ಮಾರ್ಚ್ 3, ಶನಿವಾರ
ಕರ್ನಾಟಕ ಚಲನಚಿತ್ರ ಅಕಾಡೆಮಿ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ. ಅಂಚೆ ಚೀಟಿಗಳ ಪ್ರದರ್ಶನ. ಉದ್ಘಾಟನೆ: ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ ಬಸವರಾಜು, ಅತಿಥಿಗಳು: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್. ನಾಗಾಭರಣ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ನಟಿ ಜಯಂತಿ. ಬೆಳಿಗ್ಗೆ 10.
ಜ್ಯೋತಿ ಚಾರಿಟಬಲ್ ಟ್ರಸ್ಟ್: ಜ್ಯೋತಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣ, ತಾತಗುಣಿ, ಕನಕಪುರ ರಸ್ತೆ. ಜ್ಯೋತಿ ತಾಂತ್ರಿಕ ಮಹಾವಿದ್ಯಾಲಯದ ಉದ್ಘಾಟನೆ. ಸಂಗೀತ ಕಲಾನಿಧಿ ಡಾ.ಆರ್.ಕೆ.ಶ್ರೀಕಂಠನ್ ಅವರಿಗೆ ಸನ್ಮಾನ. ಅತಿಥಿಗಳು: ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಶೃಂಗೇರಿ ಮಹಾಸಂಸ್ಥಾನದ ಆಡಳಿತಾಧಿಕಾರಿ ವಿ.ಆರ್.ಗೌರಿಶಂಕರ್, ಪತ್ರಕರ್ತ ಸೋ.ತಿ.ನಾಗರಾಜ. ಬೆಳಿಗ್ಗೆ 10.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ನಂ.6, ಬಿ.ಪಿ.ವಾಡಿಯಾ ರಸ್ತೆ. ರಾಧಾ ರಾಮಸ್ವಾಮಿ ಅವರಿಂದ `ಆಧುನಿಕ ಶಿಕ್ಷಣದಲ್ಲಿನ ಸಮಸ್ಯೆಗಳು~ ಕುರಿತು ವಿಚಾರ ಗೋಷ್ಠಿ. ಸಂಜೆ 6.15.
ಸೇಂಟ್ ಜಾನ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್: ವಾರ್ಷಿಕೋತ್ಸವ ಮತ್ತು ಪದವಿ ಪ್ರದಾನ ಸಮಾರಂಭ. ಉದ್ಘಾಟನೆ: ರಾಜ್ಯಪಾಲ ಹಂಸರಾಜ್ ಭಾರದ್ವಾಜ್. ಅಧ್ಯಕ್ಷತೆ: ರೇವ್ ಬರ್ನಾಡ್ ಮೋರಾಸ್. ಬೆಳಿಗ್ಗೆ 11.30.
ಶೇಷಾದ್ರಿಪುರಂ ಪ್ರೌಢಶಾಲೆ: ಶೇಷಾದ್ರಿಪುರ. ಸ್ವಾಮಿ ವಿವೇಕಾನಂದ ಹುಟ್ಟುಹಬ್ಬದ ಕಾರ್ಯಕ್ರಮ. ವಿಪ್ರೊ ಇನ್ಫೋಟೆಕ್ನ ವ್ಯವಸ್ಥಾಪಕ ನಿರ್ದೇಶಕ ಮೋಹನ್ ರಾಮಯ್ಯ. ಉದ್ಯಮಿ ನಂದ್ಲ ಭಟಿಜಾ. ಅಧ್ಯಕ್ಷತೆ: ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ವೂಡೇ ಪಿ.ಕೃಷ್ಣ. ಬೆಳಿಗ್ಗೆ 10.
ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಡಯಾಬಿಟಲಾಜಿ: ಸತ್ಯ ಸಾಯಿ ಸೇವಾ ಸದನ, ನಂ.20, ಹೊಸೂರು ರಸ್ತೆ. ಕಿಡ್ ಅಪ್ಡೇಟ್ 2012. ನಂತರ ಖ್ಯಾತ ತಜ್ಞ ಪ್ರೊ.ವಿ.ಮೋಹನ್ ಅವರಿಗೆ ಸನ್ಮಾನ. ಬೆಳಿಗ್ಗೆ11.
ಮಹಿಳಾ ದಕ್ಷತ ಸಮಿತಿ: ಜೈನ್ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್, ಜೈನ್ ವಿಶ್ವವಿದ್ಯಾಲಯ, ನಂ.1/1-1, ಅಟ್ರಿಯಾ ಟವರ್ಸ್, ಪ್ಯಾಲೇಸ್ ರಸ್ತೆ. `ಪ್ರಸ್ತುತ ಶೈಕ್ಷಣಿಕ ಪದ್ಧತಿ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆಯೇ?~ ಕುರಿತು ವಿಚಾರ ಸಂಕಿರಣ. ಅತಿಥಿಗಳು: ಜೈನ್ ಸಂಸ್ಥೆ ಮುಖ್ಯಸ್ಥ ಚೆನ್ನರಾಜ್ ಜೈನ್. ಮಧ್ಯಾಹ್ನ 3.
ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ: ಎಂ.ವಿ.ಸೀ.ಸಭಾಂಗಣ, ಬಿ.ಎಂ.ಶ್ರೀ ಕಲಾಭವನ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೋನಿ. ವೆಂಕಟರಂಗಪ್ಪ ಸ್ಮಾರಕ ದತ್ತಿ ಮತ್ತು ಜೆ.ಪಿ.ರಾಜರತ್ನಂ; ಚಂದ್ರ ಶೇಖರ ಶರ್ಮ ದತ್ತಿ ಕಾರ್ಯಕ್ರಮ ಹಾಗೂ `ಸಮಕಾಲೀನ ಕಾವ್ಯಗಳು ಎದುರಿಸುತ್ತಿರುವ ಸವಾಲುಗಳು~ ಕುರಿತು ಉಪನ್ಯಾಸ. ಅಧ್ಯಕ್ಷತೆ: ಬಿ.ಎಂ.ಶ್ರೀ.ಸ್ಮಾರಕ ಪ್ರತಿಷ್ಠಾನ ಅಧ್ಯಕ್ಷ ಪ್ರೊ.ಡಿ.ಲಿಂಗಯ್ಯ, ಉಪನ್ಯಾಸ- ಆಕಾಶವಾಣಿ ಕೇಂದ್ರ ಕಾರ್ಯನಿರ್ವಾಹಕ ಡಾ.ವಸಂತ ಕುಮಾರ್ ಪೆರ್ಲಾ. ಸಂಜೆ 5.30.
ಸಾಂಸ್ಕೃತಿಕ ಕಾರ್ಯಕ್ರಮಗಳು...
ವಿದ್ಯಾ ಗಣಪತಿ ದೇವಸ್ಥಾನ: 8ನೇ ಮುಖ್ಯರಸ್ತೆ, 17ನೇ ಅಡ್ಡರಸ್ತೆ, ಮಲ್ಲೇಶ್ವರಂ. 15ನೇ ವರ್ಷದ ಬ್ರಹ್ಮರಥೋತ್ಸವ. ಬೆಳಿಗ್ಗೆ 9ಕ್ಕೆ ಅವಭೃತೋತ್ಸವ, ಸಂಜೆ 6ಕ್ಕೆ ಪೂರ್ಣಾಹುತಿ, ಪಲ್ಲಕ್ಕಿ ಉತ್ಸವ.
ಲಕ್ಷ್ಮೀ ವೆಂಕಟೇಶ್ವರ, ಪ್ರಸನ್ನಾಂಜನೇಯ ಮತ್ತು ನವಗ್ರಹ ದೇವಾಲಯ: 4ನೇ ಮುಖ್ಯರಸ್ತೆ, ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ರಸ್ತೆ, ಪಿ.ಪಿ.ಲೇಔಟ್ ಅಟ್ಯಾಚ್ಡ್. 19ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಶ್ರೀನಿವಾಸ ಕಲ್ಯಾಣ. ಬೆಳಿಗ್ಗೆ 9.30.
ಹೆರಿಟೇಜ್, ಆರ್ಕಿಯಾಲಜಿ ಮತ್ತು ಮ್ಯೂಸಿಯಂ ಇಲಾಖೆ: ದೊಡ್ಡ ಬಸವಣ್ಣ ದೇವಸ್ಥಾನ, ಬಸವನಗುಡಿ, ಸಂಜೆ 5.30ಕ್ಕೆ ಸಂಗೀತ, ನೃತ್ಯ, ಕೈಂಕರ್ಯ, ಸಂಜೆ 6ಕ್ಕೆ ಕೃಷ್ಣೇಂದ್ರ ವಾಡಿಕರ್ ಅವರಿಂದ ಹಿಂದುಸ್ತಾನಿ ಸಂಗೀತ, ರೋಜಾ ಕಣ್ಣನ್ ಮತ್ತು ತಂಡದಿಂದ `ಅರ್ಧನಾರೀಶ್ವರ ಕೊರವಂಜಿ ಪ್ರಹಸನ~ ಸಂಜೆ 7.30ಕ್ಕೆ.
ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ನಂ.42/1, ವಿವೇಕಾನಂದ ಮಾರ್ಗ, ಗೋಕುಲ ಬಡಾವಣೆ, ದೇವಸಂದ್ರ, ಕೆ.ಆರ್.ಪುರಂ. ಉಪನಿಷದ್ ಜ್ಞಾನಾಮೃತ ಭಾವಧಾರೆ ಉಪನ್ಯಾಸ. ನಿರ್ವಹಣೆ: ಚಂದ್ರೇಶಾನಂದಜಿ, ಸಂಜೆ 5.30.
ಶಂಕರ ಜಯಂತಿ ಮಂಡಳಿ: ನಂ 45, ಶಂಕರ ಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಶಿವರಾಮ ಅಗ್ನಿಹೋತ್ರ ಅವರಿಂದ ಪಂಚದಶೀ. ಸಂಜೆ 6.
ಚಿಂತಲಪಲ್ಲಿ ಪರಂಪರಾ ಟ್ರಸ್ಟ್: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರಂ. ಕಲಾಭೂಷಣ ಚಿಂತಲಪಲ್ಲಿ ಚಂದ್ರಶೇಖರ್ ಸ್ಮಾರಕ ಕಾರ್ಯಕ್ರಮ. ವಿ.ಭಾಸ್ಕರ್ ಸಿಂಹಾದ್ರಿ-ವೇಣುವಾದನ. ಗಾಯನ- ಪಟ್ಟಾಭಿರಾಮ ಪಂಡಿತ್, ಪಿಟೀಲು- ಮತ್ತೂರು ಆರ್.ಶ್ರೀನಿಧಿ, ಮೃದಂಗ- ಬಿ.ಸಿ.ಮಂಜುನಾಥ್, ಖಂಜರಿ- ಸಿ.ಪಿ.ವ್ಯಾಸ ವಿಠಲ. ಸಂಜೆ 6.15.
ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿ ಪುರಂ. ಎನ್.ಶ್ರೀಮತಿ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ. ಸಂಜೆ 6.30.
ನಟರಾಜ ನೃತ್ಯ ಶಾಲಾ: ರಾಜಶ್ರೀ ಮತ್ತು ಮುರಳಿಧರ್ ಅವರ ಪುತ್ರಿ ಸ್ಮೃತಿ ಎಂ.ಹರಿತ್ಸಾ ರಂಗಪ್ರವೇಶ. ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಸ್ಮೃತಿ, ಹತ್ತನೆಯ ವಯಸ್ಸಿನಿಂದಲೇ ಭರತನಾಟ್ಯ ಕಲಿಯಲು ಪ್ರಾರಂಭಿಸಿದರು. ಪ್ರಸ್ತುತ ವಸುಂಧರಾ ಸಂಪತ್ಕುಮಾರ್ ಬಳಿ ಕಲಿಯುತ್ತಿದ್ದಾರೆ. ಶಿವರಾತ್ರಿ ವಸಂತೋತ್ಸವ, ಜನ್ಮಾಷ್ಠಮಿ ಮುಂತಾದ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅತಿಥಿಗಳು: ಮೈಸೂರು ಕಲಾ ರತ್ನ ಮೈಸೂರು ವಿ. ಸುಬ್ರಹ್ಮಣ್ಯ. ಇಸ್ಕಾನ್ ಅಧ್ಯಕ್ಷ ತಿರುಸ್ವಾಮೀಜಿ, ಅಮರನಾಥ ಗೌಡ. ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಸಂಜೆ 6.30.
ಕೇಶವ ಸಂಸ್ಕೃತಿ ಸಭಾ: ಸಂಸ್ಕೃತಿ ಭವನ, ನಂ.556, 11ನೇ ಮುಖ್ಯರಸ್ತೆ, ಇಸ್ರೋ ಲೇಔಟ್, `ಕರ್ನಾಟಕ ಶಾಸ್ತ್ರೀಯ ಸಂಗೀತ~ ಡಿ.ವಿ. ನಾಗರಾಜ್ (ಗಾಯನ), ಸಿಂಧು ಸುಚೇತನಾ (ಪಿಟೀಲು), ಅನೂರು ದತ್ತಾತ್ರೇಯ ಶರ್ಮಾ (ಮೃದಂಗ), ಬಿ.ಆರ್. ರವಿಕುಮಾರ್(ಘಟ). ಸಂಜೆ 6.15.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.