ಕೇರಳದಲ್ಲಿ ನರ್ಸ್ ಆಗಿದ್ದಅನೀಸ್ ಕಣ್ಮಣಿ ಜಾಯ್ ಅವರು ಭಾರತೀಯ ಆಡಳಿತ ಸೇವೆ ಪರೀಕ್ಷೆಯಲ್ಲಿ ಪಾಸಾಗಿ, ಕೊಡಗು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನರ್ಸ್ ಆಗಿ ಇದ್ದ ಅನುಭವವನ್ನು ಕೋವಿಡ್ ನಿಯಂತ್ರಣ ಕಾರ್ಯಕ್ರಮಕ್ಕೆ ಅವರು ಬಳಸಿಕೊಂಡಿದ್ದರಿಂದ, ಕೊಡಗು ಜಿಲ್ಲೆ ಈಗ ಕೋವಿಡ್ ಮುಕ್ತವಾಗಿದೆ. ಜನರು ಅವರನ್ನು ಸನ್ಮಾನಿಸುತ್ತಿದ್ದಾರೆ ಎಂಬ ವಿವರ ಇರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನರು ಮಹಿಳೆಯೊಬ್ಬರಿಗೆ ಹೂಗುಚ್ಛ ನೀಡಿ ಸನ್ಮಾನಿಸುವ ವಿಡಿಯೊ ಇದಾಗಿದೆ.
ಆದರೆ, ಈ ವಿಡಿಯೊ ಕೊಡಗು ಜಿಲ್ಲಾಧಿಕಾರಿಗೆ ಸಂಬಂಧಿಸಿದ್ದು ಅಲ್ಲ ಎಂದು ಆಲ್ಟ್ನ್ಯೂಸ್ ಫ್ಯಾಕ್ಟ್ಚೆಕ್ ವರದಿ ಮಾಡಿದೆ. 2019ರಲ್ಲಿ ಹಾಥರಸ್ನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ, ಸಂತ್ರಸ್ತೆಯು ಕಾನೂನು ಹೋರಾಟ ನಡೆಸಿದ್ದರು. ಅದನ್ನು ಪ್ರಶಂಸಿಸಿ ಖಾಸಗಿ ಸಂಸ್ಥೆಯೊಂದು ಅವರನ್ನು ಸನ್ಮಾನಿಸಿತ್ತು. ಆ ವಿಡಿಯೊ 2020ರ ಫೆಬ್ರುವರಿಯಲ್ಲಿ ಯುಟ್ಯೂಬ್ನಲ್ಲಿ ಪ್ರಕಟವಾಗಿತ್ತು. ಆ ವಿಡಿಯೊವನ್ನು ಕೊಡಗು ಜಿಲ್ಲಾಧಿಕಾರಿಯ ವಿಡಿಯೊ ಎಂದು ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯು ಕೋವಿಡ್ನಿಂದ ಸಂಪೂರ್ಣ ಮುಕ್ತವಾಗಿಲ್ಲ ಎಂದು ಆಲ್ಟ್ ನ್ಯೂಸ್ ಹೇಳಿದೆ. ಜಿಲ್ಲೆಯಲ್ಲಿ ಬುಧವಾರ ಸಂಜೆಯ ವೇಳೆಗೆ 438 ಕೋವಿಡ್ ಪ್ರಕರಣಗಳು ಸಕ್ರಿಯವಾಗಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.