ADVERTISEMENT

ಆಂಜನೇಯನಿಗೆ ವಿಶೇಷ ಅಲಂಕಾರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST
ಆಂಜನೇಯನಿಗೆ ವಿಶೇಷ ಅಲಂಕಾರ
ಆಂಜನೇಯನಿಗೆ ವಿಶೇಷ ಅಲಂಕಾರ   

ನಂದನವನ ಬಡಾವಣೆಯಲ್ಲಿರುವ ಆಂಜನೇಯ ಹಾಗೂ ರಾಘವೇಂದ್ರ ಸ್ವಾಮಿ ದೇಗುಲದಲ್ಲಿ ಹನುಮಜ್ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ನಿರ್ಮಾಣ್ ದೇವಾಲಯಗಳ ಆಡಳಿತ ಮಂಡಳಿ ಅಧೀನದಲ್ಲಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಇಹಪರದಲ್ಲಿ ಇಷ್ಟಾರ್ಥಗಳನ್ನು ಸಿದ್ಧಿಸುವ ವಾಯುಸ್ತುತಿ ಪುನರುಚ್ಚಾರ ಹೋಮವನ್ನು ಹತ್ತಾರು ಋತ್ವಿಜರೊಗೂಡಿ ಆಯೋಜಿಸಲಾಗಿದ್ದ ಮಹೋತ್ಸವದಲ್ಲಿ ನೂರಾರು ಎಳನೀರಿನಿಂದ ರಾಮಸಹಿತ ಹನುಮನಿಗೆ ಅಭಿಷೇಕ ಮಾಡಿ ಅಲಂಕರಿಸಲಾಗಿತ್ತು. ನೂರಾರು ಭಕ್ತರು ಹನಮನಿಗೆ ವಿಶೇಷ ಪೂಜೆ ಸಲ್ಲಿಸಿ ರಾಮನ ಭಂಟನ ಕೃಪೆಗೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT