ಸಂದರ್ಭೊಚಿತ ಲೇಖನ
ಕಳೆದ ವಾರದ ಮುಖಪುಟದ ಲೇಖನ `ಕನಕ ಅರಮನೆ ಅನಾವರಣ' ಸಂದರ್ಭೋಚಿತವಾಗಿತ್ತು. ಅರಮನೆಯ ಅವಶೇಷಗಳ ಜೊತೆಗೇ ಕನಕರ ಚರಿತ್ರೆಯನ್ನು ಪುಷ್ಟಿಗೊಳಿಸುವ ಇಂತಹ ಪುನಸೃಷ್ಟಿ ಕಾರ್ಯ ಶ್ಲಾಘನೀಯ.
- ಸಾವಿತ್ರಮ್ಮ ವಿಭೂತಿ, ಹರಿಹರ
ರೈತರಲ್ಲಿ ಆಶಾ ಭಾವನೆ
ನೈಸರ್ಗಿಕ ಕೃಷಿಯ ಕುರಿತು ಹೊಸದಾಗಿ ಅಂಕಣ ಆರಂಭಿಸಿರುವುದು ತುಂಬಾ ಸಂತಸವಾಯಿತು. ಸಾಲ ಸೋಲ ಮಾಡಿ ಹತಾಶರಾಗಿರುವ ರೈತರ ಬಾಳಿನಲ್ಲಿ ಈ ಅಂಕಣ ಹೊಸ ಆಶಾ ಭಾವನೆ ಮೂಡಿಸಿದೆ.
`ನೆರೆ-ಬರಕ್ಕೂ ಸಿದ್ಧ ಕಬ್ಬು' ಲೇಖನದಲ್ಲಿ ರೈತರು ಬೆಳೆಯುತ್ತಿದ್ದುದು `ಸಿಓ 62175' ತಳಿಯ ಕಬ್ಬು ಎಂಬುದನ್ನು ಸ್ಪಷ್ಟಪಡಿಸಬೇಕಿತ್ತು. ಈ ಕಬ್ಬನ್ನು ಬೆಲ್ಲ ಮತ್ತು ಸಕ್ಕರೆಗೆ ಮಾತ್ರ ಬಳಕೆ ಮಾಡಲಾಗುತ್ತದೆ.
- ಹನುಮಂತಪ್ಪ, ಬ್ರಹ್ಮಾವರ - ಎನ್.ಎಂ.ಎಸ್. ವಿಜಯಾ- ರಾಯಚೂರು
ಸಂಗ್ರಹ ಯೋಗ್ಯ
`ಕರ್ನಾಟಕ ದರ್ಶನ'ದಲ್ಲಿ ಪ್ರಕಟಗೊಳ್ಳುವ ಪ್ರತಿಯೊಂದು ಲೇಖನಗಳು ಸಂಗ್ರಹ ಯೋಗ್ಯವಾಗಿವೆ. ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಅಪೂರ್ವ ಮಾಹಿತಿ ದೊರಕುತ್ತಿದೆ. ಕೃಷಿ ಪುರವಣಿಯಲ್ಲಿ ಬರುವ ಎಲ್ಲ ಲೇಖನಗಳು ಕೃಷಿಕರಿಗೆ ದಾರಿದೀವಿಗೆಯಾಗಿದೆ.
- ರಾಮಲಿಂಗಯ್ಯ ಸಿದ್ಧಯ್ಯ ಸ್ವಾಮಿ ಹಿರೇಮಠ, ಚೈತ್ರ ಕುಕನೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.