ತಪ್ಪು:ಸರ್ಕಾರಿ ನೌಕರರೇ, ಆಸ್ತಿಗಳ ಮಾಲೀಕರೇ, ತೆರಿಗೆದಾರರೇ... ನಿಮ್ಮ ಹಣವನ್ನು ಠೇವಣಿ ಇರಿಸಲು ಸಜ್ಜಾಗಿ. ನಿಮ್ಮ ಆದಾಯದ ಶೇ 18ರಷ್ಟನ್ನುಠೇವಣಿ ಇಡುವ 1963ರ ಕಾನೂನು ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ, ಎಚ್ಚರ – ಎಂಬ ವಾಟ್ಸಾಪ್ ಸಂದೇಶ ಹರಿದಾಡುತ್ತಿದೆ.
ಆದರೆ,ಇದು ಸುಳ್ಳು ಸಂದೇಶ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಪಿಐಬಿ ಟ್ವೀಟ್ ಮಾಡಿದೆ. ಸರ್ಕಾರದ ಮುಂದೆ ಇಂತಹ ಯಾವುದೇ ಪ್ರಸ್ತಾವ ಇಲ್ಲ. ಇದು ಕಪೋಲಕಲ್ಪಿತ ಸುದ್ದಿಯಾಗಿದ್ದು, ಯಾರಿಗೂ ಫಾರ್ವರ್ಡ್ ಮಾಡಬೇಡಿ ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.