ದಕ್ಷಿಣ ಭಾರತದಲ್ಲಿ ಸ್ಥಳೀಯವಾಗಿ ತಯಾರಿಸುವ ವಿವಿಧ ಬಗೆಯ ಖಾದ್ಯಗಳನ್ನು ಉಣಬಡಿಸುವ ಆಹಾರ ಉತ್ಸವವನ್ನು ನಗರದಲ್ಲಿ ಆಯೋಜಿಸಲಾಗಿದೆ.
ಅಕ್ಟೋಬರ್ 15ರವರೆಗೆ ಈ ಆಹಾರ ಉತ್ಸವ ನಡೆಯಲಿದೆ. ಮನೆಯಲ್ಲಿ ತಯಾರಿಸಿದ ಆಹಾರಗಳಿಗೆ ಈ ಉತ್ಸವದಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಸ್ಥಳೀಯರು ತಾವೇ ಸಿದ್ಧಪಡಿಸಿದ ಖಾದ್ಯಗಳನ್ನು ಉಣಬಡಿಸಲಿದ್ದಾರೆ.
ದೊನ್ನೆ ಬಿರಿಯಾನಿ, ಘೀ ರೋಸ್ಟ್ ಪ್ರಾನ್, ಮಟನ್ ಚಾಪ್ಸ್ ಮಸಾಲಾ, ಬಿರಿಯಾನಿ ಗುಲ್ಕಂದ್, ರಸಮ್ ರಸ್ಕಲಾ ಸಿಗಲಿದೆ.
ಸ್ಥಳ–ನಗರದ ವಿವಿಧ ಸ್ಥಳಗಳಾದ ಕೋರಮಂಗಲದ 7ನೇ ಬ್ಲಾಕ್, ವೈಟ್ಫೀಲ್ಡ್ನ ಇಂಡಸ್ಟ್ರಿಯಲ್ ಏರಿಯಾ, ಸರ್ಜಾಪುರ ರಸ್ತೆಯ ಸಾಕೇತ್ ಸಿನಿಪೊಲಿಸ್ನಲ್ಲಿರುವ ಸೋಷಿಯಲ್ನಲ್ಲಿ ಆಹಾರ ಉತ್ಸವ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.