ADVERTISEMENT

ರಾಮಚಂದ್ರ ಚಿತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST

ಇತ್ತೀಚೆಗೆ ನಿಧನರಾದ ಎಸ್. ರಾಮಚಂದ್ರ ಭಾರತೀಯ ಚಿತ್ರರಂಗದ ಪ್ರತಿಭಾವಂತ ಸಿನಿಮಾ ಛಾಯಾಗ್ರಾಹಕ. ಅವರ ಸ್ಮರಣಾರ್ಥ ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಚಿತ್ರಸಮೂಹ ಸಂಸ್ಥೆ ರಾಮಚಂದ್ರ ಛಾಯಾಗ್ರಹಣದ ಚಿತ್ರಗಳ ಪ್ರದರ್ಶನ ಮತ್ತು ವಿಚಾರ ಸಂಕಿರಣ ನಡೆಸುತ್ತಿದೆ.ಶನಿವಾರ ಸಂಜೆ 6.30ಕ್ಕೆ ‘ಔಟ್‌ಹೌಸ್’ ಚಿತ್ರ ಪ್ರದರ್ಶನ. ಭಾನುವಾರ ಬೆಳಿಗ್ಗೆ 10.30ಕ್ಕೆ ವಿಚಾರ ಸಂಕಿರಣದಲ್ಲಿ ನಿರ್ದೇಶಕ ಟಿ.ಎಸ್. ನಾಗಾಭರಣ, ಮಂಜುನಾಥ್, ಮಲ್ಲಿಕಾರ್ಜುನ (ಛಾಯಾಗ್ರಾಹಕರು), ಪತ್ರಕರ್ತ ಸದಾಶಿವ ಶೆಣೈ. ಮಧ್ಯಾಹ್ನ ‘ಬೇರು’ ಚಿತ್ರ ಪ್ರದರ್ಶನ.ಸ್ಥಳ: ಬಿಬಿಎಂಪಿ ಪ್ರಧಾನ ಕಚೇರಿ ಮುಂಭಾಗದ ಬಾದಾಮಿಹೌಸ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.