ADVERTISEMENT

ದರ್ಶನ ದರ್ಪಣ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಅಭಿನಂದನೀಯ
ಕೊಡಗಿನ ರಾಮಸ್ವಾಮಿ ಕಣಿವೆ ಬಳಿ ಕಾವೇರಿಗೆ ಅಡ್ಡವಾಗಿ ಎರಡೂವರೆ ತಿಂಗಳಲ್ಲಿ ತೂಗು ಸೇತುವೆ ನಿರ್ಮಿಸಿದ ಗಿರೀಶ್ ಭಾರದ್ವಾಜ್ ಅವರ ಪರಿಶ್ರಮ ಅಭಿನಂದನೀಯ. ಅಧುನಿಕ ತಂತ್ರಜ್ಞಾನ ಬಳಸಿಕೊಂಡು ಅಗತ್ಯ ಇರುವ ಕಡೆ ಇನ್ನಷ್ಟು ತೂಗು ಸೇತುವೆಗಳನ್ನು ನಿರ್ಮಿಸಿ ಜನರ ಸಂಪರ್ಕ ಕೊರತೆ ನಿವಾರಿಸಲು ಸರ್ಕಾರ ಗಮನಹರಿಸಲಿ.
-ಬಾಣಾವರ ನಾಗರಾಜ, ಬೆಂಗಳೂರು

ವಿಶಿಷ್ಟ ಹರಕೆ !
ಉಡುಪಿ ಜಿಲ್ಲೆಯ ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸುವ ಲೇಖನ (ಶೇಷಗಿರಿ ಭಟ್ ಬ್ರಹ್ಮಾವರ)ಇಷ್ಟವಾಯಿತು. 2027-28ನೇ ವರ್ಷದವರೆಗೆ ಭಕ್ತರು ಹರಕೆ ಮೇಳಕ್ಕಾಗಿ ಮುಂಗಡವಾಗಿ ಕಾದಿರಿಸುವ ಕ್ರಮ ನಿಜಕ್ಕೂ ವಿಶಿಷ್ಟ.
-ಲಕ್ಷ್ಮಣರಾವ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.