ಹೆಸರಾಂತ ಸಾರಂಗಿ ವಾದಕ ಮತ್ತು ಗಾಯಕ ಉಸ್ತಾದ್ ಫಯಾಜ್ ಖಾನ್ ಅವರ ಸಹಾಯಾರ್ಥವಾಗಿ ಅನನ್ಯ ಆರೋಗ್ಯಧಾರಾ ಮತ್ತು ಭಾರತೀಯ ವಿದ್ಯಾಭವನ ಜೊತೆಗೂಡಿ ವಿಶೇಷ ಸಂಗೀತ ಕಛೇರಿಯನ್ನು ಹಮ್ಮಿಕೊಂಡಿದೆ. ಹಾವೇರಿ ಬಳಿ ನಡೆದ ಅಪಘಾತದಲ್ಲಿ ಫಯಾಜ್ ಅವರ ಪತ್ನಿ ಪರ್ವೀನ್ ಹಾಗೂ ಅವರ ನಾದಿನಿ ಮೃತಪಟ್ಟಿದ್ದು, ಫಯಾಜ್ ಅವರ ಬೆನ್ನು ಮತ್ತು ಕಾಲಿಗೂ ತೀವ್ರ ಪೆಟ್ಟಾಗಿದೆ. ಅವರು ಚೇತರಿಸಿಕೊಳ್ಳಲು ಹಲವು ತಿಂಗಳು ಬೇಕಾಗಿದ್ದು, ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲೆಂದು ಈ ಸಂಗೀತ ಕಛೇರಿಯನ್ನು ಆಯೋಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.