ಹಾಸ್ಯ ಚಕ್ರವರ್ತಿ ಎಂದೇ ಪ್ರಸಿದ್ಧಿ ಪಡೆದ ನಟ ದಿವಂಗತ ನರಸಿಂಹರಾಜು ಅವರ 89ನೇ ಜನ್ಮದಿನೋತ್ಸವ ಪ್ರಯುಕ್ತ `ಗೋಲ್ಸ್ ಅಂಡ್ ಡ್ರೀಮ್ಜ~ ಸಂಸ್ಥೆಯು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.
ತಮ್ಮ ಹಾಸ್ಯ ನಟನೆಯ ಮೂಲಕ ರಾಜ್ಯದಾದ್ಯಂತ ಮನೆಮಾತಾಗಿದ್ದ ನಟ ಟಿ.ಆರ್. ನರಸಿಂಹರಾಜು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಪಾತ್ರಗಳು, ಅದರ ವಿಶೇಷತೆ, ಆ ಪಾತ್ರಗಳು ಮಾಡಿದ ಪರಿಣಾಮ ಸೇರಿದಂತೆ ಅನೇಕ ವಿಷಯಗಳನ್ನೊಳಗೊಂಡ ಪ್ರಬಂಧ ಸ್ಪರ್ಧೆ ಇರುತ್ತದೆ.
`ಹಾಸ್ಯಾಭಿನಯಕ್ಕೆ ನರಸಿಂಹರಾಜು ಅವರ ಕೊಡುಗೆ~ ಮತ್ತು `ಕನ್ನಡ ಚಿತ್ರರಂಗದಲ್ಲಿ ನರಸಿಂಹರಾಜು ಅವರು ಬೆಳೆದು ಬಂದ ಪರಿ~ ಈ ಎರಡು ವಿಷಯಗಳಲ್ಲಿ ಒಂದನ್ನು ಆಯ್ದುಕೊಂಡು ಸಂಶೋಧನಾತ್ಮಕ ಪ್ರಬಂಧ ಬರೆಯಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳು ಜು.15ರೊಳಗೆ ಪ್ರಬಂಧ ಬರೆದು ಕಳುಹಿಸಬೇಕು.
ಮೊದಲ ಬಹುಮಾನ 5 ಸಾವಿರ, ದ್ವಿತೀಯ 3 ಸಾವಿರ ಹಾಗೂ ಮೂರನೇ ಸ್ಥಾನಕ್ಕೆ ಎರಡು ಸಾವಿರ ರೂ. ನಗದು ಬಹುಮಾನ. ಜೊತೆಗೆ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಜು.24ರಂದು ಟೌನ್ಹಾಲ್ನಲ್ಲಿ ನಡೆಯುವ ನರಸಿಂಹರಾಜು ಜನ್ಮ ದಿನಾಚರಣೆಯಂದು ಬಹುಮಾನ ವಿತರಸಲಾಗುತ್ತದೆ.
ಮಾಹಿತಿಗೆ: 94820 71501. narasimharaju.essay@gmail.com.
.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.