
ಪ್ರಜಾವಾಣಿ ವಾರ್ತೆನೆಲಮಂಗಲ ಸಮೀಪದ ಯಾಗನಹಳ್ಳಿಯಲ್ಲಿ ಗುರುವಾರ ಮತ್ತು ಶುಕ್ರವಾರ ಶ್ರೀ ನಾಗರಾಜಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಶ್ರೀ ಅಶ್ವತ್ಥವೃಕ್ಷ ಕಲ್ಯಾಣೋತ್ಸವ ಸಮಾರಂಭ ನಡೆಯಲಿದೆ.
ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ಶ್ರೀನಂಜಾವಧೂತ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ಗುರುವಾರ ಸಂಜೆ 6ಕ್ಕೆ ರಂಗೋಲಿ ಸ್ಪರ್ಧೆ, 7.30ಕ್ಕೆ ಬಾಗಿನ ಕೊಡುವ ಕಾರ್ಯಕ್ರಮ, ರಾತ್ರಿ 9ಕ್ಕೆ ಗಣಪತಿ ಪೂಜೆ, ಶುಕ್ರವಾರ ಬೆಳಿಗ್ಗೆ 4.10 ರಿಂದ 4.50ರ ವೃಷಭ ಲಗ್ನದಲ್ಲಿ ಶ್ರೀ ನಾಗರಾಜಸ್ವಾಮಿಯ ನೂತನ ಶಿಲಾ ಪ್ರತಿಷ್ಠಾಪನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.