ಬೆಂಗಳೂರು:ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಿ ಎಂದು ಸುದ್ದಿವಾಹಿನಿಯೊಂದು ಪ್ರಸಾರ ಮಾಡಿರುವ ಸುದ್ದಿ ಶೀರ್ಷಿಕೆಯ ಎರಡು ಸ್ಕ್ರೀನ್ಶಾಟ್ಗಳುಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈದ್ ಹಬ್ಬದ ಸಲುವಾಗಿ ಶ್ರೀನಗರದಲ್ಲಿ ಮತ್ತೆ ಕರ್ಫ್ಯೂ ಹೇರಿಕೆ ಮಾಡಿದ್ದರ ಬೆನ್ನಲ್ಲೇ ಈ ಸ್ಕ್ರೀನ್ಶಾಟ್ ವೈರಲ್ ಆಗಿದೆ.
ಮಿರರ್ ನೌ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಸುದ್ದಿ ಎಂದು ಈ ಸ್ಕ್ರೀನ್ಶಾಟ್ ಹರಿದಾಡಿದ್ದು, ಇದು ನಮ್ಮ ವಾಹಿನಿಯ ಸುದ್ದಿ ಅಲ್ಲ ಎಂದು ಮಿರರ್ ನೌ ಸಂಪಾದಕಿ ಫೇ ಡಿಸೋಜಾ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸ್ಕ್ರೀನ್ಶಾಟ್ ಫೋಟೊಶಾಪ್ ಮಾಡಿದ್ದಾಗಿದ್ದು, ಮಿರರ್ ನೌ ಆ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡಿಲ್ಲ ಎಂದಿದ್ದಾರೆ ಫೇ ಡಿಸೋಜಾ.
ಇದೊಂದು ಫೇಕ್ ಸ್ಕ್ರೀನ್, ಸುಳ್ಳು, ಫೋಟೊಶಾಪ್ ಮಾಡಿದ್ದು.ಇದರಲ್ಲಿ ಕೆಳಭಾಗದಲ್ಲಿರುವ Tickerಇಲ್ಲ.ನಮ್ಮ ವಾಹಿನಿಯಲ್ಲಿ ಬಳಸುವ ಫಾಂಟ್ ಇದಲ್ಲ.ಇದು ಮಿರರ್ ನೌನಲ್ಲಿ ಪ್ರಕಟವಾದ ಸುದ್ದಿ ಅಲ್ಲ ಎಂದು ಫೇ ಅವರು ಟ್ವೀಟಿಸಿದ್ದಾರೆ.
ಫೋಟೊಶಾಪ್ ಮಾಡಿರುವ ಈ ಸ್ಕ್ರೀನ್ಶಾಟ್ನಲ್ಲಿ ಕಾಣುತ್ತಿರುವ ಮಿರರ್ ನೌ ಪತ್ರಕರ್ತಪ್ರಮೋದ್ ಮಾಧವ್ ಫೋಟೊ ಮತ್ತು ಹೆಸರು, ಕೇರಳದಲ್ಲಿ ಪ್ರವಾಹ ಸುದ್ದಿಯ ವಿಡಿಯೊದ್ದಾಗಿದೆ.ಅದು ಕಾಶ್ಮೀರದಲ್ಲಿನ ವರದಿ ಅಲ್ಲ ಎಂದು ಬೂಮ್ ಲೈವ್ ಫ್ಯಾಕ್ಟ್ಚೆಕ್ ಮಾಡಿದೆ.
ಫ್ಯಾಕ್ಟ್ಚೆಕ್
ಮಿರರ್ ನೌ ವರದಿ ಮಾಡಿದ ಸುದ್ದಿಗಳನ್ನು ಬೂಮ್ ಲೈವ್ ಪರಿಶೀಲಿಸಿದ್ದು, ಈ ರೀತಿಯ ಸುದ್ದಿಯನ್ನು ಪ್ರಸ್ತುತ ಸುದ್ದಿವಾಹಿನಿ ಪ್ರಕಟಿಸಿಲ್ಲ ಎಂದಿದೆ.
2109 ಆಗಸ್ಟ್ 11ರಿಂದಲೇ ಈ ಚಿತ್ರ ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ.
ಕಾಶ್ಮೀರದ ಸಾಮಾಜಿಕ ಹೋರಾಟಗಾರ್ತಿ ಮತ್ತು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ( ಜೆಕೆಪಿಎಂ) ಪಕ್ಷದ ಸದಸ್ಯರಾಗಿರುವ ಶೆಹಲಾ ರಶೀದ್ ಅವರು ಈ ಸ್ಕ್ರೀನ್ಶಾಟ್ನ್ನು ಟ್ವೀಟ್ ಮಾಡಿದ್ದು ಇದು ಫೋಟೊಶಾಪ್ ಮಾಡಿದ ಚಿತ್ರ ಎಚ್ಚರದಿಂದಿರಿ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.