ADVERTISEMENT

ಪಿಕ್ಚರ್ ಪ್ಯಾಲೆಸ್

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

 ಛತ್ರಿ ಛಾಯೆಯಲ್ಲಿ...

 


ಮಹಾವೀರ ಜಯಂತಿ ಸಂಭ್ರಮಕ್ಕೆ ಸೂರ್ಯನ ಬಿಸಿಲೇನೂ ತಡೆಯಾಗಲಿಲ್ಲ. ಜೋಡಿ ಕುದುರೆಗಳು ಸಹ ಛತ್ರಿ ನೆರಳಿನಲ್ಲಿ ಮೆರವಣಿಗೆಗೆ ಹೆಜ್ಜೆ ಹಾಕಿದವು. `ನೀ ಕೊಡೆ, ನಾ ಬಿಡೆ~ ಎಂಬಂತೆ ಬಾಲೆಯರಿಬ್ಬರು ಬಣ್ಣದ ಕೊಡೆ ಹಿಡಿದು ಕಣ್ಣರಳಿಸಿದರು. ಕೋಲುನಡಿಗೆಯಲ್ಲಿ ಕಲಾವಿದರು ಹೆಜ್ಜೆಯ ಮೇಲೊಂದು ಹೆಜ್ಜೆಯನ್ನು ಹಾಕಿ ಗಮನ ಸೆಳೆದರು.
 
ಮಹಾವೀರ ಜಯಂತಿ ಸಂದರ್ಭದಲ್ಲಿ ಜೈನ ಸಮುದಾಯದ ಯುವತಿಯರು ಕೈಮುಗಿದು ನಮಿಸಿದರು. ವಸಂತಾಗಮನದೊಂದಿಗೆ ಬರುವ ಮಹಾವೀರ ಜಯಂತಿಯಲ್ಲಿ ಜೀವವೈವಿಧ್ಯವನ್ನು, ವೈಭವವನ್ನು ಸಂಕೇತಿಸುವ ಗಾಢವರ್ಣಗಳ ವಸ್ತ್ರಗಳಲ್ಲಿ ಮಾನಿನಿಯರು ಸಂಭ್ರಮಿಸಿದರು. ನಗು, ನೆಮ್ಮದಿ ಸತತವಾಗಿರಲಿ ಎಂದು ಪ್ರಾರ್ಥಿಸಿದರು.
                               
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT