
ಪ್ರಜಾವಾಣಿ ವಾರ್ತೆಬಾಲಸೋರ್, ಒಡಿಶಾ (ಪಿಟಿಐ): ದೇಶಿ ನಿರ್ಮಿತ ಅಗ್ನಿ–1 ಖಂಡಾತರ ಕ್ಷಿಪಣಿಯನ್ನು ಸೋಮವಾರ ಒಡಿಶಾ ಕರಾವಳಿಯಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಪರಮಾಣು ಸಾಮರ್ಥ್ಯದ ಅಗ್ನಿ–1 ಕ್ಷಿಪಣಿಯು 9 ನಿಮಿಷ 36 ಸೆಕೆಂಡ್ಗಳಲ್ಲಿ ಸುಮಾರು 700 ಕಿ.ಮೀ. ದೂರದಷ್ಟು ಗುರಿಯನ್ನು ಕ್ರಮಿಸಬಲ್ಲ ಅತ್ಯಾಧುನಿಕ ಕ್ಷಿಪಣಿಯಾಗಿದೆ.
ಭುವನೇಶ್ವರದಿಂದ 150 ಕಿ.ಮೀ. ದೂರದಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿನ (ವೀಲರ್ ದ್ವೀಪ) ಆಂತರಿಕ ಪರೀಕ್ಷಾ ಶ್ರೇಣಿಯಲ್ಲಿರುವ ಉಡಾವಣಾ ಘಟಕದಲ್ಲಿ ಸೋಮವಾರ ಬೆಳಿಗ್ಗೆ 9.15ಕ್ಕೆ ಉಡಾವಣೆ ನಡೆಸಲಾಯಿತು ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.