ADVERTISEMENT

`ಮೈಂಡ್ ಸ್ಪೇಸ್' ಛಾಯಾಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST
`ಮೈಂಡ್ ಸ್ಪೇಸ್' ಛಾಯಾಚಿತ್ರ ಪ್ರದರ್ಶನ
`ಮೈಂಡ್ ಸ್ಪೇಸ್' ಛಾಯಾಚಿತ್ರ ಪ್ರದರ್ಶನ   

ಕ್ರೆಸೆಂಟ್ ರಸ್ತೆಯಲ್ಲಿರುವ ನಳಪಾದ್ಸ್ ಹೊಟೆಲ್ ಬೆಂಗಳೂರು ಇಂಟರ್‌ನ್ಯಾಷನಲ್‌ನ ಗ್ಯಾಲರಿ ಕ್ರೆಸೆಂಟ್‌ನಲ್ಲಿ ಏ.6ರಿಂದ 16ರವರೆಗೆ `ಮೈಂಡ್ ಸ್ಪೇಸ್' ಹೆಸರಿನ ಸಮೂಹ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

ಏಳು ಮಂದಿ ಪ್ರತಿಭಾವಂತ ಯುವ ಛಾಯಾಗ್ರಾಹಕರ ಚಿತ್ರಗಳು ಪ್ರದರ್ಶನದಲ್ಲಿವೆ. ಕೇರಳ ಮೂಲದ ಬೆಂಗಳೂರು ನಿವಾಸಿ ರಾಹುಲ್ ಅಕೋಟ್, ಕೋದಂಡರಾಮ್, ಮಂಗಳೂರು ಮೂಲದ ಬರೋಡ ನಿವಾಸಿ ಶಾಲ್ಮಲಿ ಶೆಟ್ಟಿ, ತಂಜಾವೂರಿನ ಮಣಿಕಂಠನ್ ಎ.ವಿ., ಶಾನಿಲ್ ಲೋದ್, ರಿತೇಶ್ ಮೆನನ್ ಮತ್ತು ಬೆಂಗಳೂರಿನ ಚಿತ್ರಕಲಾವಿದ ವಿಷ್ಣುಕುಮಾರ್ ಅವರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಏ.6ರಂದು ಸಂಜೆ 6ಕ್ಕೆ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಟಿ.ಎನ್.ಎ.ಪೆರುಮಾಳ್ ಉದ್ಘಾಟಿಸುವರು.

ಪ್ರದರ್ಶನ ಪ್ರತಿದಿನ ಬೆಳಗ್ಗೆ 11ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ. ಮಾಹಿತಿಗೆ: 9886349811.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.