ADVERTISEMENT

ನಗರದಲ್ಲಿ ಇಂದು ಮಾರ್ಚ್ 23, ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ಮಾರ್ಚ್ 23, ಶುಕ್ರವಾರ
ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು: ಜೆ.ಎಸ್.ಎಸ್. ಕಾಲೇಜು ಸಭಾಂಗಣ, 38ನೇ ಕ್ರಾಸ್, 1ನೇ ಮುಖ್ಯರಸ್ತೆ, 8ನೇ ವಿಭಾಗ, ಜಯನಗರ, `ಅಲ್ಲಮಪ್ರಭು ಜಯಂತಿ ಕಾರ್ಯಕ್ರಮ~ ಅಧ್ಯಕ್ಷತೆ-ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ದಿಬ್ಬೂರು ಸಿದ್ಧಲಿಂಗಪ್ಪ, `ಅಲ್ಲಮಪ್ರಭು ವಿಚಾರಧಾರೆ~ ಕುರಿತು ಜ್ಯೋತಿಪ್ರಕಾಶ್ ಸರಗೂರು ಅವರಿಂದ ಉಪನ್ಯಾಸ, ವಚನ ಸಂಗೀತ-ಎನ್.ಎಂ.ರಾಜಶೇಖರ್. ಸಂಜೆ 6.

ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್: ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ನಂ 49, ಮಾಣಿಕ್ಯವೇಲು ಮ್ಯಾನ್‌ಶನ್, ಅರಮನೆ ರಸ್ತೆ. `ಎಕಲಾಜಿಕಲ್ ಕ್ರೈಸಿಸ್, ಡಿಜಿಟಲ್ ಹ್ಯುಮಾನಿಟೀಸ್ ಮತ್ತು ನ್ಯೂ ಪೊಲಿಟಿಕಲ್ ಅಸೆಂಬ್ಲೀಸ್~ ಕುರಿತು ಉಪನ್ಯಾಸ ಮಾಲಿಕೆ. ಸಂಜೆ 6.

ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ: ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ನಂ.49 ಮಾಣಿಕ್ಯ ವೇಲು ಮ್ಯಾನ್ಷನ್, ಅರಮನೆ ರಸ್ತೆ. ಪ್ಯಾರಿಸ್‌ನ ಬ್ರೂನೊ ಲಾ ತೂರ್ ಅವರಿಂದ `ಎಕಲಾಜಿಕಲ್ ಕ್ರೈಸಿಸ್ ಡಿಜಿಟಲ್ ಹ್ಯೂಮಾನಿಟೀಸ್ ಅಂಡ್ ನ್ಯೂ ಪೊಲಿಟಿಕಲ್ ಅಸೆಂಬ್ಲಿ~ ಕುರಿತು ಉಪನ್ಯಾಸ. ಸಂಜೆ 6.

ಶ್ರೀರಾಮ ಮಂಡಳಿ: ಪೂರ್ವಾಂತ್ಯ `ಎ~ ಮುಖ್ಯರಸ್ತೆ, 9ನೇ ಬಡಾವಣೆ, ಜಯನಗರ, `44ನೇ ರಾಮೋತ್ಸವ ಆಚರಣೆ~ ಬೆಳಿಗ್ಗೆ 10.30ಕ್ಕೆ ಗಣಪತಿ ಹೋಮ, ಸಂಜೆ 4.30ಕ್ಕೆ ಪಂಚಾಂಗ ಶ್ರವಣ-ಮಂಜುನಾಥ್ ಭಟ್, ಸಂಜೆ 5.30ಕ್ಕೆ ಶಿವರುದ್ರ ಮಹಾಸ್ವಾಮೀಜಿ ಅವರಿಂದ ಉತ್ಸವ ಉದ್ಘಾಟನೆ.

ಶ್ರೀ ರಾಮ ಮಂದಿರ: ಈಸ್ಟ್ ಪಾರ್ಕ್ ರಸ್ತೆ, 9ನೇ ಅಡ್ಡರಸ್ತೆ, ಮಲ್ಲೇಶ್ವರ, ಯುಗಾದಿ ಪ್ರಯುಕ್ತ ಬೆಳಿಗ್ಗೆ ಅಭಿಷೇಕ, ಸೂರ್ಯನಮಸ್ಕಾರ, ಶ್ರೀರಾಮಾಯಣ ಪಾರಾಯಣ, ನವಗ್ರಹ ಜಪ, ಮಂಗಳಾರತಿ, ಸಂಜೆ 5ಕ್ಕೆ ಪಂಚಾಂಗ ಶ್ರವಣ, 6.30ಕ್ಕೆ ಶಂಕರ್ ರಾಜನ್ ಮತ್ತು ವಿಶ್ವನಾಥನ್ ಅವರಿಂದ ದ್ವಂದ್ವ ಪಿಟೀಲು ವಾದನ.

ಶ್ರೀರಾಮ ಸೇವಾ ಸಮಿತಿ: ಕಾರಂಜಿ ಅಂಜನೇಯಸ್ವಾಮಿ ದೇವಸ್ಥಾನ ಬಸವನಗುಡಿ, `58ನೇ ಶ್ರೀರಾಮನವಮಿ ಸಂಗೀತ ಮಹೋತ್ಸವ~. ಬೆಳಿಗ್ಗೆ 8ರಿಂದ ಶ್ರೀರಾಮದೇವರಿಗೆ ಪಂಚಾಮೃತಾಭಿಷೇಕ ಮತ್ತು ಸಹಸ್ರ ನಾಮಾರ್ಚನೆ, ಶ್ರೀಮದ್‌ರಾಮಾಯಣ ಪಾರಾಯಣ- ಎಚ್.ಆರ್. ಶ್ರೀಧರ್.

ಶ್ರೀರಾಮ ಭಕ್ತ ಸಭಾ: ಶ್ರೀಕಂಠೇಶ್ವರ ಭವನ, ಐಸಿಐಸಿಐ ಬ್ಯಾಂಕ್ ಹತ್ತಿರ, ನಂ.74, 5ನೇ ಅಡ್ಡರಸ್ತೆ, ಮಲ್ಲೇಶ್ವರ, `106ನೇ ಶ್ರೀರಾಮೋತ್ಸವ ಉತ್ಸವ~ ಪ್ರಯುಕ್ತ ಸೀತಾ ನಾರಾಯಣ ಅವರಿಂದ ಗಾಯನ, ಎಂ.ಎಸ್. ಗೋವಿಂದಸ್ವಾಮಿ (ಪಿಟೀಲು) ಎಂ.ಎ.ಕೃಷ್ಣಮೂರ್ತಿ (ಮೃದಂಗ) ಸಂಜೆ 6.30.

ಸರ್ಪಭೂಷಣ ಶಿವಯೋಗಿಗಳ ಮಠದ ಟ್ರಸ್ಟ್: ಕೆಂಪೇಗೌಡ ವೃತ್ತ, `ನಂದನಾಮ ಸಂವತ್ಸರ ಯುಗಾದಿ ಮಹೋತ್ಸವ ಹಾಗೂ ವೈರಾಗ್ಯ ನಿಧಿ ಅಲ್ಲಮಪ್ರಭು ಜಯಂತಿ~ ಉದ್ಘಾಟನೆ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು.ಪಿ.ಬಳಿಗಾರ್, ಅಧ್ಯಕ್ಷತೆ-ಎಸ್.ಎಸ್.ಬಿ. ಮಠದ ಟ್ರಸ್ಟ್ ಉಪಾಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ. ಸಂಜೆ 5.

ತೊಗಟವೀರ ಕ್ಷತ್ರಿಯ ಸಂಘ: ಚೌಡೇಶ್ವರಿದೇವಿ ಅಮ್ಮನವರ ದೇವಸ್ಥಾನ, ಯಲಹಂಕ, ಬೆಳಿಗ್ಗೆ 8ರಿಂದ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 7ಕ್ಕೆ ಉದ್ಘಾಟನೆ-ಮಾಜಿ ಪುರಸಭಾ ಅಧ್ಯಕ್ಷ ಎಂ.ರಾಮಚಂದ್ರಪ್ಪ, ಮಾಜಿ ನಗರಸಭಾ ಸದಸ್ಯ ಮಲ್ಲಿಕಾರ್ಜುನಪ್ಪ.

ಶ್ರೀರಾಮ ಸೇವಾ ಸಂಘ: ನಂ.36, ಶ್ರೀರಾಮ ಮಂದಿರಂ ರಸ್ತೆ, ಬಸವನಗುಡಿ, ಆರ್.ವಿ. ಟೀಚರ್ಸ್‌ ಕಾಲೇಜ್ ವೃತ್ತ ಮತ್ತು ಟ್ರಿನಿಟಿ ಹಾಸ್ಪಿಟಲ್ ಹತ್ತಿರ, ಶ್ರೀರಾಮನವಮಿ ಮಹೋತ್ಸವ ಪ್ರಯುಕ್ತ ಬೆಳಿಗ್ಗೆ ವಿಶೇಷ ಪೂಜೆ, ಹೋಮಾದಿಗಳು ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು.

ವಚನ ಜ್ಯೋತಿ ಬಳಗ: `ಜ್ಞಾನ ಯೋಗಮಂದಿರ~ ನಂ.230, 14ನೇ ತಿರುವು, ಎಂ.ಸಿ. ಬಡಾವಣೆ, (ಸಿಂಡಿಕೇಟ್ ಬ್ಯಾಂಕ್ ಸಮೀಪ) ವಿಜಯನಗರ, `ಅಲ್ಲಮಪ್ರಭುದೇವರ ಜಯಂತ್ಯುತ್ಸವ~ ಉದ್ಘಾಟನೆ- ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, `ವಚನಜ್ಯೋತಿ~ ಅಲ್ಲಮಪ್ರಭು ವಿಶೇಷಾಂಕ ಬಿಡುಗಡೆ-ಸಾಹಿತಿ ಬಿ.ಎಸ್.ಸ್ವಾಮಿ. ಸಂಜೆ 5.

ನಾಟ್ಯಾಂತರಂಗ: ಸರ್.ಎಂ.ವಿಶ್ವೇಶ್ವರಯ್ಯ ಆಲದಮರದ ಉದ್ಯಾನವನ, ಬಸವೇಶ್ವರನಗರ, ಯುಗಾದಿ ಉತ್ಸವ ಪ್ರಯುಕ್ತ `ವಚನ ಹಾಗೂ ಸಮಕಾಲೀನ ನೃತ್ಯ ವೈಭವ~-ಶುಭ ಧನಂಜಯ ಮತ್ತು ಶಿಷ್ಯವೃಂದದವರಿಂದ, ಜಾನಪದ ಸಂಗೀತ-ಶಶಿಧರ್ ಕೋಟೆ ಮತ್ತು ತಂಡದವರಿಂದ, ನಗೆಹಬ್ಬ-ಸುಧಾ ಬರಗೂರು ತಂಡದವರಿಂದ. ಅಧ್ಯಕ್ಷತೆ-ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್. ಸಂಜೆ 5.

ಶ್ರೀರಾಮ ಕೃಪಾ ಪೋಷಿತ ನಾಟಕ ಮಂಡಳಿ: ಅಂದ್ರಹಳ್ಳಿ ಗ್ರಾಮ, ಮಾಗಡಿ ರಸ್ತೆ, ಹೇರೋಹಳ್ಳಿ ಹತ್ತಿರ. `ಸುಂದರಕಾಂಡ ರಾಮಾಯಣ~ ಯಕ್ಷಗಾನ ನಾಟಕ. ಉದ್ಘಾಟನೆ-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಿ.ವೆಂಕಟೇಶಯ್ಯ, ಅಧ್ಯಕ್ಷತೆ-ಹಿರಿಯ ಯಕ್ಷಗಾನ ಕಲಾವಿದ ಆರ್. ಅಶ್ವಥ ನಾರಾಯಣ ರೆಡ್ಡಿ. ರಾತ್ರಿ 8.30.

ವಿಜಯವಿಠಲ ಸಂಗೀತ ಕಲಾ ವೇದಿಕೆ:
ಫಲಿಮಾರು ಮಠ, ಸಂಪಿಗೆ ರಸ್ತೆ, ಫುಡ್‌ವರ್ಲ್ಡ್ ಎದುರು, ಮಲ್ಲೇಶ್ವರ. ಪುತ್ತೂರು ನರಸಿಂಹನಾಯಕ ಅವರಿಂದ `ದಾಸರ ಪದಗಳ ಗಾಯನ~ ಸಂಜೆ 6.30.

ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠ:
ನಂ.177/1, ಪ್ಲಾಟ್‌ಫಾರಂ ರಸ್ತೆ, ರಾಜೀವ್ ಗಾಂಧಿ ಸರ್ಕಲ್ ಹತ್ತಿರ, ಶೇಷಾದ್ರಿಪುರಂ. ಯುಗಾದಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 6ಕ್ಕೆ ಅಭ್ಯಂಜನ, ಪಂಚಾಮೃತ, ಅಭಿಷೇಕ, ಸಹಸ್ರ ಕಳಶಾಭಿಷೇಕ, ಸಂಜೆ 6.30ಕ್ಕೆ ಲಕ್ಷ್ಮಿನಾರಾಯಣಾಚಾರ್ಯ ಅವರಿಂದ ಶ್ರೀ ನಂದನ ಸಂವತ್ಸರದ ಪಂಚಾಂಗ ಶ್ರವಣ.

ಶ್ರೀ ವ್ಯಾಸಮಧ್ವ ಸಂಶೋಧನಾ ಪ್ರತಿಷ್ಠಾನ: `ಪಾಜಕ~ 89/24, 3ನೇ ಮುಖ್ಯರಸ್ತೆ, ಮೌಂಟ್‌ಜಾಯ್ ಎಕ್ಸ್‌ಟೆನ್ಷನ್, ಹನುಮಂತನಗರ. ಯುಗಾದಿ ಹಬ್ಬದ ಪ್ರಯುಕ್ತ ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ `ಪಂಚಾಂಗ ಶ್ರವಣ~. ಸಂಜೆ 6.45.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.