಆತ್ಮೀಯರು ದೂರವಾಗುವ ಲಕ್ಷಣಗಳಿವೆ. ವಂಶಪಾರಂಪರ್ಯವಾಗಿ ಬಂದ ಉದ್ಯೋಗದಲ್ಲಿ ಏಳಿಗೆ ಕಾಣುವಿರಿ.
  • ವೃಷಭ
  • ಬಟ್ಟೆ ವ್ಯಾಪಾರಿಗಳು ಪತ್ರಿಕೆಯವರ ಸಹಕಾರದಿಂದ ಹೆಚ್ಚಿನ ಪ್ರಚಾರ ತೆಗೆದುಕೊಳ್ಳಬಹುದು. ನೆಮ್ಮದಿ ಪಡೆಯಲು ಜಗವನ್ನು ಬೆಳಗುವ ಸೂರ್ಯ ನಾರಾಯಣನನ್ನು ನಮಸ್ಕರಿಸಿ, ಪ್ರಾರ್ಥಿಸಿ. ಆರೋಗ್ಯದ ಬಗ್ಗೆ ಕಾಳಜಿ ತೋರಿ.
  • ಮಿಥುನ
  • ಉಳಿತಾಯ ಯೋಜನೆಯಲ್ಲಿ ಆಸಕ್ತಿ ಇದ್ದರೂ ಖರ್ಚು ಅಧಿಕವಾಗಿರುತ್ತದೆ. ಆಫೀಸಿನಲ್ಲಿಂದು ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳುವುದು ಉತ್ತಮ. ಕಾರ್ಯ ಒಪ್ಪಂದದ ಬಗ್ಗೆ ದೃಢ ನಿರ್ಧಾರ ಮಾಡಿರಿ.
  • ಕರ್ಕಾಟಕ
  • ಶ್ರಮದ ಜೀವನದಿಂದ ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆಯಾಗಲಿವೆ. ಮಾತಿನಿಂದ ಕಾರ್ಯ ಸಾಧಿಸುವ ಗುಣದಿಂದ ಲಾಭ ಕಾಣಲಿದ್ದೀರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಪ್ರಾಪ್ತಿ.
  • ಸಿಂಹ
  • ವ್ಯವಹಾರದ ಪ್ರಯುಕ್ತ ಇರುವ ಪ್ರವಾಸವು ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನೂ ಅನಿರೀಕ್ಷಿತ ಲಾಭವನ್ನೂ ತಂದು ಕೊಡುವುದು. ಕೃಷಿ ಕೆಲಸಗಳು ಸಮರ್ಪಕವಾಗಿ ನಡೆದು ಮನಸ್ಸಿಗೆ ನೆಮ್ಮದಿ ಇರುವುದು.
  • ಕನ್ಯಾ
  • ವ್ಯಾಪಾರದಲ್ಲಿ ಸ್ವಂತ ತೀರ್ಮಾನದಿಂದ ಮುಂದುವರಿದರೆ ಧನಾದಾಯ ಹೆಚ್ಚಲಿದೆ. ಸ್ಥಿರ ಆಸ್ತಿ ಖರೀದಿಸುವ ಬಗ್ಗೆ ಯೋಚನೆ ಮಾಡಿ. ಸುಬ್ರಹ್ಮಣ್ಯನನ್ನು ಆರಾಧಿಸುವುದರಿಂದ ಆರೋಗ್ಯಭಾಗ್ಯವು ಉಂಟಾಗುತ್ತದೆ.
  • ತುಲಾ
  • ದೂರ ದೃಷ್ಟಿ ಇಟ್ಟುಕೊಂಡು ಈಗಿನ ಪ್ರಪಂಚದ ಓಟಕ್ಕೆ ಸರಿಯಾಗಿ ಕಾರ್ಯ ಪ್ರವೃತ್ತರಾಗುವುದು ಉತ್ತಮ. ಮನೆಯಲ್ಲಿ ಶುಭ ಸಮಾರಂಭವು ಸುಸೂತ್ರವಾಗಿ ನಡೆದುದಕ್ಕೆ ಸಮಾಧಾನಗೊಳ್ಳುವಿರಿ. .
  • ವೃಶ್ಚಿಕ
  • ಈಗಾಗಲೇ ಒಪ್ಪಿಕೊಂಡಿರುವ ಒಪ್ಪಂದವೊಂದು ಮುರಿದು ಬೀಳದಂತೆ ಎಚ್ಚರವಹಿಸುವುದರಿಂದ ಗೌರವವು ಉಳಿಯುವುದು. ಆಡಿದ ಮಾತಿನಿಂದ ಶುಭ ಮತ್ತು ಅಶುಭದ ಮಿಶ್ರಣ ಫಲ ಅನುಭವಿಸುವಂತಾಗಲಿದೆ.
  • ಧನು
  • ಸ್ಟುಡಿಯೊದವರಿಗೆ ಅಧಿಕ ಕಾರ್ಯಕ್ರಮದಿಂದ ಲಾಭ ಇರಲಿದೆ. ಉತ್ಸಾಹವನ್ನು ಹೆಚ್ಚಿಸಿಕೊಳ್ಳುವ ಸಮಯವಾಗಿದೆ. ಸ್ವ ಉದ್ಯೋಗಿಗಳಿಗೆ ಉದ್ಯೋಗ ನಿಮಿತ್ತವಾಗಿ ಪ್ರಯಾಣ ಸಂಭವ ಇರುವುದು.
  • ಮಕರ
  • ವಾಹನದ ಅನಿವಾರ್ಯತೆ ಹೆಚ್ಚಿರುವುದರಿಂದ ನೂತನ ವಾಹನ ಖರೀದಿಸುವ ಬಗ್ಗೆ ಗಮನಹರಿಸಿ. ಅಧಿಕ ಹಣದ ಹರಿವು ನಿಧಾನವಾಗಿ ಅನುಭವಕ್ಕೆ ಬರಲಿದೆ. ಚಿತ್ರಕಲೆ ಮತ್ತು ಸಾಹಿತ್ಯಕಾರರಿಗೆ ಶುಭವಾರ್ತೆ ಬರಲಿದೆ.
  • ಕುಂಭ
  • ದಿನಸಿ ವರ್ತಕರಿಗೆ, ಹೋಟೆಲ್ ಉದ್ಯಮದವರಿಗೆ ಜೋರಿನ ವ್ಯಾಪಾರ ಇರಲಿದೆ. ಗುರುಗಳ ಮಾರ್ಗದರ್ಶನದ ಮಹತ್ವ ತಿಳಿಯುವುದು. ಸಾಂಸಾರಿಕ ಸಮಸ್ಯೆಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
  • ಮೀನ
  • ಹೊಸ ಹೂಡಿಕೆ , ಒಪ್ಪಂದಗಳು ನಿಶ್ಚಿತ ಹಂತ ತಲುಪಿದ್ದಕ್ಕೆ ಸಂತೃಪ್ತಿಯ ಭಾವವಿರುವುದು. ಆಭರಣ ಮಾರಾಟಗಾರರು, ವಕೀಲ ವೃತ್ತಿ ಯವರಿಗೆ ಹೆಚ್ಚಿನ ಕೆಲಸವಿರುವುದು. ನಿರೀಕ್ಷಿತ ಕಡೆಗಳಿಂದ ಧನ ಒದಗಿ ಬರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.