ತೆರೆಯ ಮೇಲೆ ತಮ್ಮ ಪಾತ್ರ ಉತ್ತಮವಾಗಿ ಮೂಡಿಬರಲು ಪೂರಕವಾಗಿ ಏನು ಮಾಡಬೇಕು ಎಂದು ಶ್ರುತಿ ಹಾಸನ್ ಚಿಂತಿಸುತ್ತಲೇ ಇರುತ್ತಾರೆ. ಈಗ ಅವರು ಕತ್ತಿವರಸೆ ಕಲಿಯುತ್ತಿರುವುದೂ ಅದೇ ಕಾರಣಕ್ಕೆ.
ಐತಿಹಾಸಿಕ ಕತೆಯುಳ್ಳ, ತಮ್ಮ ಮುಂದಿನ ಚಿತ್ರ ‘ಸಂಗಮಿತ್ರ’ಕ್ಕಾಗಿ ಈ ಹೊಸ ವರಸೆಯಂತೆ. ಲಂಡನ್ನ ಸಮರಕಲೆ ತರಬೇತಿದಾರರೊಬ್ಬರ ಬಳಿ ಕತ್ತಿವರಸೆಯ ಪಟ್ಟುಗಳನ್ನು ಕಲಿಯುತ್ತಿರುವ ಶ್ರುತಿ ‘ಸಂಗಮಿತ್ರ’ ಚಿತ್ರದಲ್ಲಿ ವೀರ ರಾಣಿಯ ಪಾತ್ರ ನಿರ್ವಹಿಸುತ್ತಿದ್ದಾರೆ.
ಎರಡು ಹಂತಗಳಲ್ಲಿ ತರಬೇತಿ ನಡೆಯುತ್ತಿದ್ದು ಮೊದಲಿಗೆ ಮೂಲಭೂತ ಚಲನೆಗಳನ್ನು ಕಲಿಯಲಿರುವ ಶ್ರುತಿ ನಂತರ ನಿಖರ ಕತ್ತಿವರಸೆಯನ್ನು ಕಲಿಯಲಿದ್ದಾರಂತೆ.
ಭಾರಿ ಬಜೆಟ್ನ ಈ ಚಿತ್ರದಲ್ಲಿ ಶ್ರುತಿಯೊಂದಿಗೆ ಜಯಂ ರವಿ, ಆರ್ಯ ನಟಿಸುತ್ತಿದ್ದಾರೆ. ಸುಂದರ್ ನಿರ್ದೇಶನದ ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.