ಕಾಕ ರಾಜ, ತನ್ನ ರಾಣಿಯೊಂದಿಗೆ ಜಲವಿಹಾರಕ್ಕೆಂದು ಬಂದಾಗ, ಉಳಿದ ಹಕ್ಕಿಗಳು ಆ ಬೊಗಸೆಯಗಲದ ಕೊಳದಲ್ಲಿ ಇಳಿಯುವಂತಿಲ್ಲ, ತಮ್ಮ ಸರದಿಗಾಗಿ ಒಂಟಿಗಾಲಲ್ಲಿ ನಿಂತು ಕಾದ ಪಾರಿವಾಳ, ಮೈನಾಗಳು ಕೊನೆಗೊಮ್ಮೆ ತಾವೂ ನೀರಿಗಿಳಿದವು. ವಿಧಾನಸೌಧದ ಹಿಂದಿರುವ ಹುಲ್ಲುಹಾಸಿನ ನಡುವೆ ಸುಮಾರು ಒಂದು ತಾಸು ನಡೆದ ಹಕ್ಕಿಗಳ ಜಲಕೇಳಿಯನ್ನು ಸೆರೆಹಿಡಿದವರು ವಿಶ್ವನಾಥ ಸುವರ್ಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.