ADVERTISEMENT

ಅಕಾಲಿಕ ಮಳೆ ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ನಾಸಿಕ್‌ (ಪಿಟಿಐ): ನಾಸಿಕ್‌ ಜಿಲ್ಲೆ­ಯಾದ್ಯಂತ ಆಲಿಕಲ್ಲು ಸಮೇತ ಸುರಿದ ಅಕಾಲಿಕ ಮಳೆಗೆ ವ್ಯಕ್ತಿ­ಯೊಬ್ಬ ಮೃತಪಟ್ಟಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ನಾಸಿಕ್‌, ಸಿನ್ನಾರ್‌ ತಹಸಿಲ್‌ ಸೇರಿ 40 ಗ್ರಾಮಗಳಲ್ಲಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತ­­ವಾ­ಗಿದೆ. ಕಟಾವಿಗೆ ಬಂದಿದ್ದ ಗೋದಿ, ಈರುಳ್ಳಿ  ಹಾಗೂ ತೋಟ­ಗಾರಿಕೆ ಬೆಳೆಗ­ಳಾದ  ದ್ರಾಕ್ಷಿ,  ದಾಳಿಂಬೆ ಬೆಳೆಗಳು ನೆಲಕಚ್ಚಿವೆ.

ನಾಸಿಕ್‌ ನಗರದ ಕೆಲವು ಭಾಗಗಳಲ್ಲಿ ಗುರುವಾರವು ಸಹ ಮಳೆಯಾಗುವು ಸಾಧ್ಯತೆ ಇದೆ ಎಂದು  ಹವಮಾನ ಇಲಾಖೆ ತಿಳಿಸಿದೆ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.