ಈ ಭಾನುವಾರ ಬೆಳ್ಳಂಬೆಳಗ್ಗೆ ಕಬ್ಬನ್ ಪಾರ್ಕ್ನ ಬಣ್ಣವೇ ಬದಲಾಗಿತ್ತು. ಅಲ್ಲಿ ಬಣ್ಣ ತುಂಬಿದವರು ನಗರದ ಮಕ್ಕಳು. ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆಯು ರಸ್ತೆ ಸುರಕ್ಷೆ ಕುರಿತಂತೆ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಿತ್ತು. ಸಾವಿರಕ್ಕೂ ಅಧಿಕ ಮಕ್ಕಳು ರಸ್ತೆ ಸುರಕ್ಷತೆ ಕುರಿತಂತೆ ತಮ್ಮ ಕಲ್ಪನೆಯ ಚಿತ್ರಕ್ಕೆ ಬಣ್ಣ ತುಂಬಿದರು. ಮಕ್ಕಳ ಕಲಾ ಲೋಕಕ್ಕೆ ನಟಿ ತಾರಾ, ಪ್ರಿಯಾಂಕಾ ಉಪೇಂದ್ರ ಹಾಗೂ ಸುದೀಪ್ ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.