ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಡಿ.6ರಿಂದ ಡಿ.15ರವರೆಗೆ ದೇಸಿ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ಶುಕ್ರವಾರ ಸಂಜೆ 5ಕ್ಕೆ ಉದ್ಘಾಟನೆ. ಅತಿಥಿ– ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ಡಿ.ಕೆ. ಚೌಟ, ಜವಳಿ ಇಲಾಖೆ ಅಭಿವೃದ್ಧಿ ಆಯುಕ್ತ ಶಶಿಧರ್, ಬನಶಂಕರಿ ಮಹಿಳಾ ಸಮಾಜದ ಕಾರ್ಯದರ್ಶಿ ಶಾಂತಾ ರಾಮಸ್ವಾಮಿ.
ಮೇಳದಲ್ಲಿ 125 ಮಳಿಗೆ, 22 ರಾಜ್ಯಗಳ ಕರಕುಶಲ ಕರ್ಮಿಗಳು, ಕಸೂತಿ, ಖಾದಿ, ಬನಾರಸ್ ಸೀರೆಗಳು, ಪುರುಷ ಮತ್ತು ಮಹಿಳೆಯರ ಕುರ್ತಾಗಳು, ಚಿತ್ರಕಲೆಗಳು, ಮಕ್ಕಳ ಉಡುಪು, ಆಭರಣ, ಮರದ ಕೆತ್ತನೆ, ಚರ್ಮದ ಬ್ಯಾಗ್, ಗೃಹೋಪಯೋಗಿ ವಸ್ತುಗಳು ಇರಲಿವೆ. ಪ್ರತಿ ಸಾಯಂಕಾಲ ಡೊಳ್ಳು ಕುಣಿತ, ಯಕ್ಷಗಾನ, ಪೂಜಾ ಕುಣಿತ, ಭರತನಾಟ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರದರ್ಶನ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.