ರಾಘವೇಂದ್ರ ಸೇವಾ ಸಮಿತಿ: ಶನಿವಾರ ಬೆಳಿಗ್ಗೆ 8ಕ್ಕೆ ಆಚಾರ್ಯ ಮಧ್ವರ ರಥೋತ್ಸವ. 11ಕ್ಕೆ ವಿದ್ವಾನ್ ಕಲ್ಲಾಪುರ ಪವಮಾನಾಚಾರ್ಯ ಅವರಿಗೆ ಸನ್ಮಾನ. ಸಂಜೆ 6ಕ್ಕೆ ಡಾ. ವಿನಾಯಕಾಚರ್ಯ ಅವರಿಂದ ‘ಶ್ರೀ ಮಧ್ವಾಚಾರ್ಯರ ಸಂದೇಶಗಳು’ ಉಪನ್ಯಾಸ. ಸ್ಥಳ: 6ನೇ ಕ್ರಾಸ್, ಸುಧೀಂದ್ರನಗರ, ಮಲ್ಲೇಶ್ವರಂ.
ಮಧ್ವನವಮಿ
ವ್ಯಾಸ ಮಧ್ವ ಸಂಶೋಧನ ಪ್ರತಿಷ್ಠಾನ; ಶನಿವಾರ ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ ಮಧ್ವನವಮಿ ಪ್ರವಚನ.
ಸ್ಥಳ: ನಂ.89/24, 3ನೇ ಕ್ರಾಸ್ ಮೌಂಟ್ ಜಾಯ್ ಬಡಾವಣೆ, ಹನುಮಂತನಗರ. ಸಂಜೆ 6.30.
ಮೆರವಣಿಗೆ
ರಾಘವೇಂದ್ರ ಗುರುಸೇವಾ ಸಮಿತಿ: ಶನಿವಾರ ಬೆಳಿಗ್ಗೆ 9ಕ್ಕೆ ಮಧ್ವಾಚಾರ್ಯರ ಭಾವಚಿತ್ರದ ಮೆರವಣಿಗೆ. ಮಧ್ಯಾಹ್ನ ಸ್ಪರ್ಧಾ ವಿಜೇತರಿಗೆ ಬಹುಮಾನ. ಸ್ಥಳ: 145, 13ನೇ ಎ ಮುಖ್ಯ ರಸ್ತೆ, ಗೋಕುಲ ಮೊದಲನೇ ಹಂತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.